Breaking News

ಯುವತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ

Missing young woman: appeal for help in search

ಜಾಹೀರಾತು

ಕೊಪ್ಪಳ ಆಗಸ್ಟ್ 24 (ಕರ್ನಾಟಕ ವಾರ್ತೆ): ಗಂಗಾವತಿ ತಾಲೂಕಿನ ಬಾಪಿರೆಡ್ಡಿ ಕ್ಯಾಂಪ್ ಗ್ರಾಮದ ನಿವಾಸಿ ರಾಧಾ ತಂದೆ ಶ್ರೀನಿವಾಸ ಬುದ್ದಾಲ ಎಂಬ ಯುವತಿಯು 2023ರ ಆಗಸ್ಟ್ 19 ರಿಂದ ಕಾಣೆಯಾಗಿದ್ದು ಈ ಬಗ್ಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 180/2023. ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಆಗಸ್ಟ್ 19ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ತಾನು ಗಂಗಾವತಿಯ ಕಾಲೇಜಿಗೆ ಹೋಗುವುದಾಗಿ ತನ್ನ ತಾಯಿಗೆ ಹೇಳಿ ಹೋದವಳು ರಾತ್ರಿಯಾದರು ಮನೆಗೆ ಬಂದಿರುವುದಿಲ್ಲ. ಅವಳ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ವಿವಿಧೆಡೆ ಹುಡುಕಿದರು ಸಿಕ್ಕಿರುವುದಿಲ್ಲ‌ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಾಣೆಯಾದ ಯುವತಿಯ ವಯಸ್ಸು 19 ವರ್ಷ, 5 ಅಡಿ ಎತ್ತರ, ದುಂಡು ಮುಖ, ಗೋಧಿ ಮೈಬಣ್ಣ,ತಳ್ಳನೆಯ ಮೈಕಟ್ಟು, ಕನ್ನಡ, ತೆಲಗು ಭಾಷೆ ಮಾತನಾಡುತ್ತಾಳೆ. ಮೈ ಮೇಲೆ ಚೂಡಿಧಾರ ಧರಿಸಿ ಹೋಗಿರುತ್ತಾಳೆ. ಈ ಬಗ್ಗೆ ಯಾರಿಗಾದರು ಮಾಹಿತಿ ದೊರೆತಲ್ಲಿ ಅಥವಾ ಪತ್ತೆಯಾದಲ್ಲಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ದೂ.ಸಂ: 08533-230854 ಅಥವಾ ಮೊ.ಸಂ: 9480803730 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಸಹಾಯಕ ಆರಕ್ಷಕ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About Mallikarjun

Check Also

screenshot 2025 08 10 21 19 21 20 e307a3f9df9f380ebaf106e1dc980bb6.jpg

ಕಾ ಮಹರಾಜ್ ಗಣಪತಿಯ ಧ್ವಜಸ್ತಂಭ ಪ್ರತಿಷ್ಠಾಪನೆ

Installation of the flag pole of Ka Maharaj Ganapati ಗಂಗಾವತಿ : ಗಂಗಾವತಿ ಕಾ ಮಹಾರಾಜ್ ಗಣಪತಿಯ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.