ಕಾರ್ಖಾನೆ ಭಾದಿತ ಪ್ರದೇಶದ ಮಹಿಳೆಯರ ರಕ್ಷಣೆಗೆ ಜ್ಯೋತಿ ಮನವಿ

ಕಾರ್ಖಾನೆ ಭಾದಿತ ಪ್ರದೇಶದ ಮಹಿಳೆಯರ
ರಕ್ಷಣೆಗೆ ಜ್ಯೋತಿ ಮನವಿ

Jyoti appeals for protection of women in factory-affected areas

ಕೊಪ್ಪಳ: ನಗರಕ್ಕೆ ಸಮೀಪದಲ್ಲಿಯೇ ಇರುವ ಬಲ್ದೋಟಕಾರ್ಖಾನೆ ವಿಸ್ತರಣೆಯಿಂದ ಉಂಟಾಗುವ ಭಯಾನಕಸಮಸ್ಯೆಗಳು ಅದರ ಜೊತೆಗೆ ಈಗಾಗಲೇ ಇರುವಕಿರ್ಲೋಸ್ಕರ್, ಕಲ್ಯಾಣಿ,ಮುಕುಂದಸುಮಿ,ವನ್ಯಾ,ಭದ್ರಾಮುಂತಾದ ಕಾರ್ಖಾನೆಗಳ ಬಾಧಿತ ಪ್ರದೇಶದ ಮಹಿಳೆಯರ
ಮತ್ತು ಯುವತಿಯರ ಆರೋಗ್ಯ ಮತ್ತು ಜೀವ ರಕ್ಷಣೆಗೆಮುಂದಾಗಬೇಕೆಂದು ಮಹಿಳಾ ಆಯೋಗದ ಅಧ್ಯಕ್ಷರಿಗೆಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳಮನವಿ ಮಾಡಿದರು.
ಅವರು ಜಿಲ್ಲೆಯ ಮೂರು ದಿನಗಳ ಪ್ರವಾಸ ಹಮ್ಮಿಕೊಂಡಿರುವಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿ ಚೌದ್ರಿ
ಅವರನ್ನು ನಗರದಲ್ಲಿ ಭೇಟಿಯಾಗಿ ಅಂಬೇಡ್ಕರ್ ಕೃತಿ ನೀಡಿ ಗೌರವಿಸಿಮಹಿಳಾ ಆಯೋಗ ಮಾಡುತ್ತಿರುವ ಕಾರ್ಯವನ್ನು ಶ್ಲಾಗಿಸಿ
ಮನವಿ ಪತ್ರವನ್ನು ಅರ್ಪಿಸಿದರು. ನಗರದಲ್ಲಿರುವ ಹಕ್ಕಿಪಿಕ್ಕಿಸಮುದಾಯ ಹಾಗೂ ಕುಂಚಿ ಕೊರವರ ಸಮುದಾಯಗಳಿಗೆಮೂಲಭೂತ ಸೌಕರ್ಯವನ್ನು ಒದಗಿಸಿ ಸಹಜ ಜೀವನಕ್ಕೆನೆರವಾಗುವಂತೆ ಕೋರಿದರು. ಜಿಲ್ಲೆಯ ಸರಕಾರಿ ಅರೆ ಸರಕಾರಿನೌಕರರು ಉತ್ತಮವಾದ ಕೆಲಸದ ಪರಿಸರ ಖಾತ್ರಿಪಡಿಸುವಂತೆವಿನಂತಿಸಿದರು. ಅಲ್ಲದೆ ಜಿಲ್ಲೆಯ ಮಹಿಳಾ ಹಾಸ್ಟೆಲ್ ಹಾಗೂನೌಕರಸ್ಥ ಮಹಿಳೆಯರ ಹಾಸ್ಟೆಲ್ ಗಳಲ್ಲಿ ಇನ್ನಷ್ಟು ಹೆಚ್ಚಿನಸೌಕರ್ಯಗಳು ದೊರಕುವಂತೆ ಮಾಡಲು ವಿನಂತಿಸಿದರು. ಈ
ಸಂದರ್ಭದಲ್ಲಿ ಡಿಸಿಸಿ ಸದಸ್ಯ ಸುಮಂಗಲ ನಾಯಕ್ ಇತರರುಇದ್ದರು.

ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಕಾನೂನುಗಳ ಬಗ್ಗೆ ಜಾಗೃತಿ ಕಾರ್ಯಕ್ರಮ
ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಕಾನೂನುಗಳ ಬಗ್ಗೆ ಜಾಗೃತಿ ಕಾರ್ಯಕ್ರಮ
Awareness program on children's rights and children's laws

ಕೊಪ್ಪಳ ಫೆಬ್ರವರಿ 05, (ಕರ್ನಾಟಕ ವಾರ್ತೆ): ಮಕ್ಕಳ ಹಕ್ಕುಗಳ ಮತ್ತು ಮಕ್ಕಳ ಕಾನೂನುಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಅಭಿನವ ಶ್ರೀ ಸಿದ್ದೇಶ್ವರ ಕ್ಷೇಮಾಭಿವೃದ್ಧಿ ಸಂಸ್ಥೆ ಕೊಪ್ಪಳರವರ ಸಂಯುಕ್ತಾಶ್ರಯದಲ್ಲಿ ಕೊಪ್ಪಳದ ಏಜ್ಯುಕೇರ್ ಇಂಗ್ಲೀಷ್ ಮೀಡಿಯಂ ಪ್ರೌಢಶಾಲೆಯಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಕ್ಕಳ ರಕ್ಷಣೆ, ಮಕ್ಕಳ ಹಕ್ಕುಗಳು ಮತ್ತು ಸುರಕ್ಷತೆಗೆ ಸಂಬAಧಿಸಿದAತೆ ಕಾನೂನುಗಳು ಹಾಗೂ ಹದಿಹರೆಯದವರಲ್ಲಿ ಆಗುವ ದೈಹಿಕ, ಮಾನಸಿಕ ಬದಲಾವಣೆಗಳು, ವೈಯಕ್ತಿಕ ಶುಚಿತ್ವಕ್ಕೆ ಸಂಬAಧಿಸಿದ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಮಕ್ಕಳ ಸಹಾಯವಾಣಿ ಸಂಖ್ಯೆಗಳಾದ 1098 ಮತ್ತು ಇಆರ್‌ಎಸ್‌ಎಸ್ 112 ಅಕ್ಕಪಡೆಗಳ ಬಳಕೆಯ ಬಗ್ಗೆ ಹಾಗೂ ಬಾಲ್ಯವಿವಾಹ ತಡೆ, ಪೋಕ್ಸೋ ಕಾಯ್ದೆ, ಮಕ್ಕಳ ಸುರಕ್ಷತಾ ನೀತಿ ಮತ್ತು ಸುರಕ್ಷಿತ ಸ್ಪರ್ಶ – ಅಸುರಕ್ಷಿತ ಸ್ಪರ್ಶ್, ಮಕ್ಕಳ ಮೇಲಿನ ದೌರ್ಜನ್ಯಗಳ ವಿರುದ್ಧ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ಕಳಸಾಪೂರ, ಪೊಲೀಸ್ ಇಲಾಖೆಯ ಪ್ರತಿನಿಧಿ ಜಿ. ಸಿ. ಕಲಾಲ, ಸಾಮಾಜಕಾರ್ಯಕರ್ತೆ ಪ್ರತಿಭಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಸಂಯೋಜಕರು, ಮಕ್ಕಳ ಸಹಾಯವಾಣಿ (1098/112) ಕೇಂದ್ರ. ಅಭಿನವ ಶ್ರೀ ಸಿದ್ದೇಶ್ವರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಆನಂದ್ ಹಳ್ಳಿಗುಡಿ, ಎಜ್ಯುಕೇರ್ ಶಿಕ್ಷಣ ಸಂಸ್ಥೆಯ ಉಪ ಪ್ರಾಂಶುಪಾಲರಾದ ಸುನಿತಾ, ದೈಹಿಕ ಶಿಕ್ಷಕ ಶ್ರೀಕಾಂತ್ ಉಪಸ್ಥಿತರಿದ್ದರು.

ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಜನ ಜಾಗೃತಿ ಜಾಥಾ ಯಶಸ್ವಿ
ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಜನ ಜಾಗೃತಿ ಜಾಥಾ ಯಶಸ್ವಿ

Public awareness rally as part of World Cancer Day a success

ಕೊಪ್ಪಳ ಫೆಬ್ರವರಿ 05, (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಅಧಿಕಾರಿಗಳ ಕಛೇರಿ, ಜಿಲ್ಲಾ ಎನ್.ಸಿ.ಡಿ ಕೋಶ, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಮತ್ತು ಬಸವಶ್ರೀ ಪ್ಯಾರಾಮೆಡಿಕಲ್ ಕಾಲೇಜ್, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಫೆ.4 ರಂದು ಹಳೇ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆಯ ಅಂಗವಾಗಿ ಜನ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಕಾಶ ಹೆಚ್., ಪ್ರತಿ ವರ್ಷ ಫೆಬ್ರವರಿ 4 ರಂದು ವಿಶ್ವ ಕ್ಯಾನ್ಸರ್ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ. ಇದರ ಉದ್ದೇಶ ಕ್ಯಾನ್ಸರ್ ರೋಗದ ಬಗ್ಗೆ ಅರಿವು ಮೂಡಿಸಿ, ಮೂಢನಂಬಿಕೆ ತೊಲಗಿಸಿ, ಜನರಲ್ಲಿ ಆರೋಗ್ಯ ಪೂರ್ಣ ಜೀವನಶೈಲಿ ಮತ್ತು ಉತ್ತಮ ಆಹಾರ ಪದ್ದತಿ ರೂಡಿಸಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಈ ಕಾರ್ಯಕ್ರಮವನ್ನು ಮೊದಲು 2011ರಲ್ಲಿ ಪ್ರಾರಂಭಿಸಲಾಯಿತು. ಕ್ಯಾನ್ಸರ್ ಖಾಯಿಲೆ ಹರಡುವ ರೀತಿ, ಲಕ್ಷಣಗಳು ಅದರ ಮುಂಜಾಗ್ರತಾ ಕ್ರಮಗಳ ಕುರಿತು, ಸಾರ್ವಜನಿಕರಿಗೆ ಅರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯ. ಮುಖ್ಯವಾಗಿ ಈ ರೋಗವು ಅಸಾಂಕ್ರಾಮಿಕ ರೋಗಗಳಲ್ಲಿ ಒಂದಾಗಿದ್ದು, ಸಾಮಾನ್ಯವಾಗಿ ಪುರುಷರಲ್ಲಿ ಬಾಯಿ ಕ್ಯಾನ್ಸರ್, ಶ್ವಾಸಕೋಶ ಕ್ಯಾನ್ಸರ್, ಅನ್ನನಾಳ ಕ್ಯಾನ್ಸರ್ ಹಾಗೂ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಬಾಯಿ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ವಾಸಿಯಾಗದ ಗಾಯ, ಅಸಹಜ ರಕ್ತಸ್ರಾವ, ಬಹಳ ದಿನಗಳ ಕೆಮ್ಮು, ನೋವಿಲ್ಲದ ಗಡ್ಡೆ, ಊತ ಇವು ಕ್ಯಾನ್ಸರ್ ರೋಗದ ಲಕ್ಷಣಗಳಾಗಿದ್ದು, ಇವುಗಳ ಬಗ್ಗೆ ನಿರ್ಲಕ್ಷö್ಯ ಮಾಡದೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರ ಹತ್ತಿರ ಪರೀಕ್ಷಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು. ಮುಂಜಾಗೃತಾ ಕ್ರಮವಾಗಿ ಆರೋಗ್ಯಕರ ಜೀವನ ಶೈಲಿ ನಡೆಸಬೇಕು. ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ ಸೇವನೆ, ಹಾಲು ಮತ್ತು ಹಾಲಿನ ಉತ್ಪನ್ನಗಳ ಹೆಚ್ಚು ಬಳಕೆ ಮಾಡುವುದು, ಕ್ಯಾನ್ಸರ್ ಪ್ರತಿರೋಧಕ ಶಕ್ತಿಯಿರುವ ಆಹಾರ ಪದಾರ್ಥಗಳ ಬಳಕೆ, ಆಹಾರದಲ್ಲಿ ಹೆಚ್ಚಿನ ರೀತಿಯ ತರಕಾರಿ/ಹಣ್ಣು ಹಂಪಲುಗಳ ಬಳಕೆ ಮಾಡುವ ಬಗ್ಗೆ ಹಾಗೂ ಬಣ್ಣಗಳಿಂದ ಕೂಡಿದ ಆಹಾರ ಪದಾರ್ಥಗಳ ಬಳಕೆ (ಉದಾ: ಬೇಕರಿ ಪದಾರ್ಥ, ಗೋಬಿ, ಮುಂತಾದವು..) ಮಾಡದಂತೆ ಎಲ್ಲಾ ವಿದ್ಯಾರ್ಥಿಗಳು ಮತ್ತು ಕ್ಷೇತ್ರ ಸಿಬ್ಬಂದಿಗಳು ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯ ವಾರ್ಡ್, ಗ್ರಾಮಗಳಲ್ಲಿ ಮತ್ತು ನಗರ ಪ್ರದೇಶದ ಕೊಳಚೆ ಪ್ರದೇಶಗಳಲ್ಲಿ ಕ್ಯಾನ್ಸರ್ ಖಾಯಿಲೆಯ ನಿಯಂತ್ರಣ ಕುರಿತು, ಅರಿವು ಮೂಡಿಸಿ, ಮುಂಜಾಗೃತೆ ವಹಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ತಾಲೂಕಾ ಆರೋಗ್ಯಾಧಿಕಾರಿ ಡಾ. ರಾಮಾಂಜನೇಯ ಮಾತನಾಡಿ, ಜೀವನಶೈಲಿಯಿಂದ ಬರುವ ಅಸಾಂಕ್ರಾಮಿಕ ರೋಗಗಳಲ್ಲಿ ಕ್ಯಾನ್ಸರ್ ಖಾಯಿಲೆ ಒಂದಾಗಿದ್ದು, “ವಿಶಿಷ್ಠತೆಯಿಂದ ಏಕತೆ” ಎಂಬ ಈ ವರ್ಷದ ಘೋಷವಾಕ್ಯದೊಂದಿಗೆ ಕ್ಯಾನ್ಸರ್ ಖಾಯಿಲೆ ನಿಯಂತ್ರಣ ಕುರಿತು, ಜಾಗೃತಿ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ. ಮುಂದಿನ ದಿನಗಳಲ್ಲಿ 9-14 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್ ತಡೆಯಲು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಎಚ್‌ಪಿವಿ ಲಸಿಕೆ ನೀಡಲಾಗುತ್ತದೆ. ನಾವು ಸೇವಿಸುವ ಆಹಾರ ಪದಾರ್ಥಗಳ ಮೂಲಕ ಮತ್ತು ಪ್ಲಾಸ್ಟಿಕ್ ನೀರಿನ ಬಾಟಲಿಗಳ ಮೂಲಕ ಕ್ಯಾನ್ಸರ್ ಹರಡುವ ಸಾಧ್ಯತೆ ಇರುತ್ತದೆ ಇದರ ಬಗ್ಗೆ ಎಚ್ಚರಿಕೆ ವಹಿಸಬೇಕು ಮತ್ತು ಯುವಕರು ತಂಬಾಕು ಸೇವನೆ, ಮದ್ಯಪಾನ ಸೇವನೆಗಳಿಂದ ದೂರವಿದ್ದು, ಕ್ಯಾನ್ಸರ್ ಖಾಯಿಲೆ ಹರಡುವ ಬಗ್ಗೆ ಮತ್ತು ನಿಯಂತ್ರಣ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ, ಕ್ಯಾನ್ಸರ್ ಮುಕ್ತ ಸಮಾಜ ನಿರ್ಮಾಣ ಮಾಡಲು ಸಹಕರಿಸುವಂತೆ ತಿಳಿಸಿದರು. ನಂತರ ಹಳೇ ಜಿಲ್ಲಾ ಆಸ್ಪತ್ರೆ ಆವರಣದಿಂದ ಪ್ರಾರಂಭವಾಗಿ ಕೇಂದ್ರ ಬಸ್ ನಿಲ್ದಾಣ, ಡಾ.ಸಿಂಪಿಲಿAಗಣ್ಣ ರಸ್ತೆ, ನಗರ ಪೋಲಿಸ್ ಠಾಣೆ, ದಿವಟರ್ ಸರ್ಕಲ್, ಅಶೋಕ್ ವೃತ್ತ ಮಾರ್ಗವಾಗಿ ನಡೆದ ಜನ ಜಾಗೃತಿ ಜಾಥಾದಲ್ಲಿ ಕ್ಯಾನ್ಸರ್ ಖಾಯಿಲೆ ನಿಯಂತ್ರಣ ಕುರಿತು, ವಿದ್ಯಾರ್ಥಿಗಳು ನಾಮಫಲಕಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗುತ್ತಾ, ಸಾರ್ವಜನಿಕರಿಗೆ ಅರಿವು ಮೂಡಿಸಿ, ಪುನಃ ಹಳೇ ಜಿಲ್ಲಾ ಆಸ್ಪತ್ರೆ ಆವರಣಕ್ಕೆ ಆಗಮಿಸಿ, ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆಯ ಎನ್.ಸಿ.ಡಿ ಕಾರ್ಯಕ್ರಮದ ಫಿಜಿಷಿಯನ್ ಡಾ. ಶರಣಪ್ಪ, ಎನ್.ಸಿ.ಡಿ ಕಾರ್ಯಕ್ರಮದ ಜಿಲ್ಲಾ ಸಲಹೆಗಾರರಾದ ಡಾ. ಜಯಶ್ರೀ ಎಮ್.ಹೆಚ್., ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳಾದ ಡಾ. ಮಹೇಶ ಉಮಚಗಿ, ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶಿವಾನಂದ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಎಲ್.ವ್ಹಿ. ಸಜ್ಜನರ್, ಬಸವಶ್ರೀ ಪ್ಯಾರಾಮೆಡಿಕಲ್ ಕಾಲೇಜಿನ ಬೋಧಕರು ಮತ್ತು ವಿದ್ಯಾರ್ಥಿಗಳು, ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಪದಾಧಿಕಾರಿಗಳು ಹಾಗೂ ವಿವಿಧ ವೃಂದದ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಇತರೆ ಸಿಬ್ಬಂದಿಗಳು ಭಾಗವಹಿಸಿದ್ದರು.
ಕೊಪ್ಪಳ ಡಿಸಿಪಿಯು: ಕಾಣೆಯಾದ ಬಾಲಕರ ಪತ್ತೆಗೆ ಮನವಿ
ಕೊಪ್ಪಳ ಡಿಸಿಪಿಯು: ಕಾಣೆಯಾದ ಬಾಲಕರ ಪತ್ತೆಗೆ ಮನವಿ
Koppal DCPU: Appeal to find missing boys

ಕೊಪ್ಪಳ ಫೆಬ್ರವರಿ 05, (ಕರ್ನಾಟಕ ವಾರ್ತೆ): ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015 ರಡಿಯಲ್ಲಿ ನೋಂದಾಯಿತವಾಗಿ ಪೋಷಣೆ ಮತ್ತು ರಕ್ಷಣೆ ಅವಶ್ಯವಿರುವ ಮಕ್ಕಳಿಗಾಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಲ್ವಾರಿ ಚಾಪೆಲ್‌ನ ನಂಬಿಕೆ ಮನೆಯಲ್ಲಿ ಆಶ್ರಯ ಪಡೆದಿದ್ದ ದಿನೇಶ(17 ವರ್ಷ 1 ತಿಂಗಳು) ಹಾಗೂ ಕುಮಾರಸ್ವಾಮಿ(16 ವರ್ಷ 7 ತಿಂಗಳು) ಎಂಬ ಇಬ್ಬರು ಬಾಲಕರು ಜನವರಿ 8 ರಂದು ಬೆಳಿಗ್ಗೆ 9.45 ಗಂಟೆಯಿAದ ನಾಪತ್ತೆಯಾಗಿದ್ದು, ಬಾಲಕರನ್ನು ಅಪಹರಣ ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 04/2026, ಭಾರತೀಯ ನ್ಯಾಯ ಸಂಹಿತೆ ಕಲಂ 137(2) ಅಡಿ ಪ್ರಕರಣ ದಾಖಲಿಸಲಾಗಿದೆ.
ಕಾಣೆಯಾದ ಬಾಲಕರ ಚಹರೆ ವಿವರ:
ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಗೊರೆಬಾಳದ ದಿನೇಶ ತಂದೆ ನಿಂಗಪ್ಪ ಎಂಬ 17 ವರ್ಷದ ಬಾಲಕ 158 ಸೆಂಟಿ ಮೀಟರ್ ಎತ್ತರವಿದ್ದು, ತೆಳುವಾದ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದಾನೆ. ಕನ್ನಡ ಭಾಷೆ ಮಾತನಾಡುತ್ತಾನೆ. ಕಾಣೆಯಾದಾಗ ಕಡು ಗ್ರೇ ಬಣ್ಣದ ಸ್ವೆಟರ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದನು. ಯಲಬುರ್ಗಾ ತಾಲ್ಲೂಕಿನ ಮಾರನಾಳ ಗ್ರಾಮದ ಕುಮಾರಸ್ವಾಮಿ ತಂ.ಯಮನೂರಪ್ಪ ಎಂಬ ವರ್ಷದ ಬಾಲಕ 167 ಸೆಂಟಿ ಮೀಟರ್ ಎತ್ತರವಿದ್ದು, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ಕೋಲು ಮುಖ ಹೊಂದಿದ್ದಾನೆ. ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾನೆ. ಕಾಣೆಯಾದಾಗ ತಿಳಿ ಹಸಿರು ಬಣ್ಣದ ಶರ್ಟ್ ಮತ್ತು ಕ್ರೀಂ ಬಣ್ಣದ ಪ್ಯಾಂಟ್ ಧರಿಸಿದ್ದನು.
ಮೇಲ್ಕಂಡ ಚಹರೆಯ ಬಾಲಕರ ಬಗ್ಗೆ ಯಾರಿಗಾದರೂ ಮಹಿತಿ ಇದ್ದಲ್ಲಿ ಅಥವಾ ದೊರೆತಲ್ಲಿ ಮಹಿಳಾ ಪೊಲೀಸ್ ಠಾಣೆ ದೂ.ಸಂ: 08539-221233, ಪಿ.ಐ: 8073476715, ತನಿಖಾಧಿಕಾರಿ ಸೂರ್ಯಕಾಂತ, ಎ.ಎಸ್.ಐ: 97438421109, ಕೊಪ್ಪಳ ಕಂಟ್ರೋಲ್ ರೂಂ.: 9480803700 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಂದು ಧರಣಿ ಸುಧೀರ್ಘವಾಗಿ ನಿಂತಿದ್ದೇ ತೀವ್ರಕ್ಕೆಸಾಕ್ಷಿ : ಎ. ಮುರಿಗೆಪ್ಪ

ಒಂದು ಧರಣಿ ಸುಧೀರ್ಘವಾಗಿ ನಿಂತಿದ್ದೇ ತೀವ್ರಕ್ಕೆಸಾಕ್ಷಿ : ಎ. ಮುರಿಗೆಪ್ಪ

A long-standing protest is a testament to the severity of the situation: A. Murigappa

ಕೊಪ್ಪಳ: ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎ.ಮುರಿಗೆಪ್ಪ ಅವರು ಇಲ್ಲಿನ ನಗರಸಭೆ ಮುಂದುಗಡೆ ೯೮ದಿನಗಳಿಂದ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ
ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆಯಿಂದನಡೆಯುತ್ತಿರುವ ಬಲ್ಡೋಟ ಹಠಾವೋ ಧರಣಿಗೆ ಬೆಂಬಲಿಸಿ
ಮಾತನಾಡಿ, ಇಲ್ಲಿ ನಿರಂತರ ಮಾಸ್ಕ್ ಹಾಕಿಕೊಳ್ಳುವ ಪರಿಸ್ಥಿತಿಬರಬಾರದು ಎಂದರೆ ಅಗತ್ಯ ಮೀರಿ ಇರುವ ಕಾರ್ಖಾನೆಗಳು ಬಂದ್
ಆಗಲೇಬೇಕು, ಇಲ್ಲಿ ಬಲ್ಡೋಟ ಕಾರ್ಖಾನೆ ಬಂದು ೨೭ ಹೊಗೆಕೊಳವೆಗಳು ಬಂದರೆ ಆ ವಿಷಾನಿಲ ಬದುಕು ಹಾಳುಮಾಡುತ್ತದೆ. ಬದುಕನ್ನು ಬಣ್ಣಗೆಡಿಸುವ ಕೆಲಸ ನಡೆಯುತ್ತಿದೆ.
ನಾವು ಕಾರ್ಖಾನೆಗಳ ವಿರೋಧಿಗಳಲ್ಲ. ಆರೋಗ್ಯ, ಜೀವತೆಗೆಯುವ ಯಾವ ಕಾರ್ಖಾನೆಗಳು ಬೇಡ. ಪರಿಸರ ಸರ್ವೆಆಗಬೇಕು.

ಬಸಾಪುರಕೆರೆಜನಜಾನುವಾರುನೀರುಕುಡಿಯಲುಮುಕ್ತಗೊಳಿಸಬೇಕು.
ಹೋರಾಟಕ್ಕೆ ಸಹಮತವಿದೆ. ಮುಖ್ಯಮಂತ್ರಿಗಳು ಬೇಗಸ್ಪಂದಿಸಲಿ. ನಾನೂ ಕೂಡ ಸರ್ಕಾರಕ್ಕೆ ಪತ್ರ ಬರೆದು ಅಥವಾ ನೇರ
ಭೇಟಿ ಮಾಡಿ ಬಲ್ಡೋಟ ನಿಲ್ಲಿಸಿ ಎಂದು ಕೇಳುತ್ತೇನೆ ಎಂದರು.
ಇದೇ ದಿನಾಂಕ: ೦೭.೦೨.೨೦೨೬ರ ಶನಿವಾರ ಬೆಳಿಗ್ಗೆ ೯ ಗಂಟೆಗೆ
ನಗರ ಸಭೆಯ ಧರಣಿ ಸ್ಥಳದಲ್ಲಿ ಶ್ರೀಗವಿಮಠದಿಂದ
ಉಪಹಾರ ವ್ಯವಸ್ಥೆ ಮಾಡುತ್ತದೆ. ಬೆ. ೧೦ ಗಂಟೆಗೆ ಸರಿಯಾಗಿ
ಸಾಣೆಹಳ್ಳಿ ಶ್ರೀಸಾಣೆಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ
ಸ್ವಾಮಿಗಳು ಬಾಧಿತ ಗಿಣಿಗೇರಿ, ಅಲ್ಲಾನಗರ, ಹಿರೇಬಗನಾಳ,
ಹಾಲವರ್ತಿ ಜನರನ್ನು ಭೇಟಿ ಮಾಡಿ ೧೧ ಗಂ. ವೇದಿಕೆಯ
ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ. ಇದೇ ಸಂದರ್ಭದಲ್ಲಿ
ರಂಜಾನ್ ದರ್ಗಾ, ಸೂರ್ಯಕಾಂತ ಗುಣಕಿಮಠ ಇಸ್ಲಾಂ ದರ್ಗಾ ಹಳ್ಳಿ
ಭೇಟಿ ಮಾಡುತ್ತಾರೆ. ಗದುಗಿನ ತೊeoಟದ ಶ್ರೀ ಸಿದ್ಧರಾಮ
ಸ್ವಾಮಿಗಳು, ಕೊಪ್ಪಳ ಜಿಲ್ಲೆಯ ಮೈನಳ್ಳಿ ಸ್ವಾಮಿಗಳು
ದದೇಗಲ್, ಹಿರೇಸಿಂದೋಗಿ, ಇಟಗಿ ಸ್ವಾಮಿಗಳು ಆಗಮಿಸುತ್ತಾರೆ. ಬೆ.
೧೧ ಗಂ. ಪ್ರತಿಭಟನೆ ಸಮಾವೇಶ ಆರಂಭವಾಗುತ್ತದೆ. ಸರ್ವ
ಜನರು, ಜನಪ್ರತಿನಿಧಿಗಳು, ಸಂಘಟನೆಗಳ ಮುಖಂಡರು,
ಇದುವರೆಗೆ ಬೆಂಬಲಿಸಿ ಹೋರಾಡಿದ ಸಂಘ, ಸಂಸ್ಥೆಯ
ಪ್ರಮುಖರು, ಸರ್ವಸದಸ್ಯರು ಭಾಗವಹಿಸಿ ಯಶಸ್ವಿಗೊಳಿಸಲು
ವಿನಂತಿಸಲಾಗಿದೆ.
ಈ ಸಂದರ್ಭದಲ್ಲಿ ಅಲ್ಲಮಪ್ರಭು ಬೆಟ್ಟದೂರು,
ಚಂದ್ರಶೇಖರ ಕವಲೂರು, ಎಂ.ಎA.ಮದರಿ, ಮಲ್ಲಿಕಾರ್ಜುನ
ಬಿ.ಗೋನಾಳ, ಶಿವಕುಮಾರ ಕುಕನೂರು, ಮಂಜುನಾಥ ಜಿ
ಗೊಂಡಬಾಳ, ರಮೇಶ ತುಪ್ಪದ, ಶರಣು ಗಡ್ಡಿ, ಸಂತೋಷ
ದೇಶಪಾಂಡೆ, ಶರಣು ಶೆಟ್ಟರ್, ಕಾಶಪ್ಪ ಚಲವಾದಿ, ಬಿ.ಜಿ.ಕರಿಗಾರ,
ಸಿ.ಬಿ.ಪಾಟೀಲ್, ಜಿ.ಬಿ.ಪಾಟೀಲ್, ಗಂಗಾಧರ ಖಾನಾಪೂರ, ಜ್ಯೋತಿ
ಗೊಂಡಬಾಳ, ಮಂಜುನಾಥ ಅಂಗಡಿ, ಪುಷ್ಪಲತಾ ಏಳುಭಾವಿ, ಶರಣು

ಡೊಳ್ಳಿನ, ಜಿ.ಎಸ್.ಕಡೇಮನಿ, ಮಹಾದೇಪಪ್ಪ ಮಾವಿನಮಾಡು,
ಕರಿಗಾರ, ಎಸ್.ಬಿ.ರಾಜೂರು, ಶಿವಪ್ಪ ಜಲ್ಲಿ, ಮೂಕಪ್ಪ ಮೇಸ್ತ್ರಿ
ಬಸಾಪುರ, ಯಮನೂರಪ್ಪ ಹಾಲಳ್ಳಿ ಬಸಾಪುರ, ಬಸವರಾಜ
ನರೇಗಲ್, ರಾಜಶೇಖರ ಏಳುಬಾವಿ ಅನೇಕರಿದ್ದರು.
ಇದೇ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ್
ಇಟ್ನಾಳ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ವರ್ಣಿತ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ ಎಲ್. ಅರಿಸಿದ್ದಿ
ಅವರು ಧರಣಿ ಸ್ಥಳಕ್ಕೆ ಆಗಮಿಸಿ ತಾವು ಇದುವರೆಗೂ ಕಾರ್ಖಾನೆ
ಕುರಿತಾಗಿ ಮಾಡಿದ ವಿಷಯಗಳನ್ನು, ಸರಕಾರದ ಗಮನಕ್ಕೆ
ತಂದ ಮಾಹಿತಿ ಪ್ರಸ್ತಾಪಿಸಿದರು. ಧರಣಿ ನಿರತರೂ ಸಹ ಅನೇಕ
ಬೇಡಿಕೆಗಳನ್ನು ಈಡೇರಿಸುವಂತೆ ಮತ್ತೊಮ್ಮೆ ಒತ್ತಾಯಿಸಿದರು.
ಜಿಲ್ಲಾಡಳಿತ ಧರಣಿ ವೇದಿಕೆಗೆ ಬಂದು ಬಲ್ಡೋಟ
ಒಳಗೊಂಡು ಎಲ್ಲಾ ಕಾರ್ಖಾನೆ ಬಾಧಿತ ಹಳ್ಳಿಯಲ್ಲಿ ಎ.ಐ.ಐ.ಎಂ.ಎಸ್ ನಿಂದ
ಆರೋಗ್ಯ ಸರ್ವೆಗೆ ಸರಕಾರಕ್ಕೆ ಪ್ರಸ್ತಾವ ಕಳಿಸಲಾಗಿದೆ.
ಬಸಾಪುರ ಕೆರೆ ವಿಷಯದಲ್ಲಿ ಕಾನೂನು ತಜ್ಞರು ಸಲಹೆ
ನೀಡಬೇಕು, ೨ ಎಕರೆ ಕೆರೆ ಬಲ್ಡೋಟ ಕಾರ್ಖಾನೆ ರಸ್ತೆಗೆ
ಬಳಸಿದ್ದಾರೆ ಎಂದು ಸರ್ವೆಯಿಂದ ಗುರ್ತಿಸಿದಾಗ ಇಲ್ಲಿ ಕೆರೆ ಇರಲಿಲ್ಲ
ಎಂದು ಕಾರ್ಖಾನೆ ಉತ್ತರ ಕೊಟ್ಟಿದೆ. ಇದನ್ನು ನಾವು ಸರ್ಕಾರದ
ಗಮನಕ್ಕೆ ತಂದಿದ್ದೇವೆ ಎಂದಾಗ ಆಕ್ಷೇಪ ವ್ಯಕ್ತಪಡಿಸಿದ
ಅಲ್ಲಮಪ್ರಭು ಬೆಟ್ಟದೂರು ಅವರು ಕೆರೆ ಸರ್ಕಾರ ಮಾರಾಟ
ಮಾಡಲು ಬರುವುದಿಲ್ಲ. ಅದು ಗ್ರಾಮದ ಸಮುದಾಯದ ಆಸ್ತಿ
ನೀವೇಕೆ ಮಾರಬೇಕು ಎಂದು ಪ್ರಶ್ನಿಸಿದರು. ಅದಕ್ಕೆ ಅವರು
ಉತ್ತರ ಕೊಡುವಲ್ಲಿ ವಿಫಲರಾದರು.

ಶ್ರೀ ಕನ್ನಿಕಾ ಪರಮೇಶ್ವರಿ ಸೇವಾ ಟ್ರಸ್ಟ್ ನೂತನ ಅಧ್ಯಕ್ಷರಾಗಿ ಜಿ ಸುರೇಶ್ ಶೆಟ್ಟಿ ಸರ್ವಾನುಮತದಿಂದ ಆಯ್ಕೆ

ಶ್ರೀ ಕನ್ನಿಕಾ ಪರಮೇಶ್ವರಿ ಸೇವಾ ಟ್ರಸ್ಟ್ ನೂತನ ಅಧ್ಯಕ್ಷರಾಗಿ ಜಿ ಸುರೇಶ್ ಶೆಟ್ಟಿ ಸರ್ವಾನುಮತದಿಂದ ಆಯ್ಕೆ

G Suresh Shetty unanimously elected as the new President of Sri Kannika Parameshwari Seva Trust

ಗಂಗಾವತಿ. ನಗರದ ಜಯನಗರದಲ್ಲಿರುವ ಉದ್ದೇಶಿ ತ ಶ್ರೀ ಕ ನ್ನಿಕಾಪರಮೇಶ್ವರಿ ದೇವಸ್ಥಾನ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿವಾದಿಗಳಿಗೆ ಗುರುವಾರದಂದು ಇತಿಶ್ರೀ ಹಾಡುವುದರ ಮೂಲಕ ಈ ಹಿಂದಿನ ಅಧ್ಯಕ್ಷ ಎನಿಸಿಕೊಂಡಿರುವ ದರೋಜಿ ಶ್ರೀರಂಗಶೆಟ್ಟಿ ಅವರನ್ನು ಉಚ್ಛಾಟಿಸಿ ನೂತನ ಅಧ್ಯಕ್ಷರನ್ನಾಗಿ ಜಿ ಸುರೇಶ್ ಶೆಟ್ಟಿ ಅವರನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು ಎಂದು ಗಂಗಾವತಿ ನಗರ ಆರ್ಯವೈಶ್ಯ ಸಮಾಜದ ಅಧ್ಯಕ್ಷ ರೂಪಾರಾಣಿ ಲಕ್ಷ್ಮಣ ರಾಯಚೂರು . ಪ್ರಧಾನ ಕಾರ್ಯದರ್ಶಿ ಈಶ್ವರ ಶೆಟ್ಟಿ. ಖಜಾಂಚಿ ಮಾರುತಿ ಪ್ರಸಾದ್ ಸಹಕಾರದರ್ಶಿ ಪಾಲ್ಗಂಟಿ ಗೋಪಾಲಕೃಷ್ಣ ಶೆಟ್ಟಿ. ಸೇರಿದಂತೆ ನಿರ್ದೇಶಕರುಗಳಾದ ಸಿಎಚ್ ಶ್ರೀನಿವಾಸ ಶೆಟ್ಟಿ ಮಿಟಾಯಿಗಾರ ವೀರಭದ್ರಪ್ಪ ಸೇರಿದಂತೆ ಇತರರು ಹೇಳಿದರು
ಅವರು ಗುರುವಾರದಂದು ಶ್ರೀ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಆರ್ಯವೈಶ್ಯ ಸಮಾಜ ಸರ್ವ ಸದಸ್ಯರ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಕಳೆದ 18 ವರ್ಷದಿಂದ ಸಮಾಜದ ಅಧ್ಯಕ್ಷರಾಗಿ ಹಾಗೂ ಶ್ರೀ ಕನ್ನಿಕಾ ಪರಮೇಶ್ವರಿ ಸೇವಾ ಟ್ರಸ್ಟಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಶ್ರೀರಂಗ ದರೋಜಿ ಸಮಾಜಕ್ಕೆ ನೀಡಿದ ಕೊಡುಗೆ ಏನು. ಯಾವುದೇ ಸರ್ವ ಸದಸ್ಯರ ಸಭೆಯನ್ನು ಕರೆಯದೆ ಲೆಕ್ಕಪತ್ರವನ್ನು ಸಮಾಜ ಬಾಂಧವರಿಗೆ ನೀಡದೆ ಇತ್ತೀಚಿಗಷ್ಟೇ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಇಲ್ಲದ ಸಲದ ಆರೋಪ ಮಾಡುವುದು ಎಷ್ಟು ಸೂಕ್ತ ಎಂದು ಅಧ್ಯಕ್ಷರು ಪ್ರಶ್ನೆ ಮಾಡುವುದರ ಮೂಲಕ ಅವರನ್ನು ಸಂಪೂರ್ಣವಾಗಿ ಉಚ್ಚಾಟನೆ ಮಾಡಲಾಗಿದೆ ಎಂದು ಸರ್ವ ಸದಸ್ಯರ ಸಭೆಯಲ್ಲಿ ಘೋಷಿಸಲಾಗಿದೆ ಎಂಬ ಮಾಹಿತಿಯನ್ನು ಹಂಚಿಕೊಂಡರು.
ನೂತನವಾಗಿ ಶ್ರೀ ಕನ್ನಿಕಾ ಪರಮೇಶ್ವರಿ ಸೇವಾ ಸಮಿತಿಯ ಅಧ್ಯಕ್ಷರಾಗಿ ಜಿ ಸುರೇಶ್ ಶೆಟ್ಟಿ ಮಾತನಾಡಿ ದೇವಸ್ಥಾನದ ಹಣವನ್ನು ದುರುಪಯೋಗ ಪಡಿಸಿಕೊಂಡ ಈ ಹಿಂದಿನ ಅಧ್ಯಕ್ಷರು ಹಾಗೂ ಅದಕ್ಕೆ ಪರೋಕ್ಷವಾಗಿ ಬೆಂಬಲ ನೀಡಿದವರು ರಕ್ತಕಾರಿ ಸರ್ವನಾಶವಾಗುತ್ತಾರೆ. ಇದಕ್ಕೆ ಸಂಬಂಧಿಸಿದಂತೆ 10 ಹಲವಾರು ಬಾರಿ ಮನೆಗೆ ತೆರಳಿ ಮುಕ್ತ ಕಂಟದಿಂದ ಆಹ್ವಾನಿಸಿದರು ಸಹ ಸ್ಪಂದಿಸದ ಶ್ರೀ ರಂಗ ದರೋಜಿ ಮುಕ್ತ ಚರ್ಚೆಗೆ ಆಹ್ವಾನಿಸಿದ್ದಾರೆ. ಜೊತೆಗೆ ಆರ್ಯವೈಶ್ಯ ಮಹಾಸಭಾಕ್ಕೂ ಹಾಗೂ ಆರ್ಯವೈಶ್ಯ ಸಮಾಜಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಕೆಲವು ಮುಖಂಡರು ಐದು ಜನ ಹಿರಿಯ ಸದಸ್ಯರನ್ನು ಗೌರವ ಸಲಹೆಗಾರರನ್ನಾಗಿ ಮಾಡಿಕೊಂಡು ಕಾರ್ಯಪ್ರವೃತ್ತರಾಗಿ ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ವೀರಭದ್ರಪ್ಪ ಶೆಟ್ಟಿ ಕಾಕು ಮನೆ ಶ್ರೀಧರ್ ಶೆಟ್ಟಿ ವಾಸುದೇವ ಶೆಟ್ಟಿ ಸತೀಶ್ ಶೆಟ್ಟಿ ತೆಕ್ಕಲಕೋಟೆ ಚಿದಂಬರ ಶೆಟ್ಟಿ. ರಾಮಪ್ರಸಾದ ಶೆಟ್ಟಿ ರೇಷ್ಮೆ ಬಸವರಾಜ ಶೆಟ್ಟಿ ಮಂಜುನಾಥ್. ಸೇರಿದಂತೆ ನಿರ್ದೇಶಕರುಗಳು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು
ಪ್ರಕಟಣೆಯ ಕೃಪೆಗಾಗಿ .
ಗಂಗಾವತಿ ನಗರ ಆರ್ಯವೈಶ್ಯ ಸಮಾಜ ಪ್ರಧಾನ ಕಾರ್ಯದರ್ಶಿಗಳು ಶ್ರೀ ಈಶ್ವರ ಶಕ್ತಿ

ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
Application period for admission to residential schools extended

ಕೊಪ್ಪಳ ಫೆಬ್ರವರಿ 04, (ಕರ್ನಾಟಕ ವಾರ್ತೆ): ಜಿಲ್ಲೆಯ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಡಾ:ಬಿ.ಆರ್.ಅಂಬೇಡ್ಕರ್, ಶ್ರೀಮತಿ ಇಂದಿರಾಗಾAಧಿ ವಸತಿ ಶಾಲೆಗಳಿಗೆ 2026-27ನೇ ಸಾಲಿಗೆ 6ನೇ ತರಗತಿ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ಪ್ರತಿಭಾನ್ವಿತ ಹಿಂದುಳಿದ, ಪ:ಜಾತಿ, ಪ:ಪಂಗಡ, ವಿಶೇಷ ವರ್ಗದ ಬಡ ವಿದ್ಯಾರ್ಥಿಗಳಿಂದ ಪ್ರವೇಶ ಪರೀಕ್ಷೆಗೆ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಕೆ ಅವಧಿಯನ್ನು ಫೆ.7 ರವರೆಗೆ ವಿಸ್ತರಿಸಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) 01 ಮಾರ್ಚ್ 2026ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಪ್ರವೇಶ ಪರೀಕ್ಷೆಯನ್ನು ನಿಗದಿಪಡಿಸಲಾಗಿದೆ. ಪ್ರಸ್ತುತ ಈಗಾಗಲೇ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಹತ್ತಿರದ ವಸತಿ ಶಾಲೆಯಲ್ಲಿ ಅರ್ಜಿ ಸಲ್ಲಿಸಲು ಜನವರಿ 25 ಕೊನೆಯ ದಿನವಾಗಿತ್ತು. ಮುಂದುವರೆದು ಪ್ರವೇಶಾತಿಗೆ ಆನ್‌ಲೈನ್ ಮುಖಾಂತರ ಹತ್ತಿರದ ವಸತಿ ಶಾಲೆ, ಕಾಲೇಜುಗಳ ಮೂಲಕ ಅರ್ಜಿ ಸಲ್ಲಿಸಲು ಫೆ. 7 ರವರೆಗೆ ಅವಧಿ ವಿಸ್ತರಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ http://kea.kar.nic.in ಹಾಗೂ http://kreis.kar.nic.in ವೆಬ್‌ಸೈಟ್ ಹಾಗೂ ಸಮೀಪದ ವಸತಿ ಶಾಲೆಗಳ ಪ್ರಾಂಶುಪಾಲರುಗಳನ್ನು ಸಂಪರ್ಕಿಸಬಹುದಾಗಿದೆ.

ಸಹಕಾರಿ ಸಂಘಗಳು ಲೆಕ್ಕಪರಿಶೋಧಕರ ನೇಮಕಾತಿಯ ಮಾಹಿತಿ ಸಲ್ಲಿಸಲು ಸೂಚನೆ
ಸಹಕಾರಿ ಸಂಘಗಳು ಲೆಕ್ಕಪರಿಶೋಧಕರ ನೇಮಕಾತಿಯ ಮಾಹಿತಿ ಸಲ್ಲಿಸಲು ಸೂಚನೆ
Notice to Cooperative Societies to submit information on appointment of auditors

ಕೊಪ್ಪಳ ಫೆಬ್ರವರಿ 04, (ಕರ್ನಾಟಕ ವಾರ್ತೆ): ಸಹಕಾರಿ ಸಂಘಗಳು ಲೆಕ್ಕಪರಿಶೋಧನೆಗಾಗಿ ಲೆಕ್ಕಪರಿಶೋಧಕರ ನೇಮಕಾತಿ ಮಾಡಿಕೊಂಡಿರುವ ಮಾಹಿತಿ ಸಲ್ಲಿಸುವಂತೆ ಕೊಪ್ಪಳ ಜಿಲ್ಲಾ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪ ನಿರ್ದೇಶಕರು ತಿಳಿಸಿದ್ದಾರೆ.
ಕರ್ನಾಟಕ ಸಹಕಾರ ಸಂಘಗಳ ನಿಯಮಗಳು 1960 ನಿಯಮ 29-ಬಿ(8) ಹಾಗೂ ಕರ್ನಾಟಕ ಸೌಹಾರ್ದ ಸಹಕಾರಿ ನಿಯಮಗಳು 2004 ನಿಯಮ 8-ಬಿ (8) ಅನ್ವಯ ಲೆಕ್ಕಪರಿಶೋಧಕರ ನೇಮಕಾತಿ ಬಗ್ಗೆ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಕೊಪ್ಪಳ ಜಿಲ್ಲಾ ಉಪ ನಿರ್ದೇಶಕರ ಕಛೇರಿಗೆ ವಾರ್ಷಿಕ ಸಭೆ ಜರುಗಿಸಿದ 7 ದಿನಗಳೊಳಗಾಗಿ ಸಲ್ಲಿಸಬೇಕಾಗಿತ್ತು. ಆದರೆ, ಇನ್ನು ಬಹಳಷ್ಟು ಸಹಕಾರ ಸಂಘಗಳ ಮತ್ತು ಸೌಹಾರ್ದ ಸಹಕಾರಿಗಳ ಆಡಳಿತ ಮಂಡಳಿಗಳು ಇಲ್ಲಿಯವರೆಗೆ ಲೆಕ್ಕಪರಿಶೋಧಕರ ನೇಮಕಾತಿ ಬಗ್ಗೆ ಈ ಕಛೇರಿಗೆ ಮಾಹಿತಿ ಸಲ್ಲಿಸಿರುವುದಿಲ್ಲ. ಹಾಗಾಗಿ, 2025-26ನೇ ಸಾಲಿನ ಲೆಕ್ಕಪರಿಶೋಧನೆಗಾಗಿ ವಾರ್ಷಿಕ ಮಹಾಸಭೆಯಲ್ಲಿ ಲೆಕ್ಕಪರಿಶೋಧಕರ ನೇಮಕಾತಿ ಮಾಡಿಕೊಂಡಿರುವ ಬಗ್ಗೆ ತಕ್ಷಣ ವಿಳಂಬಕ್ಕೆ ಅವಕಾಶ ನೀಡದೇ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಅಧ್ಯಕ್ಷರ ರುಜುವಿನೊಂದಿಗೆ ವಾರ್ಷಿಕ ಮಹಾಸಭೆಯ ನಡವಳಿಯೊಂದಿಗೆ ಮಾಹಿತಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಮೊ.ಸಂ: 7259730379 ಗೆ ಸಂಪರ್ಕಿಸಬಹುದು ಎಂದು ಕೊಪ್ಪಳ ಜಿಲ್ಲಾ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪ ನಿರ್ದೇಶಕರ ಕಛೇರಿಯ ಪ್ರಕಟಣೆ ತಿಳಿಸಿದೆ.

ಕ.ಕ.ರ.ಸಾ.ನಿ. ಕೊಪ್ಪಳ ವಿಭಾಗ: ಶಿಶಿಕ್ಷ ತರಬೇತಿಗೆ ಅರ್ಜಿ ಆಹ್ವಾನ

ಕ.ಕ.ರ.ಸಾ.ನಿ. ಕೊಪ್ಪಳ ವಿಭಾಗ: ಶಿಶಿಕ್ಷ ತರಬೇತಿಗೆ ಅರ್ಜಿ ಆಹ್ವಾ

K.K.R.Sa.ni. Koppal Division: Application Invitation for Teacher Training

ಕೊಪ್ಪಳ ಫೆಬ್ರವರಿ 04, (ಕರ್ನಾಟಕ ವಾರ್ತೆ): ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕೊಪ್ಪಳ ವಿಭಾಗದಿಂದ ಶಿಶಿಕ್ಷ ಅಧಿನಿಯಮ 1961 ರನ್ವಯ ಪೂರ್ಣ ಅವಧಿಯ ತರಬೇತಿ ಪಡೆಯಲು ಕೊಪ್ಪಳ ವಿಭಾಗದ ವ್ಯಾಪ್ತಿಯಲ್ಲಿ ಇರುವ ಕೊಪ್ಪಳ, ಗಂಗಾವತಿ, ಕುಕನೂರು, ಯಲಬುರ್ಗಾ, ಕುಷ್ಟಗಿ ಹಾಗೂ ವಿಭಾಗೀಯ ಕಾರ್ಯಾಗಾರಗಳಲ್ಲಿ ತರಬೇತಿಗೆ ಅವಕಾಶವಿದ್ದು, ಅದರಂತೆ ವಿವಿಧ ವೃತ್ತಿಗಳಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ.
ಮೆಕ್ಯಾನಿಕ್ ಡೀಸಲ್ ವೃತ್ತಿ (ಮೆಕ್ಯಾನಿಕ್ ಡೀಸಲ್‌ನಲ್ಲಿ ಐ.ಟಿ.ಐ ಪಾಸಾಗಿರಬೇಕು) 15 ಅಭರ್ಥಿಗಳು, ಆಟೋ ಎಲೆಕ್ಟ್ರಿಷಿಯನ್ ವೃತ್ತಿ(ಆಟೋ ಎಲೆಕ್ಟಿçÃಷಿಯನ್ ಐ.ಟಿ.ಐ ಪಾಸಾಗಿರಬೇಕು) 18 ಅಭ್ಯರ್ಥಿಗಳು ಹಾಗೂ ಆಟೋ ಬಾಡಿ ಬಿಲ್ಡರ್/ಫಿಟ್ಟರ್(ಎಂ.ವಿ.ಬಿ.ಬಿ)(ಮೆಕ್ಯಾನಿಕ್ ಮೋಟರ್ ವಹಿಕಲ್/ ಫಿಟ್ಟರ್ ನಲ್ಲಿ ಐ.ಟಿ.ಐ ಪಾಸಾಗಿರಬೇಕು) 32 ಅಭ್ಯರ್ಥಿಗಳು ಸೇರಿದಂತೆ ಒಟ್ಟು 65 ಅಭ್ಯರ್ಥಿಗಳಿಗೆ 1 ವರ್ಷದ ಅವಧಿಗೆ ತರಬೇತಿ ನೀಡಲಾಗುವುದು.
ತರಬೇತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 2026ರ ಜನವರಿ 31 ಕ್ಕೆ ಕನಿಷ್ಟ 18 ವರ್ಷಗಳು ತುಂಬಿರಬೇಕು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಗರಿಷ್ಟ 40 ವರ್ಷ ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷಗಳು ಮೀರಿರಬಾರದು. ಪರಿಶಿಷ್ಟ ಜಾತಿಯವರಿಗೆ ಶೇ.17 ರಷ್ಟು, ಪರಿಶಿಷ್ಟ ಪಂಗಡದವರಿಗೆ ಶೇ.7 ರಷ್ಟು ಸ್ಥಾನವನ್ನು ಮೀಸಲಾಗಿರಿಸಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಯಾನುಸಾರ ಕ.ಕ.ರ.ಸಾ. ನಿಗಮ, ಕೇಂದ್ರ ಕಛೇರಿ, ಕಲಬುರಗಿಯಿಂದ ಸೂಚಿಸುವ ಮೊತ್ತವನ್ನು ಮಾಹೆಯಾನ ಬ್ಯಾಂಕ್ ಖಾತೆ ಮುಖಾಂತರ ಮಾಸಿಕ ಶಿಶಿಕ್ಷÄ ತರಬೇತಿ ಭತ್ಯೆ ಪಾವತಿಸಲಾಗುವುದು. ಮೇಲಿನ ಖಾಲಿ ಸ್ಥಾನಗಳಲ್ಲಿ ಅವಶ್ಯಕತೆ ಅನುಸಾರ ಬದಲಾಯಿಸುವ ಹಕ್ಕನ್ನು ಸಂಸ್ಥೆಯು ಕಾಯ್ದಿರಿಸಲಾಗಿದೆ.
ಶಿಶಿಕ್ಷÄ ತರಬೇತಿಯು ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟಿದೆ. ಇದರನ್ವಯ ಈಗಾಗಲೇ ಶಿಶಿಕ್ಷÄ ಕಾಯ್ದೆ 1961 ರ ಅನ್ವಯ ಯಾವುದೇ ವೃತ್ತಿಯಲ್ಲಿ ಶಿಶಿಕ್ಷÄ ತರಬೇತಿ ಪಡೆದಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ. ಶಿಶಿಕ್ಷÄ ತರಬೇತಿ ಪೂರ್ತಿಯಾದ ನಂತರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಕೆಲಸ ನೀಡುವ ಬಗ್ಗೆ ಹೊಣೆಗಾರರಾಗುವುದಿಲ್ಲ ಹಾಗೂ ಯಾವುದೇ ಒಪ್ಪಂದಕ್ಕೆ ಒಳಪಟ್ಟಿರುವುದಿಲ್ಲ. ಅಭ್ಯರ್ಥಿಗಳಿಗೆ ಕನ್ನಡ ಭಾಷೆಯನ್ನು ಓದಲು, ಬರೆಯಲು ಮತ್ತು ಮಾತನಾಡಲು ಕಡ್ಡಾಯವಾಗಿ ತಿಳಿದಿರಬೇಕು. ತರಬೇತಿ ನಿಯೋಜನೆಗೆ ಸಂಬAಧಿಸಿದAತೆ ಯಾವುದೇ ರೀತಿಯ ಶಿಫಾರಸ್ಸು ಅಥವಾ ಒತ್ತಡಗಳಿಗೆ ಆಸ್ಪದ ಇರುವುದಿಲ್ಲ. ನಿಯೋಜನಾ ಪ್ರಾಧಿಕಾರಸ್ಥರುಗಳ ತೀರ್ಮಾನವೇ ಅಂತಿಮ. ಈ ಬಗ್ಗೆ ಯಾವುದೇ ಪತ್ರ ವ್ಯವಹಾರಕ್ಕೆ ಆಸ್ಪದವಿಲ್ಲ. ಶಿಶಿಕ್ಷÄ ತರಬೇತಿಗೆ ನಿಯೋಜನೆಗೊಂಡ ಅಭ್ಯರ್ಥಿಗಳು ದೈಹಿಕ ಅರ್ಹತೆ ಪಡೆದಿರಬೇಕು ಮತ್ತು ತರಬೇತಿಗೆ ಹಾಜರಾಗುವ ಮುನ್ನ ಜಿಲ್ಲಾ ವೈದ್ಯಾಧಿಕಾರಿಗಳಿಂದ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕು. ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳು ಕೊಪ್ಪಳ ವಿಭಾಗದ ವ್ಯಾಪ್ತಿಯಲ್ಲಿ ಬರುವ ಘಟಕ ಹಾಗೂ ಕೊಪ್ಪಳ ವಿಭಾಗೀಯ ಕಾರ್ಯಾಗಾರದಲ್ಲಿ ಮಾತ್ರ ತರಬೇತಿ ಪಡೆಯಲು ಸಿದ್ದರಿರಬೇಕು.
ತರಬೇತಿಗೆ ನಿಗದಿತ ಅರ್ಜಿ ನಮೂನೆಯಲ್ಲಿ ಅಭ್ಯರ್ಥಿಗಳು ತಮ್ಮ ಸ್ವಂತ ಕೈ ಬರಹದಿಂದ ವಿವರವನ್ನು ನಮೂದಿಸಿ ಅರ್ಜಿಯೊಂದಿಗೆ ಜನ್ಮ ದಿನಾಂಕ, ವಿದ್ಯಾರ್ಹತೆಗೆ ಸಂಬAಧಿಸಿದ ಪ್ರಮಾಣ ಪತ್ರಗಳ ನಕಲು ಪ್ರತಿಗಳನ್ನು ಹಾಗೂ ಪ.ಜಾ/ಪ.ಪಂ ಸಂಬAಧಪಟ್ಟAತೆ ಜಾತಿ ಪ್ರಮಾಣ ಪತ್ರಗಳನ್ನು ಲಗತ್ತಿಸಿ, ಇತ್ತೀಚಿನ ಪಾಸ್‌ಪೋರ್ಟ ಸೈಜಿನ ಭಾವ ಚಿತ್ರವನ್ನು ಅರ್ಜಿಗೆ ಅಂಟಿಸಿ ಸಂಬAಧಿಸಿದ ಎಲ್ಲಾ ದಾಖಲೆಗಳ ಮೂಲ ಪ್ರಮಾಣ ಪತ್ರಗಳು ಹಾಗೂ ಒಂದು ಜೊತೆ ಛಾಯಾ ಪ್ರತಿಗಳೊಂದಿಗೆ “ವಿಭಾಗೀಯ ನಿಯಂತ್ರಣಾಧಿಕಾರಿ, ಕ.ಕ.ರ.ಸಾ.ನಿಗಮ, ಕೊಪ್ಪಳ ವಿಭಾಗ” ಇವರಲ್ಲಿ ಫೆಬ್ರವರಿ 26 ರಂದು ಬೆಳಿಗ್ಗೆ 11 ಗಂಟೆಯಿAದ ಮಧ್ಯಾಹ್ನ 1.30 ರ ವರೆಗೆ ಸ್ವಂತ ಖರ್ಚಿನಲ್ಲಿ ನೇರ ಸಂದರ್ಶನಕ್ಕೆ ಹಾಜರಾಗತಕ್ಕದ್ದು.
ಸಂದರ್ಶನದ ನಂತರ ನಿಯೋಜನೆಗೆ ಆಯ್ಕೆಗೊಂಡ ಅಭ್ಯರ್ಥಿಗಳ ಹೆಸರುಗಳನ್ನು ಸೂಚನಾ ಫಲಕದಲ್ಲಿ ಪ್ರಕಟಿಸಲಾಗುವುದು. ಶಿಶಿಕ್ಷÄ ತರಬೇತಿ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಮೊಬೈಲ್ ಸಂಖ್ಯೆ, ಆಧಾರ ಕಾರ್ಡ ಪ್ರತಿ, ಇ-ಮೇಲ್ ವಿಳಾಸದ ದಾಖಲೆಗಳನ್ನು ಹೊಂದಿರಬೇಕು ಹಾಗೂ ರಾಷ್ಟಿçÃಕೃತ ಬ್ಯಾಂಕಿನ ಖಾತೆಯನ್ನು ಹೊಂದಿದ್ದು, ಆ ಖಾತೆಗೆ ಆಧಾರ ಕಾರ್ಡ ಸಂಖ್ಯೆ ಜೋಡಣೆಯಾಗಿರಬೇಕು. ಶಿಶಿಕ್ಷÄ ತರಬೇತಿ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳ ಹೆಸರು, ತಂದೆಯ ಹೆಸರು, ಅಡ್ಡ ಹೆಸರು ಹಾಗೂ ಜನ್ಮ ದಿನಾಂಕವು ಎಸ್.ಎಸ್.ಎಲ್.ಸಿ ಅಂಕಪಟ್ಟಿ ಹಾಗೂ ಆಧಾರ ಕಾರ್ಡನಲ್ಲಿ ಒಂದೇ ತೆರನಾಗಿರಬೇಕು. ಇಲ್ಲವಾದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಎಲ್ಲಾ ರೀತಿಯಲ್ಲಿ ಮಾಹಿತಿ ಸರಿಯಾಗಿರುವ ಅಭ್ಯರ್ಥಿಗಳು www. apprenticeshipindia.gov.in ನಲ್ಲಿ ನೋಂದಣಿ ಮಾಡಿಕೊಂಡು ಪೋರ್ಟಲ್‌ನಿಂದ DIVISIONAL CONTROLLER, KKRTC KOPPAL DIVISION, ESTABLESHMENT (E06162900063) ನಲ್ಲಿ ಫೆಬ್ರವರಿ 25 ರ ಸಂಜೆ 5.30 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ನೋಂದಣಿ ಇಲ್ಲದೇ ಇರುವಂತಹ ಅಭ್ಯರ್ಥಿಗಳನ್ನು ಅನರ್ಹಗೊಳಿಸಲಾಗುವುದು ಎಂದು ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿರೇಬೆಣಕಲ್ ಅಭಿವೃದ್ಧಿಗೆ ಸಾಕ್ಷಾತ್ ಶಿವನ ಮೊರೆ: ಮಂಜುನಾಥ ಗುಡ್ಲಾನೂರ್ ಅವರ ಮೌನ ಧ್ಯಾನದ ಸಂಕಲ್ಪ

ಹಿರೇಬೆಣಕಲ್ ಅಭಿವೃದ್ಧಿಗೆ ಸಾಕ್ಷಾತ್ ಶಿವನ ಮೊರೆ: ಮಂಜುನಾಥ ಗುಡ್ಲಾನೂರ್ ಅವರ ಮೌನ ಧ್ಯಾನದ ಸಂಕಲ್ಪ

A true prayer to Lord Shiva for the development of Hirebenakal: Manjunatha Gudlanur's silent meditation resolution

ಗಂಗಾವತಿ ತಾಲೂಕಿನ ಪ್ರಾಗೈತಿಹಾಸಿಕ ಹಿರೇಬೆಣಕಲ್ ನೆಲೆ ಈಗ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುತ್ತಿದೆ. ಆದರೆ, ಈ ಐತಿಹಾಸಿಕ ಸ್ಥಳದ ಅಭಿವೃದ್ಧಿ ಮತ್ತು ಸಂರಕ್ಷಣೆಗಾಗಿ ದಶಕಗಳಿಂದ ನಿಸ್ವಾರ್ಥ ಸೇವಕನಂತೆ ಸೇವೆಸ್ಸಲ್ಲಿಸುತ್ತಿರುವವರು ಮಂಜುನಾಥ ಗುಡ್ಲಾನೂರರು ಒಬ್ಬರು
ಡಾ. ಶರಣಬಸಪ್ಪ ಕೊಲ್ಕರ್ ಅವರ ನಂತರ, ಸೇವಕರಾಗಿ ಹಿರೇಬೆಣಕಲ್ಗೆ ಸೇವೆ ಸಲ್ಲಿಸಿದವರು ಇವರೇ. ಈ ನೆಲೆಯನ್ನು ಪರಿಚಯಿಸಲು, ಸಂಶೋಧಕರನ್ನೂ, ವಿದ್ಯಾರ್ಥಿಗಳನ್ನೂ, ಮಠಾಧೀಶರನ್ನೂ ಕರೆತಂದು ತೋರಿಸಿದವರು. ಪತ್ರಿಕೆ, ಸಾಮಾಜಿಕ ಮಾಧ್ಯಮಗಳಲ್ಲಿ ಅದರ ಪ್ರಚಾರ ಮಾಡಿದವರು. ಇಂದಿಗೂ ಅವರ ಉಸಿರು, ಈ ನೆಲೆಯ ಗುಂಗಿನಲ್ಲೇ ಸಾಗುತ್ತಿದೆ; ಅವರ ಆಲೋಚನೆ, ಅದರ ಅಭಿವೃದ್ಧಿಯ ಕೂಗಿನಲ್ಲೇ ಮಗ್ನವಾಗಿದೆ.

ಇದು ಕೇವಲ ಅಭಿಮಾನವಲ್ಲ, ಒಂದು ಆತ್ಮೀಯ ಪ್ರೇಮ. ‘ಹಿರೇಬೆಣಕಲ್’ ಎನ್ನುವಾಗಲೇ ಅವರ ಹೃದಯ ಬಡಿಯುತ್ತದೆ. ಅದರ ರಕ್ಷಣೆ, ಪ್ರವಾಸಿಗರ ಆಗಮನ – ಇದೇ ಅವರ ಜೀವನದ ಸಂಕಲ್ಪ. ದೀರ್ಘಕಾಲದ ಸೇವೆಯ ನಡುವೆ, ರಾಜಕಾರಣಿಗಳು, ಸಚಿವರು, ಶಾಸಕರು, ಮುಖ್ಯಮಂತ್ರಿಗಳು, ಜಿಲ್ಲಾಧಿಕಾರಿಗಳ ಎದುರು ಅವರು ಅನೇಕ ಬಾರಿ ಮನವಿ ಸಲ್ಲಿಸಿದರು, ವಿನಂತಿಸಿದರು. ಆದರೆ, ‘ಈವರೆಗೂ ಒಂದು ಕೆಲಸವಾಗಿಲ್ಲ’ ಎಂಬ ನೋವು-ನಿರಾಶೆ ಅವರನ್ನು ಕಾಡುತ್ತಿದೆ.

ಆದ್ದರಿಂದ, ಅವರು ಈಗ ಮೊರೆ ಹೋಗಲು ನಿರ್ಧರಿಸಿದ್ದು, ಯಾವ ಅಧಿಕಾರಿ ಅಥವಾ ರಾಜಕಾರಣಿಯನ್ನ ಲ್ಲ… ಮೊರೆ ಹೋಗಿರುವುದು ಸಾಕ್ಷಾತ್ ಮಹಾಪಶುಪತಿ ನಾಥನಿಗೆ, ಅಂದರೆ ಶಿವನಿಗೆ!

ಕಾರಣ? ಈ ಶಿಲಾಯುಗದ ನೆಲೆಯಲ್ಲಿ ಆದಿಮಾನವರ ನಾಗರಿಕತೆ ಬೆಳವಣಿಗೆಗೆ, ಕಬ್ಬಿಣದ ಶೋಧನೆಗೆ, ಕಲಾ-ಸಂಸ್ಕೃತಿಯ ಅಭಿವ್ಯಕ್ತಿಗೆ, ಗುಹಾ ಚಿತ್ರಗಳಿಗೆ, ಆಧ್ಯಾತ್ಮಿಕ ಚೇತನವೊಂದರ ಆಶೀರ್ವಾದ ಇರಲೇಬೇಕು ಎಂಬುದು ಅವರ ದೃಢ ವಿಶ್ವಾಸ. ‘ದೇವನೊಬ್ಬ, ನಾಮ ಹಲವು’ ಎಂಬಂತೆ, ಯಾರೇ ದೇವತೆಯನ್ನು ಸ್ಮರಿಸಿದರೂ, ಆ ಅನಾದಿ ಶಕ್ತಿಯೇ ಇಲ್ಲಿ ನೆಲೆಸಿದೆ ಎಂದು ನಂಬುತ್ತಾರೆ.

ಹಿರೇಬೆಣಕಲ್ ನೆಲೆಯ ಕೆಳಭಾಗದಲ್ಲಿ
ಮೌನ ಧ್ಯಾನದ ಸಂಕಲ್ಪ:

ಈ ಭಕ್ತಿ-ನಂಬಿಕೆಯಿಂದ, ಮಂಜುನಾಥ ಗುಡ್ಲಾನೂರ್ ಸಾಕ್ಷಾತ್ ಪರಮಾತ್ಮನ ಆಶೀರ್ವಾದ ಕೋರಿ ಮೂರು ದಿನಗಳ ಮೌನ ಧ್ಯಾನ ವ್ರತ ಕೈಗೊಳ್ಳಲಿದ್ದಾರೆ. ಈ ಧ್ಯಾನದ ಉದ್ದೇಶಗಳು:

1. ಈ ಪ್ರಾಗೈತಿಹಾಸಿಕ ನೆಲೆ ಸಂರಕ್ಷಿತ ಮತ್ತು ಸುರಕ್ಷಿತವಾಗಲಿ.
2. ಇಲ್ಲಿಗೆ ಬರುವ ಪ್ರವಾಸಿಗರು, ಚಾರಣಿಗರು ಸುರಕ್ಷಿತ ಮತ್ತು ಸಂತೋಷದ ಅನುಭವ ಪಡೆಯಲಿ.
3. ಸುರಕ್ಷಿತ ದಾರಿಗಳು ಮತ್ತು ಇತರ ಅವಶ್ಯಕ ಸೌಕರ್ಯಗಳ ಅಭಿವೃದ್ಧಿಗೆ ದಾರಿ ಮಾಡಿಕೊಡಲಿ.
4. ನೆಲೆಯಲ್ಲಿ ಸಂಶೋಧನೆ ಪ್ರಾರಂಭವಾಗಲಿ
5. ವಾಹನ ನಿಲುಗಡೆ, ಸುಂದರ ಪಾರ್ಕ್ ನಿರ್ಮಾಣ ವಾಗಲಿ
6. ಆದಿಮಾನವ ಸಂಕಿರಣ ಪ್ರಾರಂಭಿಸಲಿ
ಸಾರ್ವಜನಿಕ ಆಹ್ವಾನ: ಹಿರೇಬೆಣಕಲ್, ಚಿಕ್ಕಬೆಣಕಲ್, ಮುಕ್ಕುಂಬಿ, ಬಸಾಪಟ್ಟಣ, ಎಡಹಳ್ಳಿ ಹಾಗೂ ತಾಲೂಕಿನ, ಜಿಲ್ಲೆಯ, ರಾಜ್ಯದ ಮತ್ತು ದೇಶ-ವಿದೇಶಗಳಲ್ಲಿರುವ ಎಲ್ಲಾ ಅಭಿಮಾನಿಗಳನ್ನು ಗುಡ್ಲಾನೂರ ಆಹ್ವಾನಿಸಿದ್ದಾರೆ. ಈ ಮೂರು ದಿನಗಳ ಮೌನ ಧ್ಯಾನದಲ್ಲಿ ಭಾಗವಹಿಸಿ, ಸಾಕ್ಷಾತ್ ಪರಮಾತ್ಮನ ಕೃಪೆಗೆ ಪಾತ್ರರಾಗಿ, ಹಿರೇಬೆಣಕಲ್ ನೆಲೆಯ ಪ್ರಗತಿ ಮತ್ತು ಸಂರಕ್ಷಣೆಗೆ ಒಂದಾಗಿ ಆಶೀರ್ವಾದ ಬೇಡುವಂತೆ ಕೋರಿದ್ದಾರೆ.
ಇದು ಕೇವಲ ಒಬ್ಬ ವ್ಯಕ್ತಿಯ ವ್ರತವಲ್ಲ; ಒಂದು ಇಡೀ ಸಮುದಾಯದ, ಒಂದು ಇತಿಹಾಸದ, ಮತ್ತು ಒಂದು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗಾಗಿ ನಡೆಸಲಾಗುವ ಆಧ್ಯಾತ್ಮಿಕ ಯಾತ್ರೆಯಾಗಿದೆ.