Breaking News

ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷಸ್ಥಾನಕ್ಕೆತಾಲೂಕಿನ ಸಿಂಗನಾಳ ಗ್ರಾಮದ ರುದ್ರಪ್ಪ ಬಸಾಪಟ್ಟಣ ಅವರ ಹೆಸರನ್ನು ಶಿಫಾರಸ್ಸು ಮಾಡಲು ಒತ್ತಾಯಿಸಿ ಮನವಿ

Request to recommend the name of Rudrappa Basapatna of Singanala village of the taluk for the chairmanship of the State Sheep and Wool Development Corporation.


ಕಾರಟಗಿ : ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ತಾಲೂಕಿನ ಸಿಂಗನಾಳ ಗ್ರಾಮದ ರುದ್ರಪ್ಪ ಬಸಾಪಟ್ಟಣ ಅವರ ಹೆಸರನ್ನು ಶಿಫಾರಸ್ಸು ಮಾಡುವಂತೆ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರಿಗೆ ಪಟ್ಟಣದ ಅವರ ಗೃಹ ಕಚೇರಿಗೆ ಭೇಟಿ ನೀಡಿ ನೂರಾರು ಕುರಿಗಾಹಿಗಳು ಮಂಗಳವಾರ ಮನವಿ ಪತ್ರ ಸಲ್ಲಿಸಿದರು.
ಬಳಿಕ ಕುರಿಗಾಹಿಗಳು ಮಾತನಾಡಿ ರುದ್ರಪ್ಪ ಅವರು ನೂರಾರು ಕುರಿಗಳನ್ನು ಸಾಕಿದ್ದು ಕುರಿಗಾಹಿಗಳ ಕಷ್ಟ-ನಷ್ಟವನ್ನು ತಿಳಿದವರು. ಜತೆಗೆ ಯುವಮುಖಂಡರು ಹಾಗೂ ಕುರಿಗಾಹಿಗಳು ಯವುದಾದರೂ ತೊಂದರೆಯಲ್ಲಿ ಸಿಲುಕಿಕೊಂಡರೆ ಕೂಡಲೇ ಸ್ಪಂದನೆ ಮಾಡುತ್ತಾರೆ. ಹೀಗಾಗಿ ಅಂತ ವ್ಯಕ್ತಿಯನ್ನು ನಿಗಮಕ್ಕೆ ಆಯ್ಕೆ ಮಾಡುವುದರಿಂದ ಕುರಿಗಾಹಿಗಳಿಗೆ ಅನುಕೂಲವಾಗಲಿದೆ. ಅವರ ಸೇವೆಯನ್ನು ರಾಜ್ಯಾದ್ಯಂತ ಮಾಡಲು ಅವಕಾಶ ನೀಡಬೇಕೆಂದು ತಿಳಿಸಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಬೂದಗುಂಪಾ, ಹಿರಿಯ ಮುಖಂಡರು, ಕಾರ್ಯಕರ್ತರು ಸೇರಿ ನೂರಾರು ಕುರಿಗಾಹಿಗಳು ಇದ್ದರು.

ಜಾಹೀರಾತು

About Mallikarjun

Check Also

ಕಮಲ್ ಹಾಸನ್ ಕ್ಷಮೆ ಕೇಳುವವರೆಗೂಅವರ ಚಿತ್ರಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು: ಬಳ್ಳಾರಿ ರಾಮಣ್ಣ ನಾಯಕ

Kamal Haasan’s films should be banned in the state until he apologizes: Ballari Ramanna Nayak …

Leave a Reply

Your email address will not be published. Required fields are marked *