ವಿದ್ಯಾರ್ಥಿಗಳಿಗೆ ಪಠ್ಯ ಪೂರಕ ಪರಿಕರಗಳ ವಿತರಣೆ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು





Distribution of supplementary materials to students

ವಿದ್ಯಾರ್ಥಿಗಳಿಗೆ ಪಠ್ಯ ಪೂರಕ ಪರಿಕರಗಳ ವಿತರಣೆ

ಜಾಹೀರಾತು

ಕೊಪ್ಪಳ: ಎಸ್ ಎಸ್ ಎಲ್ ಸಿ ಮತ್ತು ಪಿ.ಯು. ದ್ವಿತೀಯ ಪರೀಕ್ಷೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡರ ಬಣದ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಸನ್ಮಾನಿಸಿ,ಪಠ್ಯ ಪೂರಕ ಪರಿಕರಗಳನ್ನು ವಿತರಿಸಲಾಯಿತು.

ವೇದಿಕೆಯ ಜಿಲ್ಲಾಧ್ಯಕ್ಷ ಶಿವರಾಜ ಉಳ್ಳಾಗಡ್ಡಿ ಅವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ನಿರ್ಗತಿಕ ಮಕ್ಕಳಿಗೆ ಬ್ಯಾಗ್, ಬುಕ್, ಪೆನ್, ಪೆನ್ಸಿಲ್ ಗಳನ್ನು ವಿತರಿಸಿ ಪ್ರೋತ್ಸಾಹಿಸಲಾಯಿತು. ಇದರೊಂದಿಗೆ ವಿಧವಾ ಮಹಿಳೆಯರಿಗೆ ಊಟದ ಬಾಕ್ಸ್ಗಳನ್ನು ವಿತರಿಸಿ ನಿಮ್ಮೆಲ್ಲ ಸಂಕಷ್ಟಗಳ ಜೊತೆಗೆ ನಾವಿರುವುದಾಗಿ ನೈತಿಕ ಬೆಂಬಲ ನೀಡಿದರು.

ಆಟೋ ಘಟಕದ ಜಿಲ್ಲಾಧ್ಯಕ್ಷ ಸಂಜಯದಾಸ್ ಕೌಜಗೇರಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಾಗರತ್ನ ಅಳವಂಡಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಪಠ್ಯ ಪೂರಕ ಪರಿಕರಗಳು ವಿತರಿಸಿ, ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪ್ರೋತ್ಸಾಹಿಸಿದರು.

ವೇದಿಕೆಯ ಕೊಪ್ಪಳ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಶೇರು, ಸಾಮಾಜಿಕ ಹೋರಾಟಗಾರರಾದ ರಾಮಲಿಂಗ ನಾಯ್ಕ, ಶಾಸ್ತ್ರೀ ಮಠ, ಆಟೋ ಜಿಲ್ಲಾ ಘಟಕದ, ಯಲ್ಲಪ್ಪ ಹಳ್ಳಿಕೇರಿ, ಕರವೇ ಜಿಲ್ಲಾ ಆಟೋ ಘಟಕ ಜಿಲ್ಲಾ ಅಧ್ಯಕ್ಷರು, ಜಿಲ್ಲಾ ಮಹಿಳಾ ಘಟಕದ ಪಧಾಧಿಕಾರಿಗಳು ಉಪಸ್ಥಿತರಿದ್ದ ಈ ವೇಳೆ ಪ್ರತಿಭಾ ಹಾಗೂ ಗದಗ ಜಿಲ್ಲೆಯ ಎಂ.ಬಿ.ನದಾಫ್ ವಕೀಲರು, ಕೊಪ್ಪಳ ಬಸವಶ್ರೀ ಗುರು ಪೀಠದ ಮಂಜುಳಾ ಬಸವಶ್ರೀ ಟ್ರಸ್ಟ್,  ಪೂರ್ಣಿಮಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

Total Views: 0
Share This Article