

ಸಾಯಂಕಾಲ ಆದಮೇಲೆ ನೀರು ಕಡಿಮೆ ಕುಡಿಯುತ್ತಾ ಹೋಗಬೇಕು ಯಾಕೆಂದರೆ ᴋɪᴅɴᴇʏ ಗೆ ಒತ್ತಡ ಬೀಳ ಬಾರದು. ರಾತ್ರಿ ಮಲಗಿದಾಗ metabolic activity ಆಗಿ ತುಂಬಾ ನೀರಿನ ಅಂಶ ಹಾಗೂ ಕಲ್ಮಶ ದೇಹದಿಂದ ಮೂತ್ರ ಮತ್ತು ಮಲ ವಿಸರ್ಜನೆ ಮೂಲಕ ಬೆಳಿಗ್ಗೆ ಹೊರ ಹೋಗುತ್ತವೆ. ಆವಾಗ ದೇಹದಲ್ಲಿ ನೀರಿನ ಅಂಶ ಬಹಳ ಕಡಿಮೆ ಇರುತ್ತದೆ. ಅದಕ್ಕೆ ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯಿರಿ ಎಂದು ವೈದ್ಯರು ಹೇಳುತ್ತಾರೆ.
ನೀರಿನಲ್ಲಿ ಹಲವು ಪೋಷಕ ಅಂಶ ಗಳು ಇರುತ್ತವೆ, ನಿಜ. ಆದರೆ ಎಳನೀರು ನೀರಿಗಿಂತ ಹೆಚ್ಚು ಒಳ್ಳೆಯದು ಯಾಕೆಂದರೆ ಅದು ನಿರ್ಜಲೀಕರಣ ವನ್ನು ಬೇಗ ಕಡಿಮೆ ಮಾಡಿ ದೇಹಕ್ಕೆ ಬೇಕಾದ minerals, vitamins ಮತ್ತು electrolytes ಗಳನ್ನು ನೀರಿಗಿಂತ ಹೆಚ್ಚು ತಕ್ಷಣ ಒದಗಿಸುತ್ತದೆ. ಎಳನೀರು ನಿಂದ ನೀರಿಗಿಂತ ಹೆಚ್ಚು ಉಪಯೋಗ ವಿದೇ. ಆದರೆ ಇಂತಹ ಸವಲತ್ತು ತೆಂಗಿನ ತೋಟ ಇದ್ದವರಿಗೆ ಹೆಚ್ಚು. ಪಟ್ಟಣ ದಲ್ಲಿ ಇರುವವರಿಗೆ ಸ್ವಲ್ಪ ಕಷ್ಟ.
ಈಗತಾನೆ ಮರದಿಂದ ಇಳಿಸಿದ ಎಳೆನೀರು ಅಂದರೆ fresh tender coconut water ತುಂಬಾ ಒಳ್ಳೆಯದು. ಅಂಥಹ ಭಾಗ್ಯ ಇನ್ನೂ ವಿರಳ, ತೆಂಗಿನ ತೋಟ ವಿದ್ದರೂ, ಯಾಕೆಂದರೆ ಗಿಡ ವೇರಿ ಕಿತ್ತು ಕೊಡುವವರು ಬೇಕು ನೋಡಿ. ನಮ್ಮ ಹಳ್ಳಿಯಲ್ಲಿ ಸುಮಾರು ವರ್ಷ ಗಳ ಹಿಂದೆ ಇದೊಂದು ಸಹಜ ಕ್ರಿಯೆ ಆಗಿತ್ತು. ಈಗಿನ ತ ರ energy rich drinks ತೆಗೆದು ಕೊಳ್ಳುವ ದರಿದ್ರ ಭಾಗ್ಯ ಇರಲಿಲ್ಲ.ಪ್ರಶ್ನೆ ಕೇಳಿದ Nair ಅವರಿಗೆ ವಂದನೆಗಳು.



