Breaking News

ಮಕರ ಸಂಕ್ರಾಂತಿ ಹಿನ್ನೆಲೆ: ಸಿಂಗಸಂದ್ರದಲ್ಲಿ ಸೈಬರ್ ಅಪರಾಧ, ಡಿಜಿಟಲ್ ಅರೆಸ್ಟ್ ಕುರಿತು ಜನ ಜಾಗೃತಿ

Makar Sankranti Background: Public Awareness on Cyber ​​Crime, Digital Arrest in Singasandra

ಜಾಹೀರಾತು
IMG 20250115 WA0271

ಬೆಂಗಳೂರು, ಜ, 15; ಮಕರ ಸಂಕ್ರಾಂತಿ ಅಂಗವಾಗಿ ಕೂಡ್ಲು ಸಿಂಗ ಸಂದ್ರದ ಎ ಇ ಸಿ ಎಸ್ ಲೇ ಔಟ್ ” ಎ ” ಬ್ಲಾಕ್ ನ ಮಹಾಗಣಪತಿ ಪಾರ್ಕ್ ನಲ್ಲಿ ಆಯೋಜಿಸಿದ್ದ ಸೈಬರ್ ಅಪರಾಧ ಕುರಿತು ಜನ ಜಾಗೃತಿ, ಸಾಂಸ್ಕೃತಿಕ ಕಾರ್ಯಕ್ರಮವನ್ನು
ನ್ಯೂಸ್ ಏಜ್ ಹೆರಾಲ್ಡ್ ಪತ್ರಿಕೆ ಸಂಪಾದಕ ಎನ್.ಎ. ಚೌಧರಿ ಕಾರ್ಯಕ್ರಮ ಉದ್ಘಾಟಿಸಿದರು.

ಇತ್ತೀಚಿನ ದಿನಗಳಲ್ಲಿ ಯುವ ಸಮೂಹ, ಹಿರಿಯ ನಾಗರಿಕರನ್ನು ವಿವಿಧ ರೀತಿಯಲ್ಲಿ ಸೈಬರ್ ಅಪರಾಧಗಳು, ಡಿಜಿಟಲ್ ಅರೆಸ್ಟ್, ಸೈಬರ್ ವಂಚನೆ ಮತ್ತಿತರೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಯಾಮಾರಿಸುವ ಕುರಿತು ಎಸಿಪಿ ಡಾ. ಗೋವಿಂದ್ರನ್ ಗೋಪಾಲ್ ನೇತೃತ್ವದ ಸೈಬರ್ ಪರಿಣಿತರ ತಂಡ ಅತ್ಯಂತ ಉಪಯುಕ್ತ ಮಾಹಿತಿ ನೀಡಿತು.

ಇಡೀ ದಿನ ಯಕ್ಷಗಾನ, ಸಿಪಿಆರ್ ತರಬೇತಿ, ಉಚಿತ ವೈದ್ಯಕೀಯ ಶಿಬಿರ, ಅಗ್ನಿಶಾಮಕ ಕವಾಯತು, ಸಿಲಿಂಡರ್ ಸ್ಪೋಟದ ಬಗ್ಗೆ ಮುಂಜಾಗ್ರತಾ ಕ್ರಮಗಳು, ಮಕ್ಕಳಿಗಾಗಿ ಚಿತ್ರಕಲೆ, ರಂಗೋಲಿ ಸ್ಪರ್ಧೆ, ನೃತ್ಯ ಹಾಗು ಗಾಯನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ಮಹಾಲಕ್ಷ್ಮಿ ಮತ್ತು ಲೋಕೇಶ್ ಅವರು ಪ್ರೋತ್ಸಾಹ ನೀಡಿದರು. ಜೀವನಶೈಲಿ ಮತ್ತು ಯೋಗಕ್ಷೇಮ ನಿರ್ವಹಣಾ ತಜ್ಞರಾದ ಡಾ. ಮಾನಸ ಮತ್ತಿತರರು ಉಪಸ್ಥಿತರಿದ್ದರು.

About Mallikarjun

Check Also

screenshot 2025 10 15 21 38 17 03 6012fa4d4ddec268fc5c7112cbb265e7.jpg

ಸಂಘಟಕಿ ಜ್ಯೋತಿ ಗೊಂಡಬಾಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ

Organizer Jyoti Gondbal is the District Women's Congress President. ಕೊಪ್ಪಳ: ಜಿಲ್ಲೆಯ ಆಡಳಿತರೂಢ ಕಾಂಗ್ರೆಸ್ ಪಕ್ಷದ ಮಹಿಳಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.