ತೆರಿಗೆ ನೋಟೀಸ್ ವಿರುದ್ಧ- ಜು. 23 ರಿಂದ ಹಾಲು, ಬೇಕರಿ ಉತ್ಪನ್ನಗಳು, ಬೀಡಿ, ಸಿಗರೇಟು ಮಾರಾಟವನ್ನು ಬಂದ್ ಮಾಡುವುದಾಗಿ ಎಚ್ಚರಿಕೆ
ಬೆಂಗಳೂರು,ಜು.15: ವಾರ್ಷಿಕ 40 ಲಕ್ಷ ವಹಿವಾಟು ನಡೆಸಿರುವ ಸಣ್ಣ ಉದ್ದಿಮೆದಾರರಿಗೆ ಏಕಾಏಕಿ ನೋಟೀಸ್ ಜಾರಿಗೊಳಿಸಿರುವ ವಾಣಿಜ್ಯ ತೆರಿಗೆ ಇಲಾಖೆ ಕ್ರಮವನ್ನು ವಿರೋಧಿಸಿ ಇದೇ 23 ರಿಂದ ಎರಡು ದಿನಗಳ ಕಾಲ ಬಂದ್ ಆಚರಿಸಲು ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು ನಿರ್ಧರಿಸಿದೆ. ಹಾಲು, ಬೇಕರಿ ಉತ್ಪನ್ನಗಳು, ಬೀಡಿ, ಸಿಗರೇಟು ಮಾರಾಟವನ್ನು ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದೆ.
Karnataka State Workers' Council warns of two-day state-wide milk, bakery product sale ban from July 23 against the Centre, which is issuing notices to pay crores of rupees in taxes
ಸಭೆಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಅಧ್ಯಕ್ಷ ರವಿ ಶೆಟ್ಟಿ ಬೈಂದೂರು ಮಾತನಾಡಿ, ಜು. 23 ಮತ್ತು 24 ರಂದು ಬೇಕರಿ, ಬೀಡ ಅಂಗಡಿಗಳು, ಕೇಂದ್ರದ ವಿರುದ್ಧ ಇಡೀ ರಾಜ್ಯದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸುತ್ತೇವೆ.
ನಂತರ 25 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸುತ್ತೇವೆ. ನಮ್ಮ ತಾತ, ಮುತ್ತಾತನ ಕಾಲದಿಂದ ಅಂಗಡಿ, ಮುಂಗಟ್ಟುಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಆದರೆ ಯಾವುದೇ ಮುನ್ಸೂಚನೆ ನೀಡದೇ ನೋಟೀಸ್ ನೀಡಿರುವುದು ಸರಿಯಲ್ಲ. ನಮ್ಮ ಅಂಗಡಿ ಎರಡರಿಂದ ಹತ್ತು ಲಕ್ಷ ರೂಪಾಯಿ ಬೆಲೆ ಬಾಳುತ್ತದೆ. ಆದರೆ ಕೋಟ್ಯಂತರ ತೆರಿಗೆ ಪಾವತಿಸುವಂತೆ ಸೂಚಿಸಿರುವುದು ಸರಿಯಲ್ಲ ಎಂದರು.
ವಾಣಿಜ್ಯ ತೆರಿಗೆ ಇಲಾಖೆಯಿಂದ ಸಣ್ಣ ಉದ್ಯಮಿದಾರರಿಗೆ ಕೋಟ್ಯಾಂತರ ರೂಪಾಯಿ ತೆರಿಗೆ ಪಾವತಿಸುವಂತೆ ಶೋಕಾಸ್ ನೋಟಿಸ್ ಕೊಟ್ಟಿರುವುದು ಕಾನೂನು ಬಾಹಿರ. ಕೇಂದ್ರ ಸರ್ಕಾರ ಸಣ್ಣ ಉದ್ದಿಮೆದಾರರ ವಿರೋಧಿ ನೀತಿ ಅನುಸರಿಸುತ್ತಿದ್ದು, ನಮಗೆ ನ್ಯಾಯ ಸಿಗುವ ತನಕ ಹೋರಾಟ ನಡೆಸುತ್ತೇವೆ ಎಂದು ರವಿ ಶೆಟ್ಟಿ ಬೈಂದೂರು ಹೇಳಿದರು.
ಚಾಲಕರ ಸಂಘದ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಮಾತನಾಡಿ, ಜಿ.ಎಸ್.ಟಿ ಮಂಡಳಿ ಅಧ್ಯಕ್ಷರೂ ಆಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡಲೇ ಮಧ್ಯಪ್ರವೇಶಿಸಿ ನೋಟಿಸ್ ಹಿಂಪಡೆಯಬೇಕು. ಜಿ.ಎಸ್.ಟಿ ಮಂಡಳಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ ತಕ್ಷಣವೇ ಸಣ್ಣ ಉದ್ದಿಮದಾರರ ಪರವಾದ ತೀರ್ಮಾನ ತೆಗೆದುಕೊಳ್ಳಬೇಕು. ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ನಿರ್ಮಲಾ ಸೀತಾರಾಮನ್ ಉದ್ದಿಮೆದಾರರ ಪರವಾಗಿರಬೇಕು. ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ, ಇಡೀ ದೇಶಕ್ಕೆ ಅನ್ವಯಿಸುತ್ತದೆ. ನಮ್ಮ ಹಿತಾಸಕ್ತಿಗೆ ವಿರುದ್ಧವಾಗಿ ಕ್ರಮ ಕೈಗೊಂಡರೆ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದರು.
ಸಭೆಯಲ್ಲಿ ಕನ್ನಡ ಒಕ್ಕೂಟದ ಅಧ್ಯಕ್ಷ ನಟರಾಜ್ ಬೊಮ್ಮಸಂದ್ರ,, ಕನ್ನಡ ಭೂಷಣ, ತೆರಿಗೆ ಮಾಹಿತಿದಾರ ಸುಬ್ರಮಣ್ಯ, ಗೋವಿಂದ ಬಾಬು ಪೂಜಾರಿ, ಪೂಜಾಶೆಟ್ಟಿ, ಮುರುಳಿ, ಕೃಷ್ಣ, ಪ್ರಕಾಶ್ ಶೆಟ್ಟಿ, ಶಶಿಧರ್ ಗೌಡ, ನವೀನ್ ಕುಮಾರ್ ಹೆಗಡೆ, ರಾಜ್ಯ ಹೋಟೆಲ್ ಸಂಘದ ಅಧ್ಯಕ್ಷ ಜಿ ಕೆ ಶೆಟ್ಟಿ, ಶೋಭಾ ಗೌಡ, ನಾಗರಾಜ್, ಅನೂಪ್, ಪ್ರದೀಪ್, ಸುರೇಂದ್ರ ಶೆಟ್ಟಿ, ಶೈಲೇಶ್ ಪೂಜಾರಿ, ಮಣಿಕಂಠ ಮತ್ತಿತರರು ಉಪಸ್ಥಿತರಿದ್ದರು.
Koram and Korach are in the 101st Scheduled Caste List, and efforts to create division in the community are not allowed: All Karnataka Korach Mahasabha
ಬೆಂಗಳೂರು,ಜು.9: ರಾಜ್ಯ ಸರ್ಕಾರದ 101 ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಆರ್ಟಿಕಲ್ 53 ರಲ್ಲಿ ಕೊರಚ, 54 ರಲ್ಲಿ ಕೊರಮ ಸಮುದಾಯವಿದೆ. ಇವರೆಡು ಪ್ರತ್ಯೇಕ ಸಮುದಾಯಗಳಾಗಿದ್ದು, ಒಳಮೀಸಲಾತಿ ವರ್ಗಿಕರಣದ ಸಂದರ್ಭದಲ್ಲಿ ಕೊರಚ ಸಮುದಾಯದ ಪ್ರತಿನಿಧಿಗಳ ಅಭಿಪ್ರಾಯ ಪಡೆದು ಅವರ ಸಲಹೆಗಳನ್ನು ಪರಿಗಣಿಸಿ ಒಳಮೀಸಲಾತಿಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕೆಂದು ಅಖಿಲ ಕರ್ನಾಟಕ ಕೊರಚ ಮಹಾಸಭಾ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ಅಧ್ಯಕ್ಷ ಆದರ್ಶ್ ಎಲ್ಲಪ್ಪ, ಗಾಂಧಿಭವನದಲ್ಲಿ ಈ ತಿಂಗಳ 5 ರಂದು ನಡೆದ ಅಲೆಮಾರಿ ಸಭೆಯಲ್ಲಿ ಸೂಕ್ಷ್ಮ ಅತಿ ಸೂಕ್ಷ್ಮ ಸಮುದಾಯಕ್ಕೆ ಸೇರಿದ ಕೊರಚ ಸಮುದಾಯದವರನ್ನು ಕೈಬಿಟ್ಟು ಮಾಜಿ ಸಚಿವ ಎಚ್.ಆಂಜನೇಯ ನೇತೃತ್ವದಲ್ಲಿ ಸಭೆ ನಡೆದಿದ್ದು, ಇದು ಖಂಡನೀಯ. ಆದರೆ ನಂತರ ಸ್ವತಃ ಎಚ್. ಆಂಜನೇಯ ಅವರು ಎಲ್ಲರನ್ನೂ ಒಟ್ಟೂಗೂಡಿಸಿಕೊಂಡು ಸಧ್ಯದಲ್ಲಿಯೇ ಇನ್ನೊಂದು ಸಭೆ ಮಾಡಿ ಅಲೆಮಾರಿ ಅಭಿವೃದ್ಧಿ ಮತ್ತು ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗಿಕರಣದ ಬಗ್ಗೆ ಚರ್ಚಿಸುವುದಾಗಿ ಆಶ್ವಾಸನೆ ನೀಡಿದ್ದಾರೆ. ಇದಕ್ಕೆ ನಮ್ಮ ಬೆಂಬಲವಿದ್ದು, ಇನ್ನು ಮುಂದೆ ನಮ್ಮಲ್ಲಿ ಒಡಕು ಮೂಡಿಸುವ ಪ್ರಯತ್ನವನ್ನು ಮಾಜಿ ಸಚಿಚವರು ಮಾಡಬಾದು ಎಂದರು.
ಗಾಂಧಿ ಭವನದ ಸಭೆಯಲ್ಲಿ ಕೊರಚ ಮತ್ತು ಕೊರಮ ಸಮುದಾಯದ ನಾಯಕರನ್ನು ನಿರ್ಲಕ್ಷಿಸಲಾಗಿತ್ತು. ಈ ಕಾರಣದಿಂದ ಸಭೆಯಲ್ಲಿ ಮಾತಿನ ಚಕಮಕಿ ನಡೆಯಿತು. ಗದ್ದಲದ ನಂತರ ನನ್ನನ್ನು ವೇದಿಕೆಗೆ ಆಹ್ವಾನಿಸಿದರು. ಆದರೆ ಕಳೆದ 2016ರಲ್ಲಿ ಸಿದ್ಧರಾಮಯ್ಯ ಸರ್ಕಾರ 101 ಪ.ಜಾತಿಗಳಲ್ಲಿ 51 ಅಲೆಮಾರಿ ಜಾತಿಗಳನ್ನು ಗುರುತಿಸಿ ಪಟ್ಟಿ ಸಿದ್ಧಪಡಿಸಿದ್ದರು. ಕೊರಚ ಮತ್ತು ಕೊರಮ ಸಮುದಾಯಗಳು ಸಹ ಈ ಪಟ್ಟಿಯಲ್ಲಿದ್ದ ಬಗ್ಗೆ ದಾಖಲೆಗಳಿವೆ. ಆದರೆ ಪಟ್ಟಿ ಹೊರಗಡೆ ಬರುವುದಕ್ಕಿಂತ ಮುಂಚೆ ಕೆಲವು ಅಧಿಕಾರ ಶಾಹಿಗಳ ಕುಮ್ಮಕ್ಕಿನಿಂದ ಸ್ವಾರ್ಥಕ್ಕಾಗಿ ಅಂದಿನ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಅವರು ಈ ಕೊರಚ ಮತ್ತು ಕೊರಮ ಸಮುದಾಯವನ್ನು ಅಲೆಮಾರಿ ಪಟ್ಟಿಯಿಂದ ಕೈಬಿಟ್ಟು ಕೇವಲ 49 ಅಲೆಮಾರಿ ಸಮುದಾಯಗಳ ಜಾತಿ ಪಟ್ಟಿ ಘೋಷಿಸಿದ್ದರು.
ನಂತರ ಈ ಕಿಡಿಗೇಡಿತನವನ್ನು 2018ರಲ್ಲಿ ಪ್ರಿಯಾಂಕ್ಖರ್ಗೆ ಯಾವುದೇ ಸ್ವಾರ್ಥವಿಲ್ಲದೇ ಸರಿಪಡಿಸಿದ್ದರು. ಸಾಮಾಜಿಕ ಕಳಂಕ, ಅಪಮಾನಕ್ಕೊಳಗಾದ ಮೂಲ ಅಲೆಮಾರಿ, ಅಪರಾಧಿತ ವಿಮುಕ್ತ ಬುಡಕಟ್ಟಿನ ಕೊರಚ ಮತ್ತು ಕೊರಮ ಸಮುದಾಯವನ್ನು ಸೇರ್ಪಡೆ ಆದೇಶ ಮಾಡಿ 51 ಅಲೆಮಾರಿ ಜಾತಿಗಳನ್ನು ಗುರುತಿಸಿ ಪಟ್ಟಿ ತಯಾರಿಸಿದ್ಧಾರೆ. 2022ರಲ್ಲಿ ಇದೇ ಅಭಿವೃದ್ಧಿ ಕೋಶವು ನಂತರ ನಿಗಮವಾಗಿ ಪರಿವರ್ತನೆ ಮಾಡಲಾಯಿತು ಎಂದರು.
ಪಟ್ಟಿಯಲ್ಲಿರುವ ಹಲವಾರು ಸಮುದಾಯಗಳ ಜನಸಂಖ್ಯೆ 50,000 ಸಾವಿರಕ್ಕಿಂತ ಕಡಿಮೆ ಇವೆ. ಆದರೆ ಕೊರಮ ಸಮುದಾಯ ಮಾತ್ರ 2011ರ ಜನಗಣತಿಯ ಪ್ರಕಾರ 2 ಲಕ್ಷಕ್ಕಿಂತ ಹೆಚ್ಚಿದೆ. ಕೊರಚ ಮತ್ತು ಕೊರಮ ಸಮುದಾಯ ಈ ಪಟ್ಟಿಗೆ ಸೇರ್ಪಡೆಯಾದ ನಂತರ ಈ ಎಲ್ಲಾ ಸಮುದಾಯಗಳ ಜನಸಂಖ್ಯೆ ಸುಮಾರು 6 ಲಕ್ಷದಷ್ಟಿದೆ. ಆದರೆ ಕೆಲವು ಸಮುದಾಯದವರು 1 ವರ್ಷದಿಂದ 49 ಜಾತಿಗಳು ಮಾತ್ರ ನೈಜ ಅಲೆಮಾರಿಗಳು, ಕೊರಚ ಮತು ಕೊರಮ ಸಮುದಾಯಗಳನ್ನು ಹೊರತುಪಡಿಸಿ ಸಂಘಟನೆ ಮಾಡಿಕೊಂಡು ರಾಜ್ಯಾದ್ಯಂತ ಅಪಪ್ರಚಾರದಲ್ಲಿ ತೊಡಗಿದೆ ಎಂದು ಆದರ್ಶ್ ಯಲ್ಲಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಮುಂದೆ ಜಿಲ್ಲಾ ಅನುಷ್ಠಾನ ಸಮಿತಿಯ ಸದಸ್ಯರುಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಅತಿ ಸಣ್ಣ ಸಮುದಾಯಗಳಿಗೆ ಆದ್ಯತೆ ನೀಡುವುದನ್ನು ನಾವು ಸ್ವಾಗತಿಸುತ್ತೇವೆ. ಮುಂದಿನ ದಿನಗಳಲ್ಲಿ ಪರಿಶಿಷ್ಟಜಾತಿಯ ಸಮಸ್ತ ಅಲೆಮಾರಿ ಅಧಿಕೃತ ಸಮುದಾಯಗಳು ಒಗ್ಗಟ್ಟಾಗಿ ಹೋರಾಟ ಮಾಡಿ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿಸಲು ಪ್ರಯತ್ನಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ಕೃಷ್ಣಪ್ಪ, ಸಿದ್ದೇಶ್ ಮಾದಪುರ, ಲೇಶಪ್ಪ, ಸಂತೋಷ್ ಸಿ. ಸುರೇಶ್ ಎನ್, ಕುಂಸಿ ಶ್ರೀನಿವಾಸ್, ಸಂತೋಷ್ ಕುಮಾರ್ ಎಂ, ಗುಬ್ಬಿ ವಿಕಾಸ್, ಶಿವಮೂರ್ತಿ.ವಿ ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರ: ಪೂರ್ವಿಕಾಮೃತ ಕ್ರಿಯೇಷನ್ ಬೆಂಗಳೂರ ಅವರ ದ್ವಿತೀಯ ಕಾಣಿಕೆ, ಹರಿಹರನ್. ಬಿ.ಪಿ. ನಿರ್ಮಾಣದ ಯುವ ನಿರ್ದೇಶಕಿ ರಶ್ಮಿ .ಎಸ್ ನಿರ್ದೇಶನದ “ಸ್ಲಂ ಶ್ರಾವಣಿ” ದಿ ಗ್ರೇಟ್ ಚಲನಚಿತ್ರದ ಶೀರ್ಷಿಕೆ ಮತ್ತು ಪೋಸ್ಟರ್ ಅನ್ನು ಕನಸಿನ ರಾಣಿ, ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು ಈ ಸಿನಿಮಾದ ಟೈಟಲ್ ಮತ್ತು ಪೋಸ್ಟರ್ ತುಂಬಾ ಆಕರ್ಷಕವಾಗಿವೆ. ಈ ಸಿನಿಮಾವನ್ನು ಆದಷ್ಟು ಬೇಗ ನಾನು ನೋಡಬೇಕೆಂದು ಕಾತುರದಿಂದ ಇದ್ದೇನೆ. ಸಿನಿಮಾ ಯಶಸ್ಸು ಗಳಿಸಿ ಒಳ್ಳೆ ದುಡ್ಡು ಮಾಡಲಿ ಎಂದು ಚಿತ್ರ ತಂಡಕ್ಕೆ ಶುಭ ಹಾರೈಸಿದರು. ನಿರ್ದೇಶಕಿ ರಶ್ಮಿ ಎಸ್ (ಸಾಯಿ ರಶ್ಮಿ) ಇಗಾಗಲೇ ಐದು ಸಿನಿಮಾಗಳನ್ನು ನಿರ್ದೇಶನ ಮಾಡಿದ್ರೂನು ನನ್ನ ಮೊದಲ ಸಿನಿಮಾದ ರೀತಿಯಲ್ಲೇ ಕೆಲಸ ಮಾಡ್ತಾ ಇದ್ದೇನೆ. ನನ್ನ ನಿರ್ದೇಶನದ “ಸುಮಾ ದಿ ಫ್ಲವರ್” ಚಿತ್ರಕ್ಕೆ ಸುಮಾರು ೧೬೦ಕ್ಕೂ ಹೆಚ್ಚು ಅಂತಾರಾಷ್ಟಿçÃಯ ಪ್ರಶಸ್ತಿಗಳು ಜೊತೆಗೆ ಮುಂಬೈನಲ್ಲಿ ನಡೆದ ಪ್ರತಿಷ್ಠಿತ “ದಾದಾ ಸಾಹೇಬ್ ಫಾಲ್ಕೆ ಆಫ್ ಇಂಡಿಯಾ” ಪ್ರಶಸ್ತಿ ಲಭಿಸಿದೆ ಎಂದು ತಿಳಿಸಿದರು. ಕಥೆ – ಚಿತ್ರಕಥೆ ಬರೆದ ಎನ್ ಟಿ ಜಯರಾಮ್ ರೆಡ್ಡಿಯವರ ಗರಡಿಯಲ್ಲೇ ನಾನು ಪಳಗಿದ್ದು ಹಲವಾರು ಚಲನಚಿತ್ರಗಳಲ್ಲಿ ನಟನೆ ಮತ್ತು ನಿರ್ದೇಶನ ಮಾಡಿದ್ದೇನೆ. ಈ ಚಿತ್ರದ ಕಥಾ ಹಂದರ ತುಂಬಾ ಚೆನ್ನಾಗಿದ್ದು, ಒಂದು ಸ್ಲಂ ಹುಡುಗಿಯ ಜೀವನದಲ್ಲಿ ನಡೆಯುವ ನೋವು, ಮುಳ್ಳುಗಳ ಹಾದಿಯಲ್ಲಿ ನಡೆದು ಮುಂದೆ ಒಂದು ಉನ್ನತ ಸ್ಥಾನಕ್ಕೆ ಹೋಗುವ ಕಥೆ “ಸ್ಲಂ ಶ್ರಾವಣಿ” ದಿ ಗ್ರೇಟ್ ಆಗಿದೆ. ೪೫ ದಿನಗಳ ಕಾಲ ಬೆಂಗಳೂರು ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ನಾಲ್ಕು ಹಾಡುಗಳು ಚಿತ್ರದಲ್ಲಿವೆ ಎಂದು ನಿರ್ಮಾಪಕ ಹರಿಹರನ್.ಬಿ ಪಿ ಹೇಳಿದರು. ತಾರಾಗಣದಲ್ಲಿ ಉಧೋ ಉಧೋ ರೇಣುಕಾ ಯಲ್ಲಮ್ಮ ಧಾರಾವಾಹಿಯ ಯಲ್ಲಮ್ಮ ಖ್ಯಾತಿಯ ಬೇಬಿ ಭೈರವಿ, ವಿಶೇಷ ಪಾತ್ರದಲ್ಲಿ ಐಶ್ವರ್ಯ ಶಿಂಧೋಗಿ, ಸನತ್, ಶಿವಕುಮಾರ್ ಆರಾಧ್ಯ, ಲಯನ್ ಸುರೇಶ್ (ಮೈಸೂರು), ನಾಗೇಂದ್ರ ಅರಸ್, ವಿಜಯಲಕ್ಸಿö್ಮ ಉಪಾಧ್ಯಾಯ, ಮಹೇಂದ್ರ ಮುನ್ನೋತ್, ಹೇಮಾ, ಮಂಜುಳಾ ರುದ್ರೇಶ್, ಮಾಸ್ಟರ್ ನಿಶ್ಚಲ್ (ಆದಿ), ಸೂರ್ಯೋದಯ (ಪರಮಾತ್ಮ ಸ್ಟುಡಿಯೋ) ಮುಂತಾದವರು ಅಭಿನಯಿಸುತ್ತಿದ್ದಾರೆ. ತಾಂತ್ರಿಕ ವರ್ಗದಲ್ಲಿ- ಛಾಯಾಗ್ರಹಣ ಗಗನ್ ಆರ್ ಮತ್ತು ನಾಗೇಂದ್ರ ರಂಗರಿ, ಸಂಗೀತ ಎ ಟಿ ರವೀಶ್, ಸಾಹಿತ್ಯ ಅರಸು ಅಂತಾರೆ ಮತ್ತು ರೇವಣ್ಣ ನಾಯಕ್, ಸಂಕಲನ ರವಿತೇಜ ಸಿ ಹೆಚ್, ಪತ್ರಿಕಾ ಸಂಪರ್ಕ ಕಾರ್ತಿಕ್ ಸುಧನ್, ಡಾ ಪ್ರಭು ಗಂಜಿಹಾಳ , ಡಾ ವೀರೇಶ್ ಹಂಡಿಗಿ ಅವರದಿದೆ. ಸದ್ಯ ಚಿತ್ರೀಕರಣ ಆರಂಭವಾಗಲಿದ್ದು ವರ್ಷಾಂತ್ಯಕ್ಕೆ ಚಿತ್ರ ಬಿಡುಗಡೆ ಮಾಡುವ ಆಲೋಚನೆ ಚಿತ್ರತಂಡಕ್ಕಿದೆ. **
There is a plan to develop Maharishi Valmiki University on a large scale: New Vice Chancellor Prof. Sivananda Kannimani hopes
ರಾಯಚೂರು ಜುಲೈ 08 (ಕರ್ನಾಟಕ ವಾರ್ತೆ): ರಾಯಚೂರ ಜಿಲ್ಲೆಯ ಶೈಕ್ಷಣಿಕ ಸ್ಥಿತಿಗತಿ ಅರಿತು, ಈ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ಸಿಗುವಂತಾಗಬೇಕು ಎಂಬ ಆಶಯ ಹೊಂದಿ ರಾಯಚೂರು ಜಿಲ್ಲೆಯಲ್ಲಿರುವ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸರ್ವಾಂಗೀಣ ಅಭಿವೃದ್ಧಿಯ ಚಿಂತನೆಯೊಂದಿಗೆ ತಾವು ನೂತನ ಕುಲಪತಿಗಳಾಗಿ ಅಧಿಕಾರ ಸ್ವೀಕರಿಸಿದ್ದು, ಈ ವಿಶ್ವವಿದ್ಯಾಲಯವನ್ನು ದೊಡ್ಡಮಟ್ಟದಲ್ಲಿ ಬೆಳೆಸಬೇಕು ಎಂಬ ಮಹತ್ತರವಾದ ಕಾರ್ಯಕ್ಕೆ ತಾವು ಪ್ರತಿಯೊಬ್ಬರ ಸಹಕಾರ ಕೋರುವುದಾಗಿ ರಾಯಚೂರಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ನೂತನ ಕುಲಪತಿಗಳಾದ ಪ್ರೊ.ಶಿವಾನಂದ ಕೆಳಗಿನಮನಿ ಅವರು ಹೇಳಿದರು. ರಾಯಚೂರ ತಾಲೂಕಿನ ಯರಗೇರಾ ಗ್ರಾಮದಲ್ಲಿರುವ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಶೈಕ್ಷಣಿಕ ಸಮುಚ್ಛಯದ ಸಭಾಂಗಣದಲ್ಲಿ ಜುಲೈ 8ರಂದು ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. ರಾಜ್ಯದ ಗಡಿ ಜಿಲ್ಲೆಯಾದ ರಾಯಚೂರ ಜಿಲ್ಲೆಯು ವಿವಿಧ ಭಾಷೆ ಮಾತನಾಡುವ, ವಿಭಿನ್ನ ಸಂಸ್ಕೃತಿ ಆಚರಣೆಯ ಸಮ್ಮಿಲನದ ವಿಶೇಷತೆ ಹೊಂದಿದೆ. ಇಡೀ ರಾಜ್ಯಕ್ಕೆ ಗಣನೀಯ ಪ್ರಮಾಣದಲ್ಲಿ ವಿದ್ಯುತ್ ಪೂರೈಸಿ ಹೆಸರಾಗಿರುವ ರಾಯಚೂರ ಜಿಲ್ಲೆಗೆ 2020ರಲ್ಲಿ ರಾಜ್ಯ ಸರ್ಕಾರವು ಹೊಸದಾಗಿ ವಿಶ್ವವಿದ್ಯಾಲಯ ಘೋಷಣೆ ಮಾಡುವ ಮೂಲಕ ಈ ಭಾಗಕ್ಕೆ ಸಲ್ಲಬೇಕಾದ ಶೈಕ್ಷಣಿಕೆ ಮಾನ್ಯತೆಯನ್ನು ಕಲ್ಪಿಸಿದ್ದು ರಾಜ್ಯದ ಮತ್ತು ರಾಯಚೂರ ಜಿಲ್ಲೆಯ ಇತಿಹಾಸದಲ್ಲಿ ಸ್ಮರಣೀಯವಾಗಿದೆ ಎಂದು ಅವರು ತಿಳಿಸಿದರು. ಈ ವಿಶ್ವವಿದ್ಯಾಲಯವು ಹಲವು ಸಾಧನೆ ಮತ್ತು ವಿಶೇಷತೆಗಳನ್ನು ಹೊಂದಿದೆ. ಈ ವಿಶ್ವವಿದ್ಯಾಲಯಕ್ಕೆ ಬರುವ ಹೆಚ್ಚಿನ ಪ್ರಮಾಣದ ವಿದ್ಯಾರ್ಥಿಗಳು ಗ್ರಾಮೀಣ ಹಿನ್ನೆಲೆಯ ಮತ್ತು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದವರಿದ್ದು, ಈ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಬೇಕು ಎಂಬುದು ಈ ವಿಶ್ವವಿದ್ಯಾಲಯದ ಗುರಿ ಮತ್ತು ನಮ್ಮ ಆಶಯವಾಗಿದೆ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ವಿಷಯ ಮತ್ತು ಸಂವಹನ ಕೌಶಲ್ಯ ಸುಧಾರಿಸಲು ವಿಶ್ವವಿದ್ಯಾಲಯದಲ್ಲಿ ನಿಯಮಿತವಾಗಿ ವಿವಿಧ ವಿಷಯಗಳ ಕುರಿತು ವಿಚಾರ ಸಂಕಿರಣಗಳು, ಕಾರ್ಯಾಗಾರಗಳು ಮತ್ತು ವಿಶೇಷ ಉಪನ್ಯಾಸಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು. ರಾಜ್ಯ ಸರ್ಕಾರವು ಈ ವಿಶ್ವವಿದ್ಯಾಲಯಕ್ಕೆ 31 ಬೋಧಕ ಹುದ್ದೆಗಳನ್ನು ಮಂಜೂರಿ ಮಾಡಿದೆ. ಮೌಲ್ಯಮಾಪನ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ತರಲು ಮತ್ತು ವಿಶ್ವವಿದ್ಯಾಲಯದ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡಲು ವಿಶ್ವವಿದ್ಯಾಲಯವು ಡಿಜಿಟಲ್ ಮೌಲ್ಯಮಾಪನ ಪ್ರಾರಂಭಿಸಿದೆ. ಮೂಲಸೌಕರ್ಯ ಮತ್ತು ಪ್ರಯೋಗಾಲಯ ಅಭಿವೃದ್ಧಿಗಾಗಿ ಸರ್ಕಾರವು 15 ಕೋಟಿ ರೂ.ಗಳನ್ನು ಮಂಜೂರಿ ಮಾಡಿದೆ. ವಿಶ್ವವಿದ್ಯಾಲಯ ಆವರಣದಲ್ಲಿರುವ ಮಾನವ ಜೀನೋಮ್ ಕೇಂದ್ರಕ್ಕೆ ಕೆಕೆಆರ್ಡಿಬಿ ನಿಧಿಯಡಿಯಲ್ಲಿ ಸರ್ಕಾರವು 47.00 ಕೋಟಿ ರೂ.ಗಳನ್ನು ಮಂಜೂರಿ ಮಾಡಿದೆ. ವಿಶ್ವವಿದ್ಯಾಲಯ ಆವರಣದಲ್ಲಿ ಮೂಲಸೌಕರ್ಯ ಮತ್ತು ಪ್ರಯೋಗಾಲಯ ಅಭಿವೃದ್ಧಿಗಾಗಿ ಕೆಕೆಆರ್ಡಿಬಿ ನಿಧಿಯಡಿಯಲ್ಲಿ ಸರ್ಕಾರ 34 ಕೋಟಿ ರೂ.ಗಳನ್ನು ಮಂಜೂರಿ ಮಾಡಿದೆ. ನಮ್ಮ ವಿಶ್ವವಿದ್ಯಾಲಯಕ್ಕೆ ಕೆಲವು ಅವಶ್ಯಕತೆಗಳು ಬೇಕಿದೆ. ಪ್ರಸ್ತುತ ವಿಶ್ವವಿದ್ಯಾನಿಲಯವು ಒಂದೇ ಕಟ್ಟಡದಲ್ಲಿ ಎರಡು ಅವಧಿಗಳಲ್ಲಿ 20 ಸ್ನಾತಕೋತ್ತರ ಕೋರ್ಸ್ಗಳನ್ನು ನಡೆಸುತ್ತಿದೆ. ಆದ್ದರಿಂದ, ವಿಶ್ವವಿದ್ಯಾನಿಲಯದ ದಕ್ಷ ಕಾರ್ಯನಿರ್ವಹಣೆಗಾಗಿ ಕನ್ನಡ, ಇಂಗ್ಲಿಷ್ ಮತ್ತು ಉರ್ದು ವಿಭಾಗಗಳಿಗೆ ಕಲಾ ವಿಭಾಗದ ಕಟ್ಟಡ ನಿರ್ಮಾಣವಾಗಬೇಕು. ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಸಮಾಜ ಕಾರ್ಯ, ಪತ್ರಿಕೋದ್ಯಮ ಮತ್ತು ಸಮೂಹ ವಿಭಾಗಗಳಿಗೆ ಸಮಾಜ ವಿಜ್ಞಾನ ವಿಭಾಗದ ಕಟ್ಟಡ ನಿರ್ಮಾಣವಾಗಬೇಕು. ಸಂವಹನ, ಮಹಿಳಾ ಅಧ್ಯಯನ, ಗ್ರಂಥಾಲಯ ಮಾಹಿತಿ ವಿಜ್ಞಾನ, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಕಂಪ್ಯೂಟರ್ ವಿಜ್ಞಾನ, ಎಲೆಕ್ಟ್ರಾನಿಕ್ಸ್ ಮತ್ತು ವಾದ್ಯಸಂಗೀತ ಇತ್ಯಾದಿ ವಿಭಾಗಗಳಿಗೆ ಭೌತ ವಿಜ್ಞಾನ ವಿಭಾಗದ ಕಟ್ಟಡ ನಿರ್ಮಾಣವಾಗಬೇಕು. ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಸೂಕ್ಷ್ಮ ಜೀವವಿಜ್ಞಾನ ವಿಭಾಗಕ್ಕೆ ಜೀವ ವಿಜ್ಞಾನ ವಿಭಾಗ ಕಟ್ಟಡ ನಿರ್ಮಾಣವಾಗಬೇಕು. ಜೊತೆಗೆ ಫ್ಯಾಕಲ್ಟಿ ಆಫ್ ಕಾಮರ್ಸ್ ಕಟ್ಟಡ, ಪರೀಕ್ಷಾ ವಿಭಾಗದ ಕಟ್ಟಡ, ಕ್ಯಾಂಟೀನ್ ಕಟ್ಟಡ, ಅತಿಥಿ ಗೃಹ ಕಟ್ಟಡಗಳು ನಿರ್ಮಾಣವಾಗಬೇಕಿದೆ. ಅಸ್ತಿತ್ವದಲ್ಲಿರುವ ಗ್ರಂಥಾಲಯ ಕಟ್ಟಡದ ವಿಸ್ತರಣೆಯಾಗಬೇಕು. ಇಡೀ ಕ್ಯಾಂಪಸ್ಗೆ ಟಾರ್ ರಸ್ತೆಗಳು ನಿರ್ಮಾಣವಾಗಬೇಕು. 400 ಮೀಟರ್ ಟ್ರ್ಯಾಕ್ ಹೊಂದಿರುವ ಆಟದ ಮೈದಾನಗಳು ನಿರ್ಮಾಣವಾಗಬೇಕಿದೆ. ಇಡೀ ವಿಶ್ವವಿದ್ಯಾಲಯ ಕ್ಯಾಂಪಸ್ಗೆ ಹೈ ಸ್ಪೀಡ್ ಇಂಟರ್ನೆಟ್ ಸಂಪರ್ಕ ಬೇಕಿರುತ್ತದೆ. ಎಲ್ಲಾ ವಿಜ್ಞಾನ ವಿಭಾಗಗಳಿಗೆ ಸಂಶೋಧನಾ ಉಪಕರಣಗಳು ಬೇಕಿರುತ್ತದೆ. ವಿಶ್ವವಿದ್ಯಾಲಯಕ್ಕೆ ಹಂತಹಂತವಾಗಿ ಈ ಎಲ್ಲಾ ಸೌಕರ್ಯ ಕಲ್ಪಿಸಲು ಸರ್ಕಾರಕ್ಕೆ ಪತ್ರ ಬರೆದು ಕ್ರಮವಹಿಸುವುದಾಗಿ ಕುಲಪತಿಗಳಾದ ಪ್ರೊ.ಕೆಳಗಿನಮನಿ ಅವರು ತಿಳಿಸಿದರು. ಈ ವಿಶ್ವವಿದ್ಯಾಲಯವು ಅಂದಾಜು 250 ಎಕರೆ ಪ್ರದೇಶ ವ್ಯಾಪ್ತಿಯಲ್ಲಿದೆ. 20 ಕೋರ್ಸಗಳನ್ನು ನೀಡಲಾಗುತ್ತದೆ. 20 ಸರ್ಕಾರಿ ಕಾಲೇಜುಗಳು, 6 ಅನುದಾನಿತ ಕಾಲೇಜುಗಳು, 8 ಬಿಎಡ್ ಕಾಲೇಜುಗಳು, 2 ಬಿಪಿಎಡ್ ಮತ್ತು 148 ಖಾಸಗಿ ಕಾಲೇಜುಗಳು ಸೇರಿ ಒಟ್ಟು 184 ಸಂಯೋಜಿತ ಕಾಲೇಜುಗಳು ಈ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುತ್ತವೆ. ಮುಖ್ಯ ಕ್ಯಾಂಪಸ್ಸನಲ್ಲಿ ಒಟ್ಟು 873 ವಿದ್ಯಾರ್ಥಿಗಳ ಬಲವಿದೆ. ಅಂಗ ಸಂಸ್ಥೆಗಳಲ್ಲಿ 4208ರಷ್ಟು ಸ್ನಾತಕೋತ್ತರ ಪದವಿ ಓದುವ ವಿದ್ಯಾರ್ಥಿಗಳಿದ್ದಾರೆ. ಸಂಯೋಜಿತ ವಿಶ್ವವಿದ್ಯಾಲಯಗಳಲ್ಲಿ 56,343 ಯುಜಿ ವಿದ್ಯಾರ್ಥಿಗಳಿದ್ದಾರೆ. ತಲಾವೊಂದು ಆಡಳಿತಾತ್ಮಕ ಕಟ್ಟಡ, ಗ್ರಂಥಾಲಯ ಕಟ್ಟಡ, ಸಿಬ್ಬಂದಿ ಕ್ವಾಟರ್ಸ್, ಅತಿಥಿ ಗೃಹ ಹಾಗೂ ಎಂಜಿನಿಯರಿಂಗ್ ಕಟ್ಟಡಗಳಿವೆ. 5 ಬಾಲಕರ ವಿದ್ಯಾರ್ಥಿ ವಸತಿ ನಿಲಯಗಳು ಹಾಗೂ 2 ಮಹಿಳೆಯರ ವಸತಿ ನಿಲಯಗಳು ಕಾರ್ಯನಿರ್ವಹಿಸುತ್ತಿವೆ. 5 ಖಾಯಂ ಬೋಧಕ ಸಿಬ್ಬಂದಿ, 6 ಖಾಯಂ ಬೋಧಕರ ಸಿಬ್ಬಂದಿ ಇದ್ದಾರೆ. 80 ಅತಿಥಿ ಅಧ್ಯಾಪಕರು, 90 ಜನ ತಾತ್ಕಾಲಿಕ ಸಿಬ್ಬಂದಿ ಇದ್ದಾರೆ. ಈ ವಿಶ್ವವಿದ್ಯಾಲಯದಲ್ಲಿ 187 ವಿದ್ಯಾರ್ಥಿಗಳು, 118 ವಿದ್ಯಾರ್ಥಿನಿಯರು ಹಾಸ್ಟೇಲಗೆ ಪ್ರವೇಶಾತಿ ಪಡೆದುಕೊಂಡಿದ್ದಾರೆ. ಗ್ರಂಥಾಲಯದಲ್ಲಿ ಒಟ್ಟು 25,540 ಪುಸ್ತಕಗಳಿವೆ. 100 ಕಂಪ್ಯೂಟರ್, 8 ಸಂವಾಧಾತ್ಮಕ ಫಲಕಗಳು ಇರುತ್ತವೆ. 5 ಕೊಳವೆಬಾವಿಗಳು ಮತ್ತು 2 ಜನರೇಟರಗಳು ಕಾರ್ಯನಿರ್ವಹಿಸುತ್ತಿವೆ. 1 ಮಿನಿ ಬಸ್ ಇರುತ್ತದೆ ಎಂದು ಅವರು ಕುಲಪತಿಗಳು ಮಾಹಿತಿ ನೀಡಿದರು. ವಿಶ್ವವಿದ್ಯಾಲಯದಲ್ಲಿ ಕನ್ನಡ, ಇಂಗ್ಲಿಷ್, ಉರ್ದು ಮತ್ತು ಪರ್ಶಿಯನ್, ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಎಂಎಸ್ಡಬ್ಲ್ಯು, ಎಂಡಬ್ಲ್ಯುಎಸ್, ಪತ್ರಿಕೋದ್ಯಮ, ಗ್ರಂಥಾಲಯ ವಿಜ್ಞಾನ, ಗಣಕ ವಿಜ್ಞಾನ, ಗಣಿತಶಾಸ್ತ್ರ, ಪಿಜಿಕ್ಸ್, ಕೆಮಿಸ್ಟ್ರಿ, ಬಾಟನಿ, ಜಿಯಾಲಜಿ, ಮೈಕ್ರೋಬಯಾಲಜಿ, ಇನ್ಸ್ಟ್ರೂಮೆಂಟ್ ಟೆಕ್ನಾಲಜಿ ಹಾಗೂ ಎಂಕಾಂ ಸೇರಿದಂತೆ 20 ವಿಷಯಗಳ ಕೋರ್ಸಗಳನ್ನು ಇಲ್ಲಿ ಕಲಿಸಲಾಗುತ್ತದೆ ಎಂದು ಪ್ರೊ.ಕೆಳಗಿನಮನಿ ಅವರು ಮಾಹಿತಿ ನೀಡಿದರು. ಸಲಹೆ, ಮಾರ್ಗದರ್ಶನಬೇಕು: ತಾವು ಈಗಾಗಲೇ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಎರಡೂ ದಶಕಗಳಿಗೂ ಹೆಚ್ಚು ಕಾಲ ಅಧ್ಯಾಪಕರಾಗಿ ಜೊತೆಗೆ ವಿಶ್ವವಿದ್ಯಾಲಯದ ಬೇರೆ ಬೇರೆ ಹುದ್ದೆಗಳಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದು, ಇದುವರೆಗೆ 70ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾಗಿ 33 ಅಭ್ಯರ್ಥಿಗಳಿಗೆ ಪಿಎಚ್ಡಿ ಮಾರ್ಗದರ್ಶನ ಮಾಡಿದ್ದಾಗಿ ಪ್ರೊ.ಶಿವಾನಂದ ಕೆಳಗಿನಮನಿ ಅವರು ತಿಳಿಸಿದರು. ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಬೆಳವಣಿಗೆಗೆ ಸಂಬಂಧಿಸಿದಂತೆ ಏನೇ ಸಲಹೆ ಮತ್ತು ಮಾರ್ಗದರ್ಶನವಿದ್ದರೆ ಅದನ್ನು ತಾವು ಸ್ವೀಕರಿಸುವುದಾಗಿ ಪ್ರೊ.ಶಿವಾನಂದ ಕೆಳಗಿನಮನಿ ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕುಲ ಸಚಿವರಾದ ಡಾ.ಚನ್ನಪ್ಪ ಎ., ಮೌಲ್ಯಮಾಪನ ಕುಲಸಚಿವರಾದ ಡಾ.ಜ್ಯೋತಿಧಾಮ ಪ್ರಕಾಶ, ವಿಶ್ವವಿದ್ಯಾಲಯದ ಆಡಳಿತ ಅಧಿಕಾರಿಗಳು ಆಗಿರುವ ಸಹ ಪ್ರಾಧ್ಯಾಪಕರಾದ ಡಾ.ಕೆ.ವೆಂಕಟೇಶ, ಸಹ ಪ್ರಾಧ್ಯಾಪಕರಾದ ಡಾ.ಸುಯಮೀಂದ್ರ ಕುಲಕರ್ಣಿ, ಕಾಲೇಜು ಅಭಿವೃದ್ಧಿ ಪರಿಷತ್ತಿನ ನಿರ್ದೇಶಕರಾದ ಡಾ.ರಾಘವೇಂದ್ರ ಪತ್ತೇಪೂರ ಸೇರಿದಂತೆ ವಿಶ್ವವಿದ್ಯಾಲಯದ ಇನ್ನೀತರ ಸಹ ಪ್ರಾಧ್ಯಾಪಕರು ಮತ್ತು ಇನ್ನೀತರರು ಇದ್ದರು.
ಅಭಿನಂದನಾ ಪತ್ರ ಮತ್ತು ಬಸವ ಅಧ್ಯಯನ ಪೀಠ ಸ್ಥಾಪನೆ ಕುರಿತು ಮನವಿ ಪತ್ರ
Letter of congratulations and request for establishment of Basava Study Chair
ಡಾ.ವಿಜಯಾ ಕೋರಿಶೆಟ್ಟಿ ಗೌರವಾನ್ವಿತ ಕುಲಪತಿಗಳು. ಕರ್ನಾಟಕ ರಾಜ್ಯ ಅಕ್ಕಮಹಾದೇವಿ, ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ.
ವಿಜಯಪುರ: ತವು ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದ ಕುಲಪತಿ ಆಗಿ ಆಯ್ಕೆ ಆದದ್ದು ಕರ್ನಾಟಕದ ಅತ್ಯಂತ ಹೆಮ್ಮೆಯ ವಿಷಯ. ನಿಮಗೆ ಬಸವ ಭಕ್ತರ ಪರ ಅನಂತ ಅಭಿಮಾನದ ಅಭಿನಂದನೆಗಳು.
ನಿಮ್ಮ ಈ ಸಾಧನೆ ನಮ್ಮೆಲ್ಲರಿಗೂ ಬಹಳ ಸಂತೋಷವನ್ನುಂಟುಮಾಡಿದೆ. ನಿಮ್ಮ ಪರಿಶ್ರಮ ಮತ್ತು ಸಮರ್ಪಣಾ ಭಾವವು ಈ ಯಶಸ್ಸಿಗೆ ಕಾರಣವಾಗಿದೆ. ನಿಮ್ಮ ಮುಂದಿನ ಕಾರ್ಯಗಳಲ್ಲಿಯೂ ಇದೇ ರೀತಿಯ ಯಶಸ್ಸು ಸಿಗಲಿ ಎಂದು ಹಾರೈಸುತ್ತೇವೆ.
ತಮ್ಮ ವಿಶ್ವ ವಿದ್ಯಾಲಯದಲ್ಲಿ ಬಸವ ಅಧ್ಯಯನ ಪೀಠ ಆರಂಭಿಸಲು ಪ್ರಾರ್ಥನೆ. ಅದೇ ರೀತಿ ನಾಡಿನ ಮೊದಲ ಕವಯಿತ್ರಿ ಶರಣೆ ಅಕ್ಕ ಮಹಾದೇವಿ ಇವರ ಅರೆ ಬೆತ್ತಲೆ ಮೂರ್ತಿಯನ್ನು ತಮ್ಮ ವಿಶ್ವ ವಿದ್ಯಾಲಯದ ಆವರಣದಲ್ಲಿ ತೆರುವಗೊಳಿಸಿ ಅಲ್ಲಿ ಶುಭ್ರ ವಸ್ತ್ರದ ಸೀರೆಯೊಂದಗಿನ ಅಕ್ಕ ಮಹಾದೇವಿ ಮೂರ್ತಿಯನ್ನು ಸ್ಥಾಪಿಸಲು ಭಕ್ತಿಯ ಕೋರಿಕೆ.
ಬಸವಣ್ಣನವರು ಇಡೀ ಜಗತ್ತಿನ ಶ್ರೇಷ್ಠ ದಾರ್ಶನಿಕರು ಸಮಾಜ ಸುಧಾರಕರು. ಅವರು ವಿಜಯಪುರ ಜಿಲ್ಲೆಯ ಬಾಗೇವಾಡಿ ಹುಟ್ಟಿದವರು ಆದರೆ ಅವರ ಹೆಸರಿನಲ್ಲಿ ಬಸವ ಅಧ್ಯಯನ ಪೀಠ ಅಕ್ಕ ವಿಶ್ವ ವಿದ್ಯಾಲಯದ ಆವರಣದಲ್ಲಿ ಇಲ್ಲದಿರುವುದು ಅತ್ಯಂತ ನೋವಿನ ಸಂಗತಿ ಕಾರಣ ಈ ಕೂಡಲೇ ತಾವು ಅಕ್ಕ ಮಹಾದೇವಿ ವಿಶ್ವ ವಿದ್ಯಾಲಯದಲ್ಲಿ ಬಸವ ಅಧ್ಯಯನ ಪೀಠ ಸ್ಥಾಪಿಸ ಬೇಕೆಂದು ನಾವು ಒತ್ತಾಯ ಪೂರ್ವಕ ಆಗ್ರಹಿಸುತ್ತೇವೆ.
ಇನ್ನೊಂದು ಅತ್ಯಂತ ನೋವಿನ ವಿಷಯವೆಂದರೆ ಅಕ್ಕ ಮಹಾದೇವಿ ವಿಶ್ವದ ಮೊದಲ ವಿಚಾರವಂತೆ ಕವಯಿತ್ರಿ ಅವಳು ಎಲ್ಲಿಯೂ ಬೆತ್ತಲೆ ಬಂದ ಉಲ್ಲೇಖವಿಲ್ಲ ಇದು ನಾಗರಿಕ ಸಮಾಜದ ಅವಮಾನ ಕಾರಣ ತಾವು ಅರೆ ಬೆತ್ತಲೆಯ ಅಕ್ಕ ಮಹಾದೇವಿ ಮೂರ್ತಿ ತೆರುವಗೊಳಿಸಿ ಅಲ್ಲಿ ಶ್ವೇತ ವಸ್ತ್ರದ ಸೀರೆಯೊಂದಗಿನ ಅಕ್ಕ ಮಹಾದೇವಿ ಮೂರ್ತಿ ನಿಲ್ಲಿಸಲು ಕಳಕಳಿಯ ಮನವಿ
ನಿಮ್ಮ ಭವಿಷ್ಯದ ಎಲ್ಲಾ ಪ್ರಯತ್ನಗಳಿಗೆ ನಮ್ಮ ಶುಭ ಹಾರೈಕೆಗಳು. ಅಕ್ಕನ ಅರಿವು,ವಚನ ಅಧ್ಯಯನ ವೇದಿಕೆಯ ಸಮಸ್ತ ಲಿಂಗಾಯತ ಬಳಗದ ಪರವಾಗಿ ತಮಗೆ ಅಭಿಮಾನದ ಅಭಿನಂದನೆಗಳು.. ವ
ಡಾ ಶಶಿಕಾಂತ ಪಟ್ಟಣ ಅಧ್ಯಕ್ಷರು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ
The Media Journalists Association will stand as the backbone of journalists.
ಉಡುಪಿ:ರಾಜ್ಯಾದ್ಯಂತ ಗ್ರಾಮೀಣ ಪತ್ರಕರ್ತರು ಸೇರಿದಂತೆ ಎಲ್ಲ ಪತ್ರಕರ್ತರ ಬೆನ್ನೆಲುಬಾಗಿ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ ನಿಲ್ಲಲಿದೆ ಎಂದು ಕರ್ನಾಟಕ ಮಾದ್ಯಮ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಜಿ,ಎಂ,ರಾಜಶೇಖರ್ ತಿಳಿಸಿದರು . ಉಡುಪಿ ಜಿಲ್ಲೆಯ ಪತ್ರಕರ್ತರರೊಂದಿಗೆ ಸಂವಾದ ನಡೆಸಿದ ಅವರು ದಕ್ಷಿಣಕನ್ನಡ,ಉಡುಪಿ,ಉತ್ತರಕನ್ನಡ, ಮಡಿಕೆರಿ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಯ ಕೆಲ ಪ್ರದೇಶಗಳು ಗುಡ್ಡಗಾಡುಗಳಿಂದ ಕೂಡಿದ್ದು ಸರ್ಕಾರ ನೀಡುವ ಜಾಹಿರಾತು ಇತರ ಸೌಲಭ್ಯಗಳಲ್ಲಿ ವಿಶೇಷ ರಿಯಾಯಿತಿ ನೀಡಿ ಈ ಭಾಗದ ಪತ್ರಕರ್ತರರಿಗೆ ಸೌಲಭ್ಯ ಒದಗಿಸಬೇಕು ಇಲ್ಲಿನ ಕರಾವಳಿ ಹಾಗೂ ಗುಡ್ಡ ಪ್ರದೇಶಗಳಾದ ಈ ಜಿಲ್ಲೆಗಳಿಗೆ ಸಾರಿಗೆ ವ್ಯವಸ್ಥೆ ಕೊರತೆಯಿರುವುದರಿಂದ ಪತ್ರಿಕೆ ತಲುಪಿಸುವುದು ಕಷ್ಠಸಾಧ್ಯ ಇದನ್ನು ಮನಗಂಡ ಸರ್ಕಾರ ಈ ಜಿಲ್ಲೆಗಳಿಗೆ ಮಾಧ್ಯಮ ಪಟ್ಟಿ ಹಾಗೂ ಮಾನ್ಯತೆ ಕಾರ್ಡು ಇತರ ಸೌಲಭ್ಯಗಳನ್ನು ನೀಡುವಲ್ಲಿ ವಿಶೇಷ ಜಿಲ್ಲೆಗಳೆಂದು ಪರಿಗಣಿಸಬೇಕು ಎಂದು ಒತ್ತಾಹಿಸಿದರು. ಜೊತೆಗೆ 60 ವರ್ಷ ದಾಟಿದ ಹಿರಿಯ ಪತ್ರಕರ್ತರಿಗೆ ಪಿಂಚಣಿ ಸೌಲಭ್ಯ ಹಾಗೂ ಗ್ರಾಮೀಣ ಭಾಗದ ಪತ್ರಕರ್ತರಿಗೆ ನೀಡುವ ಬಸ್ ಪಾಸ್ ಸೌಲಭ್ಯದಲ್ಲಿ ಈ ಭಾಗದ ಬಹುತೇಕ ಪರ್ತಕರ್ತರು ಸೌಲಭ್ಯದಿಂದ ವಂಚಿತರಾಗಿರುವ ಕಾರಣ ಸರ್ಕಾರದ ಮಟ್ಟದ ಅಧಿಕಾರಿಗಳು ಮಾಡಿದ ನಿಯಮಗಳನ್ನು ಸಡಿಲಗೊಳಿಸಿ ರಾಜ್ಯಾದ್ಯಂತ ಸಂಚರಿಲು ಪತ್ರಕರ್ತರಿಗೆ ಅನುವುಮಾಡಿಕೊಡಬೇಕು ಎಂದರು. ಮಾಧ್ಯಮ ಬಿಂಬ ಪತ್ರಿಕೆ ಸಂಪಾದಕರು ಹಾಗೂ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ವಸಂತ್ ಮಾತನಾಡಿ ರಾಜ್ಯ ಸಂಘದ ಸೌಲಭ್ಯಗಳು ಹಾಗೂ ಪತ್ರಿಕೊದ್ಯಮದ ಪೂರಕವಾದ ಅಂಶಗಳು ಪತ್ರಕರ್ತರ ಹಿತಕಾಯವುಂತಿದ್ದು ಇದರ ಸದುಪಯೋಗ ಪಡೆಯುವುದು ನಮ್ಮೆಲ್ಲರ ಜವಬ್ದಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘಕ್ಕೆ ಹೆಚ್ಚಿನ ಸದಸ್ಯತ್ವ ಬಲ ನೀಡಲಾಗುವುದು ಎಂದರು. ರಾಜ್ಯ ಸಂಘದ ಉಪಾಧ್ಯಕ್ಷರಾದ ರವೀಂದ್ರಶೆಟ್ಟಿ ಮಾತನಾಡಿ ಪರ್ತಕರ್ತರನ್ನು ಸರ್ಕಾರಗಳು ಕಡೆಗಣಿಸಿದ್ದು ಪತ್ರಕರ್ತರು ಒಗ್ಗಟ್ಟು ಪ್ರದರ್ಶಿಸುವುದು ಅನಿವಾರ್ಯವಾಗಿದೆ ಸಂಕಷ್ಠದಲ್ಲಿರುವ ಪತ್ರಕರ್ತರಿಗೆ ಸರ್ಕಾರಗಳು ಆಧುನಿಕ ಯುಗಕ್ಕೆ ತಕ್ಕಂತೆ ಸುದ್ದಿ ಮಾಡಲು ಸೂಕ್ತ ತಂತ್ರಜ್ಞಾನ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಜೊತೆಗೆ ಆರ್ಥಿಕವಾಗಿ ಸದೃಡರಾಗಲು ಜಾಹಿರಾತು ಇನ್ನಿತರ ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಹಿಸಿದರು. ಇದೇ ಸಂಧರ್ಭದಲ್ಲಿ ರಾಜ್ಯ ಸಂಘದ ಖಜಾಂಚಿ ಮಂಜು ಎಂ,ಹೊಸಹಳ್ಳಿ,ಪತ್ರಕರ್ತರಾದ ಪ್ರಮೋದ್ ಚಂದ್ರ ಪೈ,ಪ್ರಶಾಂತ್ ಆಚಾರ್ಯ, ಇಮ್ತಿಯಾಜ್, ಅಬುಬಕರ್,ಪುನಿತ್ಮೂಡಬಿದರೆ, ಸಂಪತ್, ಅಬಿಲ್,ಶಶಿಕಾಂತ್ ಸೇರಿದಂತೆ ಜಿಲ್ಲೆಯ ಪರ್ತಕರ್ತರು ಉಪಸ್ಥಿತರಿದ್ದರು
A leopard fell to Bonnie. Villagers worry about postage
ತಿಪಟೂರು ತಾಲ್ಲೂಕಿನ ಅಂಚೆಕೊಪ್ಪಲು ಗ್ರಾಮದ ಜಮೀನಿನಲ್ಲಿ ಸೆರೆಸಿಕ್ಕ ಚಿರತೆ
ತಿಪಟೂರು ತಾಲ್ಲೂಕಿನ ಅರಣ್ಯಪ್ರದೇಶ ವ್ಯಾಪ್ತಿಯ ಅಂಚೆಕೊಪ್ಪಲು ಗ್ರಾಮದ ಗ್ರಾಮದ ಜಮೀನೊಂದರಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನಿಗೆ ಬಾನುವಾರ ಮಧ್ಯರಾತ್ರಿ ಸರಿಸುಮಾರು 2 ಗಂಟೆಗೆ ಚಿರತೆಯೊಂದು ಬಿದ್ದಿದೆ.
ಗ್ರಾಮ ವ್ಯಾಪ್ತಿಯಲ್ಲಿ ಹಾವಳಿ ನೀಡುತ್ತಿದ್ದ ಚಿರತೆ ಸೆರೆಗೆ ಗ್ರಾಮಸ್ಥರು ಮಾಡಿದ್ದ ಮನವಿ ಮೇರೆಗೆ ಇಲಾಖೆ ಸಿಬ್ಬಂದಿ ಕೆರೆ ಅಂಗಳದಲ್ಲಿ ಬೋನು ಇಟ್ಟಿದ್ದರು. ಈ ಬೋನಿಗೆ ಆರು ವರ್ಷ ಪ್ರಾಯದ ಚಿರತೆ ಬಿದ್ದಿದೆ.
ಚಿರತೆಯೊಂದು ಸುತ್ತಮುತ್ತ ಗ್ರಾಮಗಳಲ್ಲಿ ಆಗಾಗ ಓಡಾಡುತ್ತಾ ಗ್ರಾಮದ ಜಾನುವಾರುಗಳ ಹಾಗೂ ನಾಯಿಗಳ ಮೇಲೆ ದಾಳಿ ಮಾಡುತ್ತಿತ್ತು. ಹಾಗಾಗಿ ಚಿರತೆ ಸೆರೆಗೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.
ಚಿರತೆ ಬೋನಿಗೆ ಬಿದ್ದಿರುವ ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಚಿರತೆ ಸಮೇತ ಬೋನನ್ನು ನಗರದ ಪ್ರಾದೇಶಿಕ ಕಚೇರಿ ಬಳಿಗೆ ತಂದು ಸ್ವಲ್ಪಹೊತ್ತು ಇರಿಸಿದ್ದರು. ಚಿರತೆ ವಿಷಯ ತಿಳಿದು ಸಾರ್ವಜನಿಕರು ಜಮಾಯಿಸಿ ಚಿರತೆಯನ್ನು ವೀಕ್ಷಣೆ ಮಾಡಿದರು.
ಇಲಾಖೆಯ ಮೇಲಾಧಿಕಾರಿಗಳ ಸೂಚನೆಯಿಂದ ದೂರದ ಕಾಡಿಗೆ ಬಿಡಲಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ
Prof. M. Karimuddin Award for Gandhian follower L. Narasimhaiah.
ಪ್ರಖರ ಗಾಂಧೀ ಚಿಂತಕರೂ, ಶಿಕ್ಷಣ ವೇತ್ತರಾದ ತುಮಕೂರಿನ ಎಲ್. ನರಸಿಂಹಯ್ಯ ತೊಂಡೋಟಿ ಅವರು ಮಂಡ್ಯದ ಗಾಂಧೀ ಭವನದಲ್ಲಿ ಈ ಸಾಲಿನ ಪ್ರೊ.ಎಂ.ಕರೀ ಮುದ್ದೀನ್ ಸ್ಮಾರಕ ಗಾಂಧೀ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಭಿನಂದನಾ ನುಡಿಗಳನ್ನಾಡಿದ ಕರ್ನಾಟಕ ಸರ್ವೋದಯ ಮಂಡಲದ ಅಧ್ಯಕ್ಷ ಡಾ ಎಚ್ ಎಸ್ ಸುರೇಶ್ ಮಾತನಾಡಿ ಇತ್ತೀಚೆಗೆ ತಮ್ಮ 91 ನೆ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಎಲ್ಲೆನ್ ಅವರು ಕನಕಪುರ ತಾಲ್ಲೂಕು ಹಾರೋಹಳ್ಳಿ ಗ್ರಾಮಾಂತರ ಪ್ರೌಢ ಶಾಲೆಯಲ್ಲಿ ಮೂವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಮುಖ್ಯೋಪಾಧ್ಯಾಯರಾಗಿ ಆ ಶಾಲೆಗೆ ಗಾಂಧೀ ಮೌಲ್ಯಗಳ ಚೌಕಟ್ಟು ಹಾಕಿದವರು. ವಿವಿಧ ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತುಮಕೂರು ಮತ್ತು ರಾಮನಗರ ಜಿಲ್ಲೆಗಳ ಶಾಲಾ ಮಕ್ಕಳಿಗೆ ಗಾಂಧೀ ತತ್ವಗಳನ್ನು ಪರಿಚಯಿಸಿದವರು. ಅವರು ರಚಿಸಿದ ಕಥನ ಕವನ ‘ಗಾಂಧೀ ಗೋವಿನ ಕಥೆ ‘ಮಕ್ಕಳಿಗೆ ಪ್ರಿಯವಾದ ಪುಸ್ತಿಕೆ.ಪ್ರೊ. ಎಂ. ಕರೀಮುದ್ದಿನ್ ಸಂಸ್ಮರಣೆಯಲ್ಲಿ ದ್ವಿತೀಯ ವರ್ಷದ ಈ ಗಾಂಧೀ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದು ಅತ್ಯಂತ ಸಮುಚಿತ ಎಂದು ಅಭಿಪ್ರಾಯಪಟ್ಟರು. ಮಂಡ್ಯದ ಖ್ಯಾತ ವೈದ್ಯ ಡಾ ಬಿ ಸುಜಯ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಡಾ.ಜಯಪ್ರಕಾಶ್ ಗೌಡ, ಸರ್ವೋದಯ ಮಂಡಲದ ಅಧ್ಯಕ್ಷ ಪ್ರೊ. ನಾಗಾನಂದ, ಪಿಇಟಿ ಸಮೂಹ ಸಂಸ್ಥೆ ಅಧ್ಯಕ್ಷ ಡಾ. ರಾಮಲಿಂಗಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
Karnataka Media Journalists Association congratulates Energy Minister on gift of new vehicles to journalists
ಚಿಕ್ಕಮಗಳೂರು ಜಿಲ್ಲೆಯ ಪತ್ರಕರ್ತರು ಸರ್ಕಾರಿ ಕಾರ್ಯಕ್ರಮ ಹಾಗೂ ಇನ್ನಿತರ ಸಭೆ ಸಮಾರಂಭಗಳಿಗೆ ಸುದ್ದಿಗೆ ಪ್ರಯಾಣಿಸಲು ವಾಹನದ ಇರಲಿಲ್ಲ. ಜಿಲ್ಲೆಯ ಪತ್ರಕರ್ತರ ಬಹುದಿನಗಳ ಬೇಡಿಕೆ ಕೂಡ ಆಗಿತ್ತು ಇದನ್ನು ಮನಗಂಡು ಇಂಧನ ಸಚಿವರು ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಜಾರ್ಜ್ ರವರು ಕೆಪಿಟಿಸಿಎಲ್ ವತಿಯಿಂದ 25 ಲಕ್ಷ ರೂ ವೆಚ್ಚದ ಸಿಎಸ್ಆರ್ ನಿಧಿ ಅಡಿಯಲ್ಲಿ ಪತ್ರಕರ್ತರಿಗೆ ಈ ವಾಹನವನ್ನು ಕೊಡುಗೆಯಾಗಿ ನೀಡಿದ್ದಾರೆ. ವಾಹನದಲ್ಲಿ 34 ಪತ್ರಕರ್ತರು ಪ್ರಯಾಣಿಸಬಹುದಾಗಿದ್ದು, ವಾಹನವು ಪತ್ರಕರ್ತರಿಗೆ ಅಗತ್ಯವಿತ್ತು.
ಜಿಲ್ಲಾ ಪತ್ರಕರ್ತ ಸಂಘವು ಸಚಿವರ ಗಮನಕ್ಕೆ ಹಿಂದೆಯೇ ತರಲಾಗಿತ್ತು. ಸಂಘದ ಬೇಡಿಕೆಗೆ ಸ್ಪಂದಿಸಿದ ಸಚಿವರಿಗೆ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ಪತ್ರಕರ್ತರ ಸಂಘಟನೆಯ ಜಿ.ಎಂ. ರಾಜಶೇಖರ್ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ವಾಹನ ವಿತರಣೆಯ ಸಂದರ್ಭದಲ್ಲಿ ಇಂಧನ ಸಚಿವ ಜಾರ್ಜ್ ರವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಕುಮಾರ್ ಬಿ.ಆರ್. ಪುರುಷೋತ್ತಮ್, ಅನಿಲ್ ಆನಂದ್, ವಿ.ಜೆ. ರಾಜೇಶ್, ಪ್ರಕಾಶ್ ಮೂರ್ತಿ, ಅಕ್ಷಯ್ ಮುಂತಾದ ಪತ್ರಕರ್ತರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪಂಚಾಯತಿ ಸಿಇಓ ಕೀರ್ತನ, ಎಸ್ ಪಿ. ಡಾ. ವಿಕ್ರಂ ಅಮಟೆ, ಡಿ.ಎಚ್.ಒ ಅಶ್ವತ್ ಬಾಬು, ಮತ್ತು ವಾರ್ತಾಧಿಕಾರಿ ಮಂಜೇಗೌಡ ಮುಂತಾದವರು ಉಪಸ್ಥಿತರಿದ್ದರು.
Distribution of motorized three-wheelers and sewing, carpentry, and laundry tools to the specially-abled
ಜಮಖಂಡಿ 05-01 : ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ, ತಾಲೂಕ ಪಂಚಾಯತ ಸಹಯೋಗದಲ್ಲಿ ನಡೆದ ವಿಶೇಷ ಚೇತನರಿಗೆ ಶೇ. 5ರಡಿಯಲ್ಲಿ ಯಂತ್ರ ಚಾಲಿತ ತ್ರಿಚಕ್ರ ವಾಹನ ಹಾಗೂ ಹೊಲಿಗೆ, ಬಡಗಿತನ, ಧೋಬಿ ವೃತ್ತಿಯ ಉಪಕರಣಗಳನ್ನು ವಿತರಣೆ ಸಮಾರಂಭಜರುಗಬೇಕಾದ ಕಾರ್ಯಕ್ರಮ ಸುಮಾರು 3 ಗಂಟೆಗಳ ಕಾಲ ವಿಳಂಬವಾದ ಹಿನ್ನಲೆಯಲ್ಲಿ ಶಾಸಕರಿಗೆ, ತಾ.ಪಂ.ಅಧಿಕಾರಿಗಳ ವಿರುದ್ಧ ವಿಶೇಷ ಚೇತನರು, ಫಲಾನುಭವಿಗಳು, ಸಾರ್ವಜನಿಕರು ಬೇಸರ ವ್ಯಕ್ತ ಪಡಿಸಿದ ಘಟನೆ ನಡೆಯಿತು.
ನಗರದ ತಾಲೂಕ ಪಂಚಾಯತ ಕಾರ್ಯಾಲಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಚೇತನರು, ವಿವಿಧ ಫಲಾನುಭವಿಗಳು ಬೆ. 9 ಗಂಟೆಗೆ ಆಗಮಿಸಿದರು. ಆದರೆ ಕಾರ್ಯಕ್ರಮ 3 ಗಂಟೆಗಳ ಕಾಲ ತಡವಾಗಿರುವ ಕಾರಣ ಚಿಕ್ಕ ಮಕ್ಕಳನ್ನು ತಂದಿರುವ ಮಹಿಳಾ ಫಲಾನುಭವಿಗಳು ಹಾಗೂ ವಿಶೇಷ ಚೇತನರ ಜೊತೆಗೆ ಆಗಮಿಸಿದ ಸಂಬಂಧಿಗಳು, ಸಾರ್ವಜನಿಕರು ಬಂದಿದ್ದು ಎಲ್ಲರೂ ತಾಲೂಕ ಪಂಚಾಯತ ಅಧಿಕಾರಿ ಮತ್ತು ಶಾಸಕರ ವಿರುದ್ಧ ಬೇಸರ ವ್ಯಕ್ತ ಪಡಿಸಿದರು.
ಗೊಂದಲದ ವಾತಾವರಣ : ವಿಶೇಷ ಚೇತನರಿಗೆ ಶೇ 5ರಡಿಯಲ್ಲಿ ಯಂತ್ರ ಚಾಲಿತ ತ್ರಿಚಕ್ರ ವಾಹನಗಳು 5 ಮಂಜೂರಾಗಿದ್ದು ಅವುಗಳನ್ನು ಸಾಲಾಗಿ ನಿಲ್ಲಿಸಲಾಗಿತ್ತು. ತ್ರಿಚಕ್ರ ವಾಹನಗಳ ಮೇಲೆ ಯಾವುದೇ ಸ್ಪೀಕರ್ ಇಲ್ಲದೆ ನಿಲ್ಲಿಸಿದರು. ಕೆಲವು ಸಮಯದ ಬಳಿಕ ಶಾಸಕರ ಪೋಟೋ ಹೊಂದಿರುವ ಸ್ಪೀಕರ್ ಅಂಟಿಸಲು ಗೊಂದಲದ ವಾತಾವರಣ ಸೃಷ್ಟಿಯಾಗಿತು. ನಂತರ ಶಾಸಕರ ಪೋಟೋ ಹೊಂದಿರುವ ಸ್ಪೀಕರ್ಗಳನ್ನು ತ್ರಿಚಕ್ರ ವಾಹನಗಳ ಮೇಲೆ ಅಂಟಿಸಿದರು. 3 ಗಂಟೆಗಳ ಕಾಲ ತಡವಾಗಿ ಬಂದ ಶಾಸಕ ಜಗದೀಶ ಗುಡಗುಂಟಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ವಿಶ್ವದಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಎಲ್ಲರೂ ಸರಕಾರಿ ಕೆಲಸದಲ್ಲಿಯೇ ಇರಬೇಕು ಎಂಬುವದನ್ನು ಮರೆತು. ಸ್ವಯಂ ಉದ್ಯೋಗವನ್ನು ಮಾಡುವ ಗುರಿ ಹೊಂದಬೇಕು. ಕೇಂದ್ರ, ರಾಜ್ಯ ಸರಕಾರ ಸಾಕಷ್ಟು ಸ್ವಯಂ ಉದ್ಯೋಗ ಮಾಡಲಿಕ್ಕೆ ಯೋಜನೆಗಳನ್ನು ಜಾರಿಗೆ ತಂದಿದೆ. ತಮ್ಮ ಮನೆಯ ಕುಟುಂಬಗಳನ್ನು ನಿರ್ವಹಿಸಲು ಮತ್ತು ಮೊತ್ತೊಬ್ಬರನ್ನು ಬೆಳೆಸಲು ತಾವುಗಳು ಸ್ವಯಂ ಉದ್ಯೋಗ ಮಾಡಿದರೆ ಮಾತ್ರ ಮುಂದೆ ಬರಲು ಸಾಧ್ಯ. ಎಲ್ಲರಿಗೂ ಸರಕಾರಿ ನೌಕರಿ ದೊರೆಯಲು ಸಾಧ್ಯವಿಲ್ಲ. ಕೌಶಲ್ಯ ಅಭಿವೃದ್ಧಿಗೆ ಸರಕಾರ ಸೌಲಭ್ಯಗಳನ್ನು ಫಲಾನುಭವಿಗಳಿಗೆ ನೀಡಿದೆ. ಅದನ್ನು ಪಡೆದುಸರಿಯಾಗಿಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಸಹಾಯಕ ಕಾರ್ಯನಿರ್ವಹಕ ಅಧಿಕಾರಿ ಸಿದ್ದಾರ್ಥ ಗೋರೆ, ಜಿಲ್ಲಾ ಕೈಗಾರಿಕಾ ಉಪನಿರ್ದೇಶಕ ಬಳ್ಳೂರಗಿ ಹಾಗೂ ಫಲಾನುಭವಿಗಳು ಇದ್ದರು.