ಸಾವಳಗಿ ಗ್ರಾಂ ಪಂ: ಅಧ್ಯಕ್ಷರಾಗಿ ಜಿನ್ನುಮತಿ, ಉಪಾಧ್ಯಕ್ಷರಾಗಿ ಕವಿತಾ ಆಯ್ಕೆ
Savalagi Gram Panchayat: Jinnumati elected as President, Kavita as Vice President




ಸಾವಳಗಿ: ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ಗ್ರಾಮ ಪಂಚಾಯತ ಅತಿ ಹೆಚ್ಚು ಸದಸ್ಯರನ್ನು ಒಳಗೊಂಡ ಗ್ರಾಮ ಪಂಚಾಯತಿಯು ಮತ್ತೆ ಬಿಜೆಪಿ ಮಡಿಲಿಗೆ. ಜಾನಪದ ಪರಿಷತ್ ತಾಲೂಕ ಮಟ್ಟದ ಅಧ್ಯಕ್ಷರಾದ ಪಾರ್ಶ್ವನಾಥ ಉಪಾಧ್ಯ ಅವರ ಧರ್ಮಪತ್ನಿಯಾದ ಶ್ರೀಮತಿ ಜಿನ್ನುಮತಿ ಪಾರ್ಶ್ವನಾಥ ಉಪಾಧ್ಯ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಕವಿತಾ ಸುನೀಲ್ ಪಾಟೋಳ್ಳಿ ಅವರು ಆಯ್ಕೆಯಾಗಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಅಧ್ಯಕ್ಷೆಯಾದ ಶ್ರೀಮತಿ ಜಿನ್ನುಮತಿ ಪಾರ್ಶ್ವನಾಥ ಉಪಾಧ್ಯ ಅವರು ಗ್ರಾಮದಲ್ಲಿರುವ ಅನೇಕ ಅಭಿವೃದ್ಧಿ ಕಾರ್ಯಗಳು, ಸಮಸ್ಯೆಗಳಿಗೆ ಒತ್ತು ನೀಡುತ್ತೇನೆ. ಗ್ರಾಮವನ್ನು ಮಾದರಿ ಗ್ರಾಮ ಮಾಡುತ್ತೇವೆ, ಸಾರ್ವಜನಿಕರ ಸಮಸ್ಯೆಗೆ ಹಗಲಿರುಳು ಶ್ರಮಿಸುತ್ತೇನೆ ಹಾಗೂ ನನ್ನನ್ನು ಅಧ್ಯಕ್ಷನಾಗಿ ಆಯ್ಕೆ ಮಾಡಿದ ಪಕ್ಷದವರಿಗೆ ಹಾಗೂ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಗಿರೀಶ್ ಕಡಕೋಳ, ಗ್ರಾಂ ಪಂ ಸದಸ್ಯರಾದ ಬಸುಗೌಡ ಪರಮಗೌಡ, ರಾಜುಗೌಡ ಪಾಟೀಲ, ಸುಜೀತಗೌಡ ಪಾಟೀಲ, ವಿನೋಬಾ ನ್ಯಾಮಗೌಡ, ಸಿದ್ದಾರ್ಥ್ ತಳಕೇರಿ, ಹಣಮಂತ ಸಂತಿವೂರ, ಗಾಮೇಶ ಬಾಪಕರ, ಭರತೇಶ ಜಮಖಂಡಿ, ನಂದಕುಮಾರ ಕನೇರಿ, ಶಂಕರ್ ಐನಾಪೂರ, ರಾಜು ಕರಾಬೆ, ಹಿರಿಯರಾದ ರಾಮಣ್ಣ ಬಂಡಿವಡ್ಡರ, ಪಾರ್ಶ್ವನಾಥ ಉಪಾಧ್ಯ, ಅಶೋಕ್ ಮಾಂಗ, ಸಂಜು ಮಾಳಿ ಹಾಗೂ ಸಿಬ್ಬಂದಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಜೀವಸಂಕುಲದ ರಕ್ಷಣೆಗೆ ಪರಿಸರ ಸಂರಕ್ಷಣೆ ಅವಶ್ಯ- ನಿವೃತ್ತ ಶಿಕ್ಷಣ ಅಧಿಕಾರಿಚಂದ್ರಶೇಖರ್
Environment protection is necessary to protect the living environment - Chandrasekhar, a retired education officer.

ಗಂಗಾವತಿ: ಸಕಲ ಜೀವರಾಶಿಗಳ ಅಳಿವು ಉಳಿವು ನಮ್ಮ ಸುತ್ತಲಿನ ಪರಿಸರದ ಮೇಲೆ ಅವಲಂಬಿತವಾಗಿದ್ದು ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಮುಂದಾಗಬೇಕೆಂದು ನಿವೃತ್ತ ಶಿಕ್ಷಣ ಇಲಾಖೆ ಅಧಿಕಾರಿ ಚಂದ್ರಶೇಖರ್ ಹೇಳಿದರು ಅವರು ರವಿವಾರದಂದು ತಇಟಾ ಶಿಕ್ಷಣ ಸಂಸ್ಥೆ ಹಾಗೂ ಜನಶಕ್ತಿ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಯೋಜಿಸಿದ ಪರಿಸರ ದಿನಾಚರಣೆ ಸಂದರ್ಭದಲ್ಲಿ ಸಸನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು, ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಗಿಡಮರಗಳನ್ನು ಕಾಡುಗಳನ್ನು ನಾಶ ಮಾಡುತ್ತಿರುವುದು ಆತಂಕಕಾರಿಯಾಗಿದೆ ಈ ಹಿನ್ನೆಲೆಯಲ್ಲಿ ಮನೆಗೆ ಒಂದು ಮರದಂತೆ ಊರಿಗೆ ಒಂದು ಉದ್ಯಾನವನ ನಿರ್ಮಿಸಲು ಪ್ರತಿಯೊಬ್ಬರು ಮುಂದಾಗಬೇಕೆಂದು ತಿಳಿಸಿದರು ಸಂಸ್ಥೆಯ ಅಧ್ಯಕ್ಷ ಶೇಕ್ ನಬಿ ಸಾಬ್ ಮಾತನಾಡಿ ಮಾತನಾಡಿ, ಸಾಲುಮರದ ತಿಮ್ಮಕ್ಕನಂತೆ ಪ್ರತಿಯೊಬ್ಬರು ಹೇಳಮರಗಳನ್ನು ಬೆಳೆಸುವುದರ ಮೂಲಕ ಹಸಿರು ನಗರ ವನ್ನಗಿಸಲು ಪ್ರತಿಯೊಬ್ಬರು ಕಂಕಣಬದ್ದ ರಾಗಬೇಕು, ಸಸಿಗಳನ್ನು ಹಾಕುವುದು ಅಷ್ಟೇ ಅಲ್ಲ ಅವುಗಳನ್ನು ಮಕ್ಕಳಂತೆ ಜೋಪಾನ ಮಾಡಲು ಅಗತ್ಯ ಕ್ರಮಗಳನ್ನು ಅನುಸರಿಸಬೇಕೆಂದರು, ಸಂಸ್ಥೆ ಮುಖ್ಯೋಪಾಧ್ಯಾಯ ತಾಜುದ್ದೀನ್ ಪರಿಸರ ಕುರಿತಂತೆ ಪ್ರಮಾಣ ವಚನ ಬೋಧಿಸಿದ,ರು,, ಶಿಕ್ಷಕ ಲಿಂಗಾರೆಡ್ಡಿ ಆಲೂರ್ ಪ್ರಾಸ್ತಾವಿಕವಾಗಿ ಮಾತನಾಡಿದರು ಪರಿಸರ ಕುರಿತು ಮಕ್ಕಳು ಘೋಷಣೆಗಳನ್ನು ಕೂಗಿದರು, ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರ ಕೆ ಮಂಜುನಾಥ್ ಯೂಸುಫ್ ಪಂಪಾಪತಿ ದುರ್ಗಾ ಪ್ರಸಾದ್, ವಿದ್ಯಾರ್ಥಿ ಪಾಲಕರಾದ ಹೇಮಾವತಿ ಶೇಷಗಿರಿ ಇತರರು ಪಾಲ್ಗೊಂಡಿದ್ದರು ಬಳಿಕ ಸಾರ್ವಜನಿಕರಿಗೆ ಸಸಿಗಳನ್ನು. ವಿತರಿಸಲಾಯಿತು,