Breaking News

*ಗ್ರಾಮ ಪಂಚಾಯತ ನಿರ್ಲಕ್ಷ್ಯ,ಬರಿ ಮತಗಳಿಗೆ ಸಿಮಿತವಾದ ನಾಯಕರು

Screenshot 2024 06 24 21 02 53 99 6012fa4d4ddec268fc5c7112cbb265e7 300x225

ಹಲವು ವರ್ಷಗಳಿಂದ ಮಹಿಳಾ ಶೌಚಾಲಯ ಇಲ್ಲದೇ ಪರದಾಟ

ಸಾವಳಗಿ: ತಾಲ್ಲೂಕಿನ ದೊಡ್ಡ ಹೋಬಳಿ ಕೇಂದ್ರವಾಗಿರುವ ಸಾವಳಗಿ ಹಲವಾರು ಮೂಲಸೌಕರ್ಯಗಳಿಂದ ವಂಚಿತವಾಗಿದ್ದು, ಗ್ರಾಮದ ಜನರು ಜೀವನ ನಡೆಸುವುದೇ ದುಸ್ತರವಾಗುತ್ತಿದೆ. ಅದರಲ್ಲಿಯೂ ವಿಶೇಷವಾಗಿ ಮಹಿಳೆಯರಿಗೆ ಹಾಗೂ ಪುರುಷರಿಗೆ ವಿದ್ಯಾ ನಗರದ ಸೇರಿದಂತೆ ಅನೇಕ ಕಡೆ ಶೌಚಾಲಯವಿಲ್ಲದೇ ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಜಾಹೀರಾತು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿಯೇ ಅತಿದೊಡ್ಡ ಗ್ರಾಮ ಸಾವಳಗಿ, ಹಾಗೂ ಗ್ರಾಮ ಪಂಚಾಯತಿಯ ಇಲ್ಲಿ 32 ಜನ ಸದಸ್ಯರನ್ನು ಹೊಂದಿದ್ದು ಕಳೆದ ಬಾರಿ ಗಾಂಧಿ ಪುರಸ್ಕಾರ ಪಡೆದ ಗ್ರಾಮ ಪಂಚಾಯತಿಯ ಸಾವಳಗಿದ್ದು.

ಅದು ಹಿಂದೆ ರಾಷ್ಟ್ರಪತಿ, ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿ.ಡಿ.ಜತ್ತಿ ಅವರ ಊರು ಈಗಿನ ಪ್ರತಿಷ್ಠಿತ ಇನ್ಪೋಸಿಸ್ ಕಂಪನಿಯ ಸುಧಾಮೂರ್ತಿಯವರ ಮೂಲ ಊರು ಸಾವಳಗಿ ಗ್ರಾಮ.

ಅಷ್ಟೇ ಅಲ್ಲದೆ ಜಮಖಂಡಿ ತಾಲೂಕಿನ ಹಲವಾರು ಜನಪ್ರತಿನಿಧಿಗಳು ಈ ಗ್ರಾಮದ ಮತಗಳಿಂದ ಆಯ್ಕೆಯಾಗಿದ್ದಾರೆನ್ನುವದು ಸಹ ಮರೆತಿದ್ದಾರೆ ಎಂದು ಅನಿಸುತ್ತದೆ ಯಾಕೆಂದರೆ ಸುತ್ತಲಿನ 23 ಹಳ್ಳಿಗಳನ್ನು ಹೊಂದಿರುವ ಸಾವಳಗಿ ಹೋಬಳಿ ಎನಿಸಿಕೊಂಡಿದ್ದರು ಅಭಿವೃದ್ಧಿ ಮರೀಚಿಕೆಯಾಗಿದೆ.

ಶೌಚಾಲಯಗಳಿಲ್ಲದೇ ನಿತ್ಯವೂ ಮಹಿಳೆಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮಹಿಳೆಯರಿಗೆ ಬೇಕಾದ ಅತ್ಯಂತ ಕನಿಷ್ಠ ಸೌಲಭ್ಯಗಳನ್ನೂ ಒದಗಿಸುವಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗಿದೆ ಎಂದು ದೂರಿದೆ.

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ತಮ್ಮ ಮನೆಗಳಲ್ಲಿ ಮಾತ್ರ ಲಕ್ಷ ಲಕ್ಷ ಖರ್ಚು ಮಾಡಿ ಹೊರದೇಶದ ರೀತಿಯ ಶೌಚಾಲಯ ನಿರ್ಮಿಸಿಕೊಂಡು ಒಳ್ಳೆಯ ಬದುಕು ನಡೆಸುತ್ತಿರುವ ಜನಪ್ರತಿನಿಧಿಗಳು, ಗ್ರಾಮೀಣ ಮಹಿಳೆಯರ ಕಷ್ಟಗಳನ್ನುಅರಿತುಕೊಳ್ಳಬೇಕು. ಸರ್ಕಾರದಿಂದ ಸಾಕಷ್ಟು ಹಣ ಬಿಡುಗಡೆಯಾಗುತ್ತಿದ್ದು. ಅಧಿಕಾರಿಗಳು ಮಾತ್ರ ಶೌಚಾಲಯ ನಿರ್ಮಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಹಳೆಯ ಕಾಲದ ಅಲ್ಲೊಂದು, ಇಲ್ಲೊಂದು ಶೌಚಾಲಯವಿದ್ದು, ಸುತ್ತಲೂ ಜಾಲಿಗಿಡ ಬೆಳೆದು ನಿಂತಿವೆ. ಹೊಸ ಶೌಚಾಲಯ ನಿರ್ಮಿಸುವಂತೆ ಅಧಿಕಾರಿಗಳನ್ನು ಕೇಳಿದರೆ, ನಿರ್ಮೀಸೋಣ ಎಂದು ಭರವಸೆ ನೀಡುತ್ತಾರೆ.

ಬಾಕ್ಸ್: ಶೌಚಾಲಯ ನಿರ್ಮಾಣ ಹಾಗೂ ಕೆರೆಗಳು ಅಭಿವೃದ್ಧಿ ಕಾರ್ಯ ಸೇರಿದಂತೆ ಅನೇಕ ಕೆಲಸಗಳು ಗ್ರಾಮದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ, ಇದರ ಬಗ್ಗೆ ಮೇಲಾಧಿಕಾರಿಗಳು ಗಮನ ಹರಿಸಬೇಕು

ಹೇಸರು ಹೇಳದ ಸಾವಳಗಿ ಗ್ರಾಮಸ್ಥ

About Mallikarjun

Check Also

screenshot 2025 09 29 21 39 39 72 e307a3f9df9f380ebaf106e1dc980bb6.jpg

ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ

District Guarantee Schemes Progress Review Meeting ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಗ್ಯಾರಂಟಿ ಫಲಾನುಭವಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆತನ್ನಿ: ರೆಡ್ಡಿ ಶ್ರೀನಿವಾಸ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.