ಇಂದರಗಿಯಲ್ಲಿ ಅದ್ದೂರಿಯಾಗಿ ಜರುಗಿದ ಶಾಲಾ ವಾರ್ಷಿಕೋತ್ಸವ

School anniversary celebrated with grandeur in Indaragi

ಇಂದರಗಿಯಲ್ಲಿ ಅದ್ದೂರಿಯಾಗಿ ಜರುಗಿದ ಶಾಲಾ ವಾರ್ಷಿಕೋತ್ಸವ


ಗಂಗಾವತಿ:ಮಾ.14:ಶಾಲಾ ವಾರ್ಷಿಕೋತ್ಸವವು ಕೇವಲ ಒಂದು ಹಬ್ಬವಲ್ಲ; ಅದು ವಿದ್ಯಾರ್ಥಿಗಳ ಒಂದು ವರ್ಷದ ಪರಿಶ್ರಮ, ಶಿಸ್ತಿನ ಜೀವನ ಮತ್ತು ಸಾಧನೆಗಳ ಸಂಭ್ರಮವಾಗಿದೆ.ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಮ್ಸಿ ಅಧ್ಯಕ್ಷ ಡಾ.ಅಮರೇಶ ಕುಂಬಾರ ಹೇಳಿದರು.
ಕೊಪ್ಪಳ ತಾಲೂಕು ಗಂಗಾವತಿ ವಿಧಾನ ಸಭಾ ಕ್ಷೇತ್ರದ ಇಂದರಗಿಯ ಶ್ರೀ ಇಂದ್ರೇಶ್ವರ ಹಿರಿಯ ಪ್ರಾಥಾಮಿಕ ಶಾಲೆಯ 16ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಶಿಕ್ಷಣ ಎಂದರೆ ಕೇವಲ ಪಠ್ಯಪುಸ್ತಕಗಳಲ್ಲಿನ ಜ್ಞಾನವಲ್ಲ ಅದು ವ್ಯಕ್ತಿತ್ವ ನಿರ್ಮಾಣ, ನೈತಿಕ ಮೌಲ್ಯಗಳು ಮತ್ತು ಆತ್ಮವಿಶ್ವಾಸ ಬೆಳೆಸುವ ಪ್ರಕ್ರಿಯೆ ಮತ್ತು ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮಗಳಲ್ಲಿ ವಿದ್ಯಾಭ್ಯಾಸ ನೀಡುತ್ತಿರುವ ನಮ್ಮ ಶಾಲೆ, ವಿದ್ಯಾರ್ಥಿಗಳಿಗೆ ಜಾಗತಿಕ ಜ್ಞಾನದ ಜೊತೆಗೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಅರಿವು ನೀಡುತ್ತಿರುವುದು ಅತ್ಯಂತ ಶ್ಲಾಘನೀಯ.


ಇಂದು ಮಕ್ಕಳು ಪ್ರದರ್ಶಿಸುವ ನೃತ್ಯ, ಗಾಯನ, ನಾಟಕ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಅವರ ಅಡಗಿದ ಪ್ರತಿಭೆಗಳ ಸುಂದರ ಅಭಿವ್ಯಕ್ತಿಯಾಗಿವೆ. ವೇದಿಕೆಯ ಮೇಲೆ ನಿಲ್ಲುವ ಧೈರ್ಯವೇ ಅವರ ಭವಿಷ್ಯದ ನಾಯಕತ್ವ ಗುಣಗಳ ಆರಂಭವಾಗಿದೆ.
ಶಿಕ್ಷಕರ ಪರಿಶ್ರಮ,ಮುಖ್ಯವಾಗಿ ಪೋಷಕರು ಪ್ರೋತ್ಸಾಹ ಮತ್ತು ಮಕ್ಕಳ ಶ್ರದ್ಧೆ ಈ ಮೂರೂ ಸೇರಿ ಶಾಲೆಯ ಯಶಸ್ಸಿನ ಆಧಾರಸ್ತಂಭಗಳು ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಇತ್ತೀಚಿಗೆ ನಿಧಾನರಾದ ಗ್ರಾ.ಪಂ.ಸದಸ್ಯರು,ಶಿಕ್ಷಣ ಪ್ರೇಮಿಗಳಾದ ಡಾ.ನಾಗರಾಜ ಕಂಬಳಿ ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು 5ನಿಮಿಷ ಮೌನಚಾರಣೆ ಮಾಡಲಾಯಿತು, ಭಾಗವಹಿಸಿದ ಎಲ್ಲ ಗಣ್ಯರೊಂದಿಗೆ ಮಕ್ಕಳಿಗೆ ವಿವಿಧ ಆಟೋಟಗಳ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಪ್ರಶಸ್ತಿ ಪ್ರಮಣ ಪತ್ರವನ್ನು ವಿತರಣೆಯ ಮಾಡಲಾಯಿತು,

ಈ ಸಂದರ್ಭದಲ್ಲಿ,ಶ್ರೀ ಇಂದ್ರೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ಇಂದ್ರೇಶ ಕೊಳ್ಳಿ,ಶಾಲೆಯ ಮುಖ್ಯೋಪಾಧ್ಯಾಯರಾದ ಮಧುಸೂಧನ್ ಡೊಳ್ಳಿನ,ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ ಕುರಿ,ಉಪನ್ಯಾಸಕ ಹನುಮಗೌಡ ಗಬ್ಬೂರು,ಹನಮಂತಪ್ಪ ಕೊಳ್ಳಿ, ಪ್ರಾಥಮಿಕ ಕೃಷಿ ಪತ್ತಿನ ಸಂಘದ ಮಾಜಿ ಸದಸ್ಯ ಆನಂದ ಕುರಿ,ಗ್ರಾಮದ ಮುಖಂಡರಾದ ಬಾಳಪ್ಪ ಶಿರೂರು,ಮೈಲಾರಪ್ಪ. ಹರಿಜನ,,ಶಿವನಗೌಡ ಪೊ.ಪಾಟೀಲ್,ರಾಮಣ್ಣ ಮೂಗುತಿ,ಮಾರುತಿ ಹಡಪದ,ಶರಣಪ್ಪ ಬಿಳೇಬಾವಿ,ಆದೇಪ್ಪ ಬೆಟ್ಟಗೇರಿ, ಹನುಮೇಶ ಹರಿಜನ, ಅಮರೇಶ,ಕ.ಕಾ.ನಿ.ಪತ್ರಕರ್ತ ಸಂಘ ಕೊಪ್ಪಳ ಜಿಲ್ಲಾ ಕಾರ್ಯಕಾರಣಿ ಸದಸ್ಯರಾದ ಡಾ.ಕೆ.ಎಂ.ಶರಣಯ್ಯಸ್ವಾಮಿ, ವಿಧ್ಯಾರ್ಥಿಗಳು ಹಾಗೂ ಪಾಲಕರು ಸೇರಿದಂತೆ ಇತರರು ಇದ್ದರು.

ಭೋವಿ ಸಮುದಾಯದ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ಪುಷ್ಪಾಂಜಲಿ ಗುನ್ನಾಳ ಆಯ್ಕೆ

Pushpanjali Gunna elected as district president of Bhovi community women's unit

ಭೋವಿ ಸಮುದಾಯದ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ಪುಷ್ಪಾಂಜಲಿ ಗುನ್ನಾಳ ಆಯ್ಕೆ

ಕೊಪ್ಪಳ ; ಇಲ್ಲಿನ ಪ್ರವಾಸಿಮಂದಿರದಲ್ಲಿ ರವಿವಾರದಂದು ನಡೆದ ಭೋವಿ ಸಮುದಾಯದ ಮುಖಂಡರ ಸಭೆಯಲ್ಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ಪುಷ್ಪಾಂಜಲಿ ಗುನ್ನಾಳ ನೇಮಕವಾಗಿದ್ದಾರೆ.

ಸಮುದಾಯದ ಮುಖಂಡರ ಸರ್ವಾನುಮತದಿಂದ ಒಪ್ಪಿಗೆ ಮೇರೆಗೆ ಸಮಾಜಮುಖಿ, ಮಹಿಳಾ ಸಂಘಟನೆಯಲ್ಲಿ ಛಾಪು ಮೂಡಿಸಿರುವ ಪುಷ್ಪಾಂಜಲಿ ಗುನ್ನಾಳ ಅವರನ್ನು ಆಯ್ಕೆ ಮಾಡಲಾಯಿತು.

ಆಯ್ಕೆಯಾದ ಬಳಿಕ ಮಾತನಾಡಿದ ಪುಷ್ಪಾಂಜಲಿ ಗುನ್ನಾಳ ಅವರು, ಸಮುದಾಯದ ಮುಖಂಡರು, ಯುವಮಿತ್ರರು, ಮಹಿಳಾ ಪ್ರಮುಖರು ನನ್ನ ಮೇಲೆ ವಿಶ್ವಾಸ ಇಟ್ಟು, ಆಯ್ಕೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸಮುದಾಯದ ಏಳಿಗೆಗೆ, ಸಮುದಾಯದ ಬಡವರ್ಗದ ಮಕ್ಕಳ ಶೈಕ್ಷಣಿಕವಾಗಿ ಬೆಳವಣಿಗೆ ಶ್ರಮಿಸುವುದಾಗಿ‌ ಹೇಳಿದರು.
ಇನ್ನೂ ಇದೇ ವೇಳೆ ಭೋವಿ ಸಮುದಾಯದ ಯುವ ಘಟಕದ ಜಿಲ್ಲಾಧ್ಯಕ್ಷರಾಗಿ ಹುಲಿಗೇಶ್ ಬಂಡಿ ಗಂಗಾವತಿಯವರನ್ನು ಸಹ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು..

ನಾಲ್ಕು ವರೆ ಕೋಟಿ ವೆಚ್ಚದಲ್ಲಿ ಸೇತುವೆ ಮತ್ತು ಸಿಸಿ ರಸ್ತೆ ಕಾಮಾಗಾರಿಗೆ ಗುದ್ದಲಿ ಪೂಜೆ :ಶಾಸಕ ಎಮ್ ಆರ್ ಮಂಜುನಾಥ್ .

Hudali puja for bridge and CC road work at a cost of four and a half crores: MLA MR Manjunath.

ನಾಲ್ಕು ವರೆ ಕೋಟಿ ವೆಚ್ಚದಲ್ಲಿ ಸೇತುವೆ ಮತ್ತು ಸಿಸಿ ರಸ್ತೆ ಕಾಮಾಗಾರಿಗೆ ಗುದ್ದಲಿ ಪೂಜೆ :ಶಾಸಕ ಎಮ್ ಆರ್ ಮಂಜುನಾಥ್


ವರದಿ: ಬಂಗಾರಪ್ಪ .ಸಿ.
ಹನೂರು:ಕ್ಷೇತ್ರವ್ಯಾಪ್ತಿಯಲ್ಲಿನಲೊಕ್ಕನಹಳ್ಳಿ–ಒಡೆಯರಪಾಳ್ಯ ಮಾರ್ಗ ಮಧ್ಯದಲ್ಲಿರುವ ಮಸ್ಕಿತಹಳ್ಳ ಮತ್ತು ಜಡೆತಡೆ ಹಳ್ಳಗಳಿಗೆ ಅಡ್ಡಲಾಗಿ ದಾಟುವ ಸೇತುವೆ ಕಾಮಗಾರಿ ಹಾಗೂ ಮತ್ತೊಂದು ಸೇತುವೆಯನ್ನು ಮೇಲ್ಜರ್ಜೆಗೆರಿಸುವ ಕಾಮಗಾರಿಗೆ ಸುಮಾರು ಅಂದಾಜುವೆಚ್ಚ 04 ಕೋಟಿ ರೂಗಳ ವೆಚ್ಚದಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಹನೂರು ತಾಲೂಕಿನ ಪಿಜಿ ಪಾಳ್ಯದ ಸೇತುವೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದ
ಬಳಿಕ ಮಾತನಾಡಿದ ಶಾಸಕರು, ಪಿಜಿ ಪಾಳ್ಯ–ಒಡೆಯರಪಾಳ್ಯ ಮುಖ್ಯ ರಸ್ತೆ ನೆರೆಯ ತಮಿಳುನಾಡು ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದ್ದು, ದಿನನಿತ್ಯ ಅಪಾರ ಸಂಖ್ಯೆಯ ವಾಹನಗಳು ಹಾಗೂ ನೂರಾರು ಗೂಡ್ಸ್ ವಾಹನಗಳು ಸಂಚರಿಸುತ್ತವೆ. ಆದರೆ ಮಳೆಗಾಲದಲ್ಲಿ ಹಳ್ಳಗಳಲ್ಲಿ ರಭಸವಾಗಿ ನೀರು ಹರಿದು ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿತ್ತು. ಎಂದರು.

ಈ ಹಿನ್ನೆಲೆಯಲ್ಲಿ ಜಡೆತಡೆ ಹಳ್ಳಕ್ಕೆ ಸುಮಾರು 2.5 ಕೋಟಿ ರೂ. ವೆಚ್ಚದಲ್ಲಿ ಹಾಗೂ ಪಿಜಿ ಪಾಳ್ಯ ಹತ್ತಿರದ ಮಸ್ಕಿತಹಳ್ಳಕ್ಕೆ ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಾಗಾರಿಗೆ ಗುದ್ದಲಿ ಪೂಜೆ ಮಾಡುತ್ತಿದ್ದು . ಕಾಮಗಾರಿಯು ಉತ್ತಮ ಗುಣಮಟ್ಟದಿಂದ ಮತ್ತು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಸಂಬಂಧಿಸಿದವರಿಗೆ ಸೂಚಿಸಿದರು

ಇದಲ್ಲದೆ ಪಿ. ಜಿ. ಪಾಳ್ಯ ಗ್ರಾಮದ ಪರಿಶಿಷ್ಟ ಜಾತಿ ಬಡವಣೆಯಲ್ಲಿ ಎಸ್.ಇ.ಪಿ ಯೋಜನೆಯಡಿ ಸುಮಾರು 25 ಲಕ್ಷ ರೂ. ಮತ್ತು ಹುಣಸೇ ಪಾಳ್ಯ ಗ್ರಾಮದ ಪರಿಶಿಷ್ಟ ಜಾತಿ ಬಡವಣೆಯಲ್ಲಿ ಎಸ್. ಇ. ಪಿ.ಪಿ ಯೋಜನೆ ಅನುಧಾನದಡಿ ಸುಮಾರು 25 ಲಕ್ಷ ರೂ ಅಂದಾಜು ವೆಚ್ಚದಲ್ಲಿ ಸಿಸಿರಸ್ತೆ ನಿರ್ಮಾಣ ಕಾಮಾಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಇದೆ ಸಮಯದಲ್ಲಿ ಲೋಕೋಪಯೋಗಿ ಇಲಾಖೆಯ ಎಇಇ ಪುರುಷೋತ್ತಮ್, ಎಇ ಸುರೇಂದ್ರ, ಮುಖಂಡರುಗಳಾದ ಬಿಳಿಗಿರಿ ಮಹದೇವಸ್ವಾಮಿ, ಜಿ ಎಂ ಮಾದೇಶ್, ನಿಂಗಶೆಟ್ಟಿ ಜಡರುದ್ರಸ್ವಾಮಿ, ಕೃಷ್ಣಮೂರ್ತಿ, ಸಿದ್ದರಾಜು, ಚಿಕ್ಕರಾಜಶೆಟ್ಟಿ, ಚಿನ್ನಸ್ವಾಮಿ, ಬೇಕ್ರಿ ಶಿವಕುಮಾರ್, ಸೆಲ್ವಂ, ಮಹೇಂದ್ರ,ರವಿ, ಸಣ್ಣಮಾದ, ಸೋಮಶೇಖರ್, ನಾಗೇಂದ್ರ, ಮಧುಸೂದನ್, ಎಂ ಎಸ್ ಸಿ ಮಹದೇಸ್ವಾಮಿ, ನಾಗರಾಜು, ಪುನೀತ್, ಉದ್ದನೂರು ಶಾಂತರಾಜು, ಗಿರೀಶ್ ಪ್ರಮೋದ್, ವೆಂಕಟೇಶ್, ಗೋವಿಂದ, ವಿಜಯ್ ಕುಮಾರ್, ನಟರಾಜು, ಪ್ರಭುಸ್ವಾಮಿ,ಹಾಗೂ ಇನ್ನಿತರರು ಹಾಜರಿದ್ದರು,