Breaking News

ರಂಜಾನ್‌ ಹಬ್ಬ : ಶಾಂತಿ ಸಭೆ

Ramadan Festival: Shanti Sabha

ಜಾಹೀರಾತು

ಪವಿತ್ರ ರಂಜಾನ್‌ ಹಬ್ಬದ ನಿಮಿತ್ತ ಪಟ್ಟಣದ ಪೊಲೀಸ್‌ ಠಾಣೆಯಲ್ಲಿ  ಗುರುವಾರ ಶಾಂತಿ ಸಭೆ ನಡೆಯಿತು.

ಕೊಟ್ಟೂರು : ಪವಿತ್ರ ರಂಜಾನ್‌ ಹಬ್ಬದ ನಿಮಿತ್ತ ಪಟ್ಟಣದ ಕೊಟ್ಟೂರು ಪೊಲೀಸ್‌ ಠಾಣೆಯಲ್ಲಿ ಗುರುವಾರ ಶಾಂತಿ ಸಭೆ ನಡೆಯಿತು.

ಪಿಎಸ್‌ಐ ಗೀತಾಂಜಲಿ ಶಿಂಧೆ ಮಾತನಾಡಿ, ಪವಿತ್ರ ರಂಜಾನ್‌ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಶಾಂತಿ ಕಾಪಾಡಬೇಕು. ಹಬ್ಬದ ನಿಮಿತ್ತ
ಮುಖ್ಯ ರಸ್ತೆಯಲ್ಲಿನ ದರ್ಗಾಕ್ಕೆ ತೆರಳಲು ರಸ್ತೆಯ ಒಂದು ಬದಿಯಲ್ಲಿ ಅವಕಾಶ ಕಲ್ಪಿಸಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಜಾಗೃತಿ ವಹಿಸಿ.
ಮಸೀದಿ ಸ್ವಚ್ಛತೆ, ಸಣ್ಣಪುಟ್ಟ ಗೊಂದಲಗಳಿದ್ದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ. ಯುವಕರಿಗೆ ರಾತ್ರಿ ವೇಳೆ ಬೈಕ್‌ಗಳಲ್ಲಿ ಮೂರ್ನಾಲ್ಕು ಜನರು ಸಂಚರಿಸದಂತೆ ಹಿರಿಯರು ಸೂಚಿಸಬೇಕು.

ಠಾಣೆ ವ್ಯಾಪ್ತಿಯ ಬರುವ  ಹಳ್ಳಿಗಳಲ್ಲಿ ಮುಸ್ಲಿಂ ಬಾಂಧವರು ಹಬ್ಬ ಆಚರಿಸುವುದರಿಂದ ಸೂಕ್ತ ಬಂದೋಬಸ್ತ್‌ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಮುಸ್ಲಿಂ ಪ್ರಮುಖ ಮುಖಂಡರು ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು

About Mallikarjun

Check Also

ಕಮಲ್ ಹಾಸನ್ ಕ್ಷಮೆ ಕೇಳುವವರೆಗೂಅವರ ಚಿತ್ರಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು: ಬಳ್ಳಾರಿ ರಾಮಣ್ಣ ನಾಯಕ

Kamal Haasan’s films should be banned in the state until he apologizes: Ballari Ramanna Nayak …

Leave a Reply

Your email address will not be published. Required fields are marked *