Breaking News

ಹರಳಹಳ್ಳಿ ಗ್ರಾಮದಲ್ಲಿಸರ್ಕಾರಿ ಜೂನಿಯರ್ ಕಾಲೇಜು, NSS ವಾರ್ಷಿಕ ವಿಶೇಷ- ಶಿಬಿರ

Government Junior College, NSS Annual Special Camp in Haralahalli Village

Screenshot 2025 09 25 17 27 41 46 6012fa4d4ddec268fc5c7112cbb265e74072121460542329730

ಮರೆಯಾಗುತ್ತಿರುವ ಜಾನಪದ ಕಲೆಯ ಉಳಿಸಿ-ಮೈಬೂಬ್ ಕಿಲ್ಲೇದಾರ್

ಜಾಹೀರಾತು

ದಿನಾಂಕ 20.09.2025 ರಿಂದ 26.09.25 ರವರಿಗೆ

ಗಂಗಾವತಿ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡ ಎನ್ ಎಸ್ ಎಸ್ ವಾರ್ಷಿಕ ಶಿಬಿರದ ಕಾರ್ಯಕ್ರಮದಲ್ಲಿ ಜಾನಪದದಲ್ಲಿ ಜೀವನ ಮೌಲ್ಯಗಳು ಎಂಬ ವಿಷಯ ಕುರಿತು ಮಾತನಾಡಿದ ಜಾನಪದ ಕಲಾವಿದ ಮತ್ತು ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾದ ಮಹಿಬೂಬ್ ಕಿಲ್ಲೆದಾರ್ ರವರು ಮಾತನಾಡುತ್ತಾ ಇಂದಿನ ಆಧುನಿಕ ಯುಗದಲ್ಲಿ ಮರೆಯಾಗುತ್ತಿರುವ ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ಅಗತ್ಯವಿದೆ ನಮ್ಮ ಸುತ್ತಮುತ್ತಲಿನ ಜಾನಪದ ಕಲಾವಿದರನ್ನು ಜಾನಪದ ತಜ್ಞರನ್ನು ಮಾತಾಡಿಸಿ ಅವರನ್ನು ಪ್ರೋತ್ಸಾಹಿಸುವ ಮೂಲಕ ಈ ಕಲೆಯನ್ನು ನಿರಂತರ ಜೀವಂತವಾಗಿಸುವ ಅಗತ್ಯವಿದೆ. ಹಲವು ಜಾನಪದ ಗೀತೆಗಳ ಮೂಲಕ ಮಕ್ಕಳನ್ನು ರಂಜಿಸುತ್ತ ಅದರಲ್ಲಿರುವ ಜೀವನ ಮೌಲ್ಯವನ್ನು ವಿವರಿಸುತ್ತಾ ಮಕ್ಕಳನ್ನು ತೊಡಗಿಸಿಕೊಂಡು ಹಾಡುವುದರ ಮೂಲಕ ಸ್ವಯಂ ಸೇವಕರಲ್ಲಿ ಜಾನಪದ ಕಲೆಯ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ಯಶಸ್ವಿಯಾದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರಮೇಶ ಗಬ್ಬೂರ್ ರವರು ಜಾನಪದ ಬೆಳೆದು ಬಂದ ಬಗೆಯನ್ನು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸ್ಥಳೀಯರಾದ ಬಸವರಾಜ್ ಉಪನ್ಯಾಸಕರು, ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಈಶ್ವರಪ್ಪ , ಇಂಗ್ಲಿಷ್ ಉಪನ್ಯಾಸಕರಾದ ಮಹೇಶ್ ಮತ್ತು ಕಾರ್ಯಕ್ರಮ ಅಧಿಕಾರಿಗಳಾದ ರುದ್ರೇಶ್ ತಬಾಲಿ ಅವರು ಹಾಜರಿದ್ದರು..
ಎನ್ಎಸ್ಎಸ್ ಶಿಬಿರಾರ್ಥಿಗಳು ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಬಸಪ್ಪ ನಾಗೋಲಿ ಪ್ರಾಚಾರ್ಯರು ಜೂನಿಯರ್ ಕಾಲೇಜ್ ಗಂಗಾವತಿ

About Mallikarjun

Check Also

screenshot 2025 10 07 20 38 18 90 a71c66a550bc09ef2792e9ddf4b16f7a.jpg

ನನ್ನ ಹಲವು ಡೀಪ್‌ಫೇಕ್ ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿವೆ: ನಿರ್ಮಲಾ ಸೀತಾರಾಮನ್

Many of my deepfake videos are circulating everywhere: Nirmala Sitharaman ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.