Breaking News

ಗಂಗಾವತಿ:ಅಕ್ರಮವಾಗಿ ಮರಂ ಸಾಗಾಣಿಕೆ ಮಾಡಲು ಹಣ ಪಡೆದು ಡೀಲ್ ಮಾಡಿಕೊಂಡು ೫೦ ಸಾವಿರ ಪಡೆದ ಆರೋಪದಲ್ಲಿತಹಶೀಲ್ದಾರ್ ಮಂಜುನಾಥ ಸ್ವಾಮಿಹಾಗುಖಾಸಗಿಕಂಪ್ಯೂಟರ್ ಆಪರೇಟರ್ ರಾಜುಎಂಬುವರುಲೋಕಾಯುಕ್ತ ಪೋಲೀಸರ ಬಲೆಗೆ

Gangavati: Tehsildar Manjunatha Swamihagukhasagi computer operator Raju was caught by Lokayukta police on the charge of getting 50,000 after making a deal by getting money for illegally transporting maram.

ಜಾಹೀರಾತು

ಗಂಗಾವತಿ: ವೆಂಕಟಗಿರಿ ಭಾಗದಲ್ಲಿ ಮರಂ ಅಕ್ರಮವಾಗಿ ಸಾಗಾಣಿಕೆ ಮಾಡಲು ಹಣ ಪಡೆದು ಡೀಲ್ ಮಾಡಿಕೊಂಡು ೫೦ ಸಾವಿರ ಪಡೆದ ಆರೋಪದಲ್ಲಿ ತಹಶೀಲ್ದಾರ್ ಮಂಜುನಾಥ ಸ್ವಾಮಿ ಭೋಗಾವತಿ ಹಾಗೂ ಖಾಸಗಿ ಕಂಪ್ಯೂಟರ್ ಆಪರೇಟರ್ ರಾಜು ಎಂಬುವರನ್ನು ಲೋಕಾಯುಕ್ತ ಪೋಲೀಸರು ನ.೧೮ರ ಶನಿವಾರ ತಡರಾತ್ರಿ ಬಂಧಿಸಿ ಅವರಿಂದ ಹಣ ಹಾಗೂ ಕೆಲ ದಾಖಲೆ ವಶಕ್ಕೆ ಪಡೆದ ಪ್ರಕರಣ ಶನಿವಾರ ರಾತ್ರಿ ನಡೆದಿದೆ.

ತಾಲೂಕಿನ ವೆಂಕಟಗಿರಿ ಭಾಗದಲ್ಲಿ ಮರಂ(ಕೆಂಪುಮಣ್ಣು) ಸಾಗಾಣಿಕೆ ಮಾಡಲು ವ್ಯಕ್ತಿಯರ‍್ವನಿಂದ ಖಾಸಗಿ ಕಂಪ್ಯೂಟರ್ ಆಪರೇಟರ್ ರಾಜು ಎಂಬ ವ್ಯಕ್ತಿ ಒಂದು ಲಕ್ಷ ರೂ.ಡೀಲ್ ಮಾಡಕೊಂಡು ಇದರಲ್ಲಿ ೫೦ ಸಾವಿರ ರೂ.ಗಳನ್ನು ಪಡೆದು ತಹಶೀಲ್ದಾರ್ ಮಂಜುನಾಥ ಸ್ವಾಮಿ ಭೋಗಾವತಿ ಅವರಿಗೆ ಕೊಡುವ ಸಂರ‍್ಭದಲ್ಲಿ ದೂರುದಾರ ನೀಡಿದ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಡಿವೈಎಸ್ಪಿ ಸಲೀಂ ಪಾಷಾ ನೇತೃತ್ವದಲ್ಲಿ ದಾಳಿ ನಡೆಸಿ ಹಣದ ಸಮೇತ ತಹಶೀಲ್ದಾರ್ ಮಂಜುನಾಥ ಸ್ವಾಮಿ ಭೋಗಾವತಿ ಹಾಗೂ ಕಂಪ್ಯೂಟರ್ ಆಪರೇಟರ್ ರಾಜು ಅವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.


About Mallikarjun

Check Also

ಕಮಲ್ ಹಾಸನ್ ಕ್ಷಮೆ ಕೇಳುವವರೆಗೂಅವರ ಚಿತ್ರಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು: ಬಳ್ಳಾರಿ ರಾಮಣ್ಣ ನಾಯಕ

Kamal Haasan’s films should be banned in the state until he apologizes: Ballari Ramanna Nayak …

Leave a Reply

Your email address will not be published. Required fields are marked *