The fertile soil of the ancient Lakshminarayan Lake was illegally looted
ಫಲವತ್ತಾದ ಮಣ್ಣು ಅಕ್ರಮವಾಗಿ ಲೂಟಿ ರೈತರ ಜಮೀನಿನ ಬದಲಿಗೆ ಇಟ್ಟಿಗೆ ಭಟ್ಟಿಗೆ
ಗಂಗಾವತಿ ಮಾ.03;ತಾಲ್ಲೂಕಿನ ಸಂಗಾಪುರ ಗ್ರಾಮದ ಬಳಿ ಇರುವ ಪುರಾತನ ಲಕ್ಷ್ಮಿನಾರಾಯಣ ಕೆರೆಯ ಫಲವತ್ತಾದ ಅಪಾರ ಪ್ರಮಾಣ ಮಣ್ಣನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ದಲಿತ ಸಂಘಟನಾ ಸಮಿತಿ ಕೊಪ್ಪಳ ಜಿಲ್ಲಾಧ್ಯಕ್ಷ ಅಜಯಕುಮಾರ ಛಲವಾದಿ ಆರೋಪಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿ, ಕೆರೆಯಲ್ಲಿ ಹೂಳು ತುಂಬಿದ ಎಂಬ ನೆಪದಲ್ಲಿ ಅಕ್ರಮವಾಗಿ ಎತ್ತುವಳಿ ಮಾಡಲಾಗುತಿದೆ. ಮಣ್ಣು ಸಾಕಷ್ಟು ಫಲವವ ತಾಗಿದೆ. ರೈತರ ಜಮೀನಿಗೆ ಸಾಗಿಸಲು ಮಾತ್ರ ಅವಕಶವಿದೆ. ಆದರೆ ಇಲ್ಲಿನ ಫಲವತ್ತಾದ ಮಣ್ಣನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ.
ಸಾಗಿಸಲಾಗುತ್ತಿದೆ ಗಂಗಾವತಿ ತಾಲ್ಲೂಕಿನ ಸಂಗಾಪುರ ಗ್ರಾಮದ ಲಕ್ಷ್ಮಿನಾರಾಯಣ ಕೆರೆಯಿಂದ ಅಕ್ರಮವಾಗಿ ಸಾಗಿಸುತ್ತಿರುವ ಕೆರೆಯ ಮಣ್ಣುದಾಸನಾಳ, ಇಟ್ಟಿಗೆ ಬಟ್ಟಿಗಳಿಗೆ ಅಕ್ರಮವಾಗಿ , ಚಿಕ್ಕಬೆಣಕಲ್, ಸಾಗಿಸಲಾಗುತ್ತಿದ್ದು, ನಿತ್ಯ
ಬಸವಪಟ್ಟಣ ವೆಂಕಟಗಿರಿ ಉಡುವಂಕಲ್ – ಗಡ್ಡಿ ನೂರಾರು ಟಿಪ್ಪರ್ ಪ್ರಮಾಣದ ಕೊಟ್ಟಿದ್ದಾರೆ ಗ್ರಾಮದಲ್ಲಿರುವ ನೂರಾರು ಮಣ್ಣನ್ನು ಅನಧಿಕೃತವಾಗಿ ಹೇಳುತ್ತಿದ್ದಾರೆ.
ರಾತ್ರಿ ಹತ್ತರಿಂದ ಬೆಳಗ್ಗೆ ಐದು ಗಂಟೆವರೆಗೆ ಗಂಗಾವತಿ ನಗರದಲ್ಲಿ ನೂರಾರು ಟಿಪ್ಪರ್ ಗಳು ಓಡಾಡುತಿವೆ. ಕಂದಾಯ, ಪೊಲೀಸ್ ಸೇರಿದಂತೆ ನಾನಾ ಆ ಇಲಾಖೆಯ ಅಧಿಕಾರಿಗಳ ಕಣ್ಣ ಮುಂದೆಯೇ ಟಿಪ್ಪರ್ಗಳು ಓಡಾಡುತ್ತಿದ್ದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ ಎಂದು ಅಜಯಕುಮಾರ ಛಲವಾದಿ ಆರೋಪಿಸಿದ್ದಾರೆ. ಅಧಿಕಾರಿಗಳಿಂದ ಹಾರಿಕೆ ಉತ್ತರ; ಬಗ್ಗೆ ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕ ಮಂಜುನಾಥ ಅವರಿಗೆ ಸಂಪರ್ಕಿಸಿದರೆ ಈಗಾಗಲೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುತ್ತಿದೆ. ಆ ಇಲಾಖೆಯವರು ಅನುಮತಿ ಎಂದು ಆದರೆ ಎಷ್ಟು ಪ್ರಮಾಣದ ಮಣ್ಣು ತೆಗೆಯಲು ಅವಕಾಶ ನೀಡಲಾಗಿದೆ. ರಾವ ಸಮಯದಲ್ಲಿ ತೆಗೆಯಬೇಕು ಎಂಬ ಯಾವುದೇ ಮಾಹಿತಿ ಇಲ್ಲ. ತಹಸೀಲ್ದಾರ್ ಯು. ನಾಗರಾಜ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ದಿಲೀಪ್, ಕಿರಿಯ ವಿಜ್ಞಾನಿ ಸನೀತ್ ಹಾರಿಕೆ ಉತ್ತರ ನೀಡುತ್ತಿದ್ದಾರೆ.
ಕೋಟ್ಯಂತರ ರೂಪಾಯಿ ಮೌಲ್ಯದ ಫಲವತ್ತಾದ ಮಣ್ಣನ್ನು ಲೂಟಿ ಮಾಡಲಾಗುತ್ತಿದೆ. ಇದರ ಹಿಂದೆ ವಿವಿಧ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದು, ಸಂಘಟನೆಯಿಂದ ಅಧಿಕಾರಿಗಳ ಅಮಾನತ್ತಿಗೆ ಒತ್ತಾಯಿಸಿ ಧರಣಿ ಪ್ರತಿಭಟನೆ ಹಮ್ಮಿಕೊಳ್ಳ ಲಾಗುವುದು ಎಂದು ನೀಡಿದ್ದಾರೆ.