
Why is Janardhan Reddy afraid of Rajashekhar Hitnal, asks Magalamani
ಗಂಗಾವತಿ :-5-ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ ಮುಂಬರುವ ವಿಧಾನ ಸಭೆ ಚುನಾವಣೆ ಯಲ್ಲಿ ಗಂಗಾವತಿ ಗಂಗಾವತಿಯ ಆಕಾಂಕ್ಷಿ ಎಂದು ನಗರಸಭೆಯ ಕಾರ್ಯಕ್ರಮವೂ0ದರಲ್ಲಿ ಶಾಸಕ ಗಾಲಿ ಜನಾರ್ಧನ್ ರಡ್ಡಿಯ ಹೇಳಿಕೆಯೂ ರಾಜಶೇಖರ್ ಹಿಟ್ನಾಳ್ ರಿಂದ ಭಯ ಕಾಡುತ್ತಿದೆಯಾ? ಎಂದು ಕೊಪ್ಪಳ ಜಿಲ್ಲಾ ಸರ್ವಾ O ಗೀ ಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಪ್ರಶ್ನೆ ಮಾಡಿದ್ದಾರೆ. ಹಿಟ್ನಾಳ್ ಕೊಪ್ಪಳ ಕ್ಷೇತ್ರದ ಸಂಸದರು ಗಂಗಾವತಿ ಕ್ಷೇತ್ರ ಅವರ ವ್ಯಾಪ್ತಿಯಲ್ಲಿ ಬರುತ್ತಿದೆ. ಸಕ್ರಿಯವಾಗಿ ಓಡಾಡುತ್ತಾರೆ. ಅನುದಾನ ತರಲು ಅಧಿಕಾರವಿದೆ. ಇದರಿಂದ ನೀವು ಭಯ ಪಡುವ ಅಗತ್ಯವಿಲ್ಲ, ನೀವು ಗಂಗಾವತಿಯಲ್ಲಿ ಸರಿಯಾಗಿ ವಾಸ ಮಾಡಿ ಜನರೊಂದಿಗೆ ಬೇರೆಯಿರಿ, ನಿಮ್ಮ ವಚನದಂತೆ ಆಂಜನಾದ್ರಿಗೆ ಸ್ವಂತ ಹಣ ಐದು ಸಾವಿರ ಕೋಟಿ ನೀಡಬೇಕು ಜನರಿಗೆ ಡಬಲ್ ಬೆಡ್ ರೂಮ್ ಕಟ್ಟಿ ಕೊಡಬೇಕು. ಜನರಿಗೆ ಉದ್ಯೋಗ ಒದಗಿಸಬೇಕು.ಗಂಗಾವತಿಯನ್ನು ಸಿಂಗಾಪುರ್ ಮಾಡಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದರೆ ಒಬ್ಬ ರಾಜಶೇಖರ್ ಅಲ್ಲಾ ಹತ್ತು ಜನ ಹಿಟ್ನಾಳ್ ಬಂದರು ನಿಮ್ಮನ್ನು ಏನು ಮಾಡಕ್ಕಾಗಲ್ಲ. ಅದು ಬಿಟ್ಟು ಕ್ರಿಯಾಶೀಲತೆಯಿಂದ ಜನರೊಂದಿಗೆ ಸರಳವಾಗಿ ಬೆರೆಯುವ ಯುವಕ ಅಭಿವೃದ್ಧಿ ಮಾಡುವ ಸಂಸದರ ಬಗ್ಗೆ ಹಗುರವಾಗಿ ಮಾತನಾಡುವ ತಮ್ಮಂತ ದೊಡ್ಡವರಿಗೆ ಶೋಭೆಯಲ್ಲ ಎಂದು ಮ್ಯಾಗಳಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಚಂದ್ರು ನಿಸರ್ಗ, ಜಡಿಯಪ್ಪ ಹಂಚಿನಾಳ, ರಾಘು ಕಡೆಬಾಗಿಲು, ದುರ್ಗೇಶ್ ಹೊಸಳ್ಳಿ, ರಾಮಣ್ಣ ರುದ್ರಾಕ್ಷಿ, ಬಸವರಾಜ್ ನಾಯಕ, ಮಂಜುನಾಥ್ ಚನ್ನದಾಸರ, ಹಾಲಪ್ಪ ನರಸಪ್ಪ,, ಮುತ್ತಣ್ಣ,ಜಂಬಣ್ಣ, ಪಂಪಾಪತಿ, ಹುಲ್ಲೇಶ್, ಮತ್ತಿತರರು ಇದ್ದರು.