PhD conferred on Vannur Swamy

ವನ್ನೂರ್ ಸ್ವಾಮಿ ಅವರಿಗೆ ಪಿಎಚ್ಡಿ ಪ್ರದಾನ
ಗಂಗಾವತಿ:ಅನಂತಪುರ ಜಿಲ್ಲೆ ರಾಯದುರ್ಗ ತಾಲೂಕು ಓಬಳಾಪುರ ಗ್ರಾಮದ ನಿವಾಸಿ ಕುರುಬ ವನ್ನೂರ್ ಸ್ವಾಮಿ ಅವರಿಗೆ ಮಂಗಳೂರು ವಿಶ್ವವಿದ್ಯಾಲಯವು ಪಿಎಚ್ಡಿ ಪದವಿಯನ್ನು ಪ್ರದಾನ ಮಾಡಿದೆ. ಇವರು ಸೆಕ್ಯೂರಿಟಿ ಎನ್ಹ್ಯಾನ್ಸ್ಮೆಂಟ್ ಅಂಡ್ ಪ್ರೈವಸಿ ಪ್ರೊಟೆಕ್ಷನ್ ಫಾರ್ ಮಲ್ಟಿಮೋಡಲ್ ಬಯೊಮೀಟ್ರಿಕ್ ಸಿಸ್ಟಮ್ಸ್ ಎಂಬ ವಿಷಯದಲ್ಲಿ ಸಲ್ಲಿಸಿದ ಮಹಾಪ್ರಬಂಧಕ್ಕಾಗಿ ಮಂಗಳೂರು ವಿಶ್ವವಿದ್ಯಾನಿಲಯ ಪಿಎಚ್ ಡಿ ಪದವಿ ನೀಡಿದೆ. ಗಣಕ ವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ಬಿ . ಎಚ್ . ಶೇಖರ್ ಮಾರ್ಗದರ್ಶನ ನೀಡಿದ್ದರು. ತಂದೆ ಇಲ್ಲದಿದ್ದರೂ ತಾಯಿ ಆಶೀರ್ವಾದದೊಂದಿಗೆ ದೂರದ ಊರಿಗೆ ಹೋಗಿ ಉತ್ತಮ ಜೀವನ ರೂಪಿಸಿಕೊಳ್ಳಲು ಶಿಕ್ಷಣ ಅತ್ಯವಶ್ಯಕ ಎಂದು ಸ್ನಾತಕೋತ್ತರ ಪದವಿಯನ್ನು ಪಡೆದು ಯಶಸ್ವಿಯಾದಂತಹ ಹೊನ್ನೂರ ಸ್ವಾಮಿಯವರು
ಎಂದು ಶಿಕ್ಷಕರು ಬಯಲಾಟ ಕಲಾವಿದರು ಕಂದರ್ ತಿಪ್ಪೇಸ್ವಾಮಿ ಅವರು ತಿಳಿಸಿದರು










Leave a Reply