Breaking News

ಹನೂರು ಪಟ್ಟಣದಲ್ಲಿ ಕುವೆಂಪುಜಯಂತಿಯನ್ನು ಸರಳವಾಗಿ ಆಚರಿಸಲಾಯಿತು

Kuvempu Jayanti was celebrated simply in Hanur town

IMG 20241230 WA0257

ವರದಿ : ಬಂಗಾರಪ್ಪ .ಸಿ .

ಹನೂರು : ನಮ್ಮ ಆತ್ಮಸಾಕ್ಷಿಗಿಂತ ಜೋತಿಷ್ಯ ಸಾಸ್ತ್ರ ಮುಖ್ಯ ಎಂದವರು ಕುವೆಂಪು ,ಅವರು ಒಂದು ಜಾತಿಗೆ ಸಿಮಿತವಾದ ಕೃತಿ ರಚಿಸಿಲ್ಲ ಮನುಜ ಮತಕ್ಕೆ ಸೀಮಿತ ಮಾಡಿದವರು ಎಂದು ಪಟ್ಟಣ ಪಂಚಾಯತಿ ಉಪಾಧ್ಯಕ್ಷರಾದ ಹರೀಶ್ ಕುಮಾರ್ ತಿಳಿಸಿದರು.
ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯಲ್ಲಿನ ವಸತಿ ಗೃಹದಲ್ಲಿ ಮಾತನಾಡಿದ ಅವರು ಹಲವಾರು ದಾರ್ಶನಿಕರು ಯಾರು ಸಹ ನಮ್ಮ ಜಯಂತಿಯನ್ನು ಮಾಡಲು ಹೇಳಿಲ್ಲ
ದಾರ್ಸನಿಕರ ಕೃತಿಗಳನ್ನು ಬದಲಾಯಿದರೆ ಹೋರಾಟ ಮಾಡಬೇಕಾಗುತ್ತದೆ , ಎಲ್ಲಾ ದಾರ್ಸನಿಕರು ನಮಗೆ ಶ್ರೇಷ್ಠವೆ ಅದನ್ನು ತಿರುಚಲು ಹೋಗಬಾರದು ,ರವಿ ಕಾಣದನ್ನು ಕವಿ ಕಂಡರು ಇಂತಹ ಮಹಾನ್ ವ್ಯಕ್ತಿಗಳ ಸ್ಮರಣೆಯನ್ನು ಮಾಡುವುದು ನಮ್ಮ ಸೌಭಾಗ್ಯವಾಗಿದೆ ಎಂದರು.

ತಹಶಿಲ್ದಾರರಾದ ಗುರುಪ್ರಸಾದ್ ಮಾತನಾಡಿ ಕನ್ನಡ
ಸಾಹಿತ್ಯದಲ್ಲಿ ಅನೇಕ ಮಹಾ ಪುರುಷರಿದ್ದಾರೆ ಅವರಲ್ಲಿ ಪ್ರಮುಖರಾದವರು ಕುವೆಂಪು ಇವರ ವಿಶ್ವಮಾನವ ವೈಚಾರಿಕತೆ ಯ ನೈತಿಕತೆಯನ್ನು ಬೆಳೆಸಿಕೊಂಡರೆ ನಮಗೆ ಸ್ಪೂರ್ತಿಯಾಗುತ್ತದೆ ,ಇದರಿಂದ ಪ್ರಪಂಚವು ಮನುಜಮತ ವಾಗುವ ನಿರೀಕ್ಷೆಯಾಗಿದೆ ಕುವೆಂಪು ಜಯಂತಿಯನ್ನು ಈಗಾಗಲೇ ಹಲವಾರು ಜನರು ಆಚರಿಸುತ್ತಾರೆ ,ಮುಂದಿನ ದಿನಗಳಲ್ಲಿ ಎಲ್ಲಾ ಜನಾಂಗದವರು ಸೇರಿ ಆಚರಿಸುವುದು ಒಳಿತು ಎನ್ನಲಾಗಿದೆ ಎಂದರು.

ಬಿಇಒ ಗುರುಸಿದ್ದಪ್ಪ ಮಾತನಾಡಿ ಬಾಲ್ಯದಲ್ಲೇ ಅವರ ಭಾಷಣವನ್ನು ಕಂಡವರಲ್ಲಿ ನಾನು ಸಹ ಒಬ್ಬರು ಜಗದ,ಯುಗದ ಕವಿಗಳಾದ ಕುವೆಂಪು ಅವರ ಜನ್ಮ ದಿನಾಚರಣೆ ಮಾಡುತ್ತಿರುವುದು ಬಹಳ ಸಂತೋಷ ,ಕುವೆಂಪು ವಿಶ್ವಮಾನವರಾಗಿದ್ದರು ,ಮೈಸೂರಿನಲ್ಲಿ ಪ್ರತಿ ಬೀದಿಗೂ ಅವರದೆ ಕೃತಿಗಳಲ್ಲಿರುವ ಹೆಸರನ್ನು ಆಯ್ದು ಇಡಲಾಗಿದೆ ಎಂದರು.

ಮುಖ್ಯ ಭಾಷಣಕಾರರಾದ ಶ್ರೀ ಯುತ ಕಂದವೇಲು ಮಾತನಾಡಿ ಕುವೆಂಪು ಎಂದರೆ ಸರಳ ವ್ಯಕ್ತಿತ್ವದ ಮೇಲೆ ಜೀವಿಸಿದವರು ,ಇಡಿ ಪ್ರಪಚವೆ ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಮನುಜಮತವಾಗಿ ನಿಲ್ಲುತ್ತದೆ ,ಬಾಲ್ಯದಲ್ಲಿ ಅವರ ಮನೆಯಲ್ಲಿಯೇ ಇದ್ದುವ ಶಿಕ್ಷಣ ಪಡೆದು ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಆಶ್ರಯ ಪಡೆದು ಹೆಚ್ಚು ಓದಿದ ನಂತರ‌ ಆಂಗ್ಲ ಬಾಷೆಯಲ್ಲಿ ಪ್ರವೀಣರಾಗಿದ್ದರು , ಕನ್ನಡದ ಮೊಟ್ಟಮೊದಲ ಎಲ್ಲಾ ಪ್ರಶಸ್ತಿಯನ್ನು ಪಡೆದುಕೊಳ್ಳುಲು ಇವರು ಯಶಸ್ವಿಯಾದರು , ರಾಮಾಯಣದಿಂದಿಡಿದು ಇಂದಿನ‌ ಪ್ರಸ್ತುತ ಕತೆಗಳಲ್ಲಿ ಅವರು ಬರೆದನ್ನು ನಾವು ಕಾಣಬಹುದು , ಅಂದಿನ ಕಾಲ ಘಟ್ಟದಲ್ಲಿ ಇಂಗ್ಲಿಷ್ ವ್ಯಾಮೋಹಕ್ಕೆ ಕನ್ನಡವು ನಶಿಸಿದ ಸಂದರ್ಭದಲ್ಲಿ ಪುನಶ್ಚೇತನ ನೀಡಿದ ವ್ಯಕ್ತಿಯಿವರು .
ಮನುಜಮತ, ವಿಶ್ವಪಥ ವೆ ಮೂಲ ದ್ಯೇಯೆ ಎಂದವರು , ಪರಿಸರವನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖರಾದವರು ,ಪ್ರತಿ ವಸ್ತುಗಳನ್ನು ಬಳಸಿ ಕವನ ಬರೆಯುವಲ್ಲಿ ಮುಂಚುಣಿಯವರಾಗಿದ್ದರು , ಯಾವುದೇ ಸಭೆ ಸಮಾರಂಭಗಳನ್ನು ಯಶಸ್ವಿಯಾಗಿ ನಡೆಸುವವರು , ತಮ್ಮ ಮಗನ ಮದುವೆಯನ್ನು ಮಂತ್ರ ಮಾಂಗಲ್ಯ ಮಾಡುವುದರ ಮೂಲಕ ಸರಳ ಮದುವೆಗೆ ನಾಂದಿಯಾಡಿದವರು.

ಇದೇ ಸಂದರ್ಭದಲ್ಲಿ ಪಟ್ಟಣಪಂಚಾಯಿತಿ ಉಪಾಧ್ಯಕ್ಷರಾದ ಆನಂದ್ ಕುಮಾರ್ , ಸದಸ್ಯರುಗಳಾದ ಗಿರೀಶ್ ಕುಮಾರ್ ,ಸಂಪತ್ ಕುಮಾರ್ , ವೆಂಕಟೇಗೌಡರು,ಮಹೇಶ್ ,ಸುದೇಶ್, ಸ್ವಾಮಿ ವ,ಒಕ್ಕಲಿಗರ ಸಂಘದ ನಿರ್ದೇಕರಾದ ಮಂಜೇಶ್ ,ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಂಗಾರಪ್ಪ. ಆರ್ ಐ ಶೇಷಣ್ಣ , ರಮೇಶ್ ,ನಾಗೇಶ್ ಗೌಡ್ರು , ಯುವಕರಾದ ವೆಂಕಟೇಶ್ ಕಾರ್ತಿಕ್ ನೌಕರರು ಸೇರಿದಂತೆ ಇನ್ನಿತರರು ಹಾಜರಿದ್ದರು.

About Mallikarjun

Check Also

screenshot 2025 12 17 18 45 28 37 e307a3f9df9f380ebaf106e1dc980bb6.jpg

ಉದ್ಯೋಗ ಖಾತ್ರಿ ಸೇರಿ ಮಹತ್ವದ ಯೋಜನೆಗಳ ಬದಲಾವಣೆಯಿಂದ ಬಡವರಿಗೆ ಅನ್ಯಾಯ: ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕ ಡಾ. ಆನಂದ್ ಕುಮಾರ್

ಉದ್ಯೋಗ ಖಾತ್ರಿ ಸೇರಿ ಮಹತ್ವದ ಯೋಜನೆಗಳ ಬದಲಾವಣೆಯಿಂದ ಬಡವರಿಗೆ ಅನ್ಯಾಯ: ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕ ಡಾ. ಆನಂದ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.