Breaking News

ಎಂಥ ಬೋಗಸ್ ಬೋರ್ಡ್ !?

What a bogus board!?

ಜಾಹೀರಾತು
Screenshot 2023 12 21 08 05 46 77 6012fa4d4ddec268fc5c7112cbb265e7 209x300

ವಿಶ್ವಾರಾಧ್ಯ ಸತ್ಯಂಪೇಟೆ,ಬಸವಮಾರ್ಗ ಪ್ರತಿಷ್ಠಾನ

ಈ ವೀರಶೈವವಾದಿಗಳಿಂದ ಎಂಥೆಂಥ ವಿವೇಕರಹಿತವಾದ ವಿಚಾರ ತಿಳಿದುಕೊಳ್ಳಬೇಕಾಗಿದೆಯಲ್ಲ ! ಎಂದು ಮನಸ್ಸಿಗೆ ತುಂಬಾ ನೋವಾಗುತ್ತದೆ. ವಚನ ಸಾಹಿತ್ಯ ,ಶಾಸನಗಳು, ಹಲವಾರು ಆಕರ ಗ್ರಂಥಗಳ ಉಲ್ಲೇಖಗಳೆ ತಿಳಿಸುವಂತೆ ಘನಲಿಂಗ ರುದ್ರಮುನಿ ಚೆನ್ನಬಸವಣ್ಣನವರಿಂದ ದೀಕ್ಷೆ ಪಡೆದುಕೊಂಡವರು.

ದುರಂತ ಎಂಥದ್ದೆಂದರೆ ಇಲ್ಲಿ ಬಸವಣ್ಣನವರ ಪತ್ನಿ , ಗಂಗಾಂಬಿಕೆ ತಾಯಿಯೂ ಸಹ ಈ ಘನಲಿಂಗ ರುದ್ರಮುನಿಯಿಂದ ದೀಕ್ಷೆ ಪಡೆದಳಂತೆ ! ಛೇ ಇಂಥ ಮತಿಗೆಟ್ಟವರಿಂದ ರುದ್ರಮುನಿ ಶರಣರಿಗೆ ಅವಮಾನವಲ್ಲವೆ ? ತಾಯಿಯ ಉದರದಿಂದ ಪಿಂಡ ಹೊರತೆಗೆದು ಮಣ್ಣಿನಲ್ಲಿಟ್ಟರೆ ಅದು ಜೀವಂತವಾಗಿದ್ದು ಬೆಳೆಯಬಲ್ಲುದೆ ?

ಸೌಂದರ್ಯ ದೇವಿಯ ಹೊಟ್ಟೆಯಲ್ಲಿರುವ ಪಿಂಡವನ್ನು ಹೊರ ತೆಗೆದು, ಅದನ್ನು ಮಣ್ಣಿನಲ್ಲಿ ಹೂತಿಟ್ಟ ಮೇಲೆ ಘನಲಿಂಗ ರುದ್ರಮುನಿಗಳು ಜನಿಸಿದರಂತೆ.

ಇಂತಹ ಕಪೋಲ ಕಲ್ಪಿತ ಕಥೆ ಕಟ್ಟಿ ಲಿಂಗಾಯತರ ತಲೆ ಬೋಳಿಸುವ ಕೆಲಸ ಇನ್ನಾದರೂ ನಿಲ್ಲಿಸಿರಿ. ಇಲ್ಲದಿದ್ದರೆ ಪ್ರಜ್ಞಾವಂತ ಲಿಂಗಾಯತರು ನಿಮ್ಮನ್ನು ಕಲ್ಯಾಣದ ಬೀದಿ ಬೀದಿಯಲ್ಲಿ ಬೆನ್ನುಹತ್ತಿ ಬಾರಿಸುವ ದಿನಗಳು ದೂರವಿಲ್ಲ ,ಅಲ್ಲವೆ

ವಿಶ್ವಾರಾಧ್ಯ ಸತ್ಯಂಪೇಟೆ,ಬಸವಮಾರ್ಗ ಪ್ರತಿಷ್ಠಾನ

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.