Breaking News

ಮುಕ್ತಿದಾಮದ ಮಹಾಮಾತೆಯಾದ ಶ್ರೀಮತಿ ಆಶಾ ವೆಂಕಟಸ್ವಾಮಿ ಸನ್ಮಾನ

Honorable Mrs. Asha Venkataswamy, the great mother of Muktidam

ಜಾಹೀರಾತು

ಮುಕ್ತಿದಾಮದ ಮಹಾಮಾತೆಯಾದ ಶ್ರೀಮತಿ ಆಶಾ ವೆಂಕಟಸ್ವಾಮಿ ಇವರು ವಿಶೇಷವಾಗಿ ಅನಾಥ ಹಾಗೂ ಬಡ ಸುಮಾರು 5000 ಶವಗಳಿಗೆ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ ಅಂತ್ಯ ಸಂಸ್ಕಾರಕ್ಕೆ ಬಹಳಷ್ಟು ಸಹಾಯ ನೀಡಿದ್ದಾರೆ ಇವರು ಆಂಬುಲೆನ್ಸ್ ಡ್ರೈವರ್ ಆಗಿ ಸಹ ಕೆಲಸ ನಿರ್ವಹಿಸಿದ್ದಾರೆ ಇಂತಹ ಕೆಲಸ ಮಾಡುವುದಕ್ಕೆ ಅವರ ಗಂಡ ಹಾಗೂ ಅತ್ತೆ ಮಾವ ಮನೆಯವರು ಸಹ ಅವರನ್ನು ಹೊರಹಾಕಿ ಕೈಬಿಟ್ಟಿದ್ದರು ತಮ್ಮ ಸ್ವ ಇಚ್ಛಾಶಕ್ತಿಯಿಂದ ಅನೇಕ ಅನಾಥ ಶಿವಗಳಿಗೆ ಅಂತ್ಯ ಸಂಸ್ಕಾರ ಮಾಡುತ್ತಾ ಬಂದಿರುವ ಇವರು ರಾಮನಗರ ಜಿಲ್ಲೆಯಿಂದ ವಿಶೇಷ ಅತಿಥಿಯಾಗಿ ಬಂದಿದ್ದರು ಅವರಿಗೆ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಚಿಕ್ಕಪ್ಪ ಹಾದಿಮನಿ ವಹಿಸಿಕೊಂಡಿದ್ದರು, ಮಾಜಿ ಸೈನಿಕ ಎಂ ಡಿ ಚಿಕ್ಕಣ್ಣನವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಶ್ರೀ ವಿಷ್ಣುಕಾಂತ ಬೆನ್ನೂರ ಒಂದನಾರ್ಪನೆ ಮಾಡಿದರು ಶ್ರೀ ಶಂಕರ ಕುಸಗುರ ಅವರು ನಿರೂಪಣೆ ಮಾಡಿದರು.
ಸಮಾರಂಭದಲ್ಲಿ ಸಲಹಾ ಸಮಿತಿಯ ಸದಸ್ಯರು, ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಶಾಸಕ ಶ್ರೀ ಬಸವರಾಜ ಶಿವಣ್ಣನವರ, ಮಾಜಿ ಶಾಸಕ ಸುರೇಶ ಗೌಡ ಪಾಟೀಲ ,ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಶ್ರೀ ರವಿ ಕೋರವರ ತಾಲೂಕ ತಹಸೀಲ್ದಾರರು, ಪುರಸಭೆ ಮುಖ್ಯ ಅಧಿಕಾರಿಗಳು, ಪುರಸಭೆಯ ಚುನಾಯಿತ ಸದಸ್ಯರು ಸುರೇಶ ಅಸಾದಿ, ಎಸ್ ಎನ್ ಯಮನಕ್ಕನವರ, ಕಲಾವತಿ ಬಡಿಗೇರ, ಪಕೀರಮ್ಮ ಚಲವಾದಿ, ಸುಭಾಸ ಮಾಳಗಿ, ರಾಮಣ್ಣ ಕೋಡಿಹಳ್ಳಿ, ಹೊನ್ನುರಪ್ಪ ಕಾಡಸಾಲಿ ಇನ್ನಿತರರು ಉಪಸ್ಥಿತರಿದ್ದರು

About Mallikarjun

Check Also

screenshot 2025 07 30 13 52 28 88 6012fa4d4ddec268fc5c7112cbb265e7.jpg

ಕ್ರಿಸ್ತರಾಜ ವಿದ್ಯಾಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆದ “ಗ್ರೀನ್ ಕ್ಯಾಂಪಸ್ ಕ್ಲೀನ್ ಕ್ಯಾಂಪಸ್” ಉದ್ಘಾಟನಾ ಕಾರ್ಯಕ್ರಮ.

The inauguration program of "Green Campus Clean Campus" was successfully held at Christaraja Educational Institution. …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.