Breaking News

ಸೂರ್ಯನಾಯಕನತಾಂಡದಲ್ಲಿಪ್ರಥಮಬಾರಿಗೆಸಂತ ಸೇವಾಲಾಲ್ ರವರ ೨೮೬ನೇ ಜಯಂತಿ ಅದ್ಧೂರಿ ಆಚರಣೆ

For the first time in the Suryanayak team Grand celebration of 286th Jayanti of Saint Sewalal

ಜಾಹೀರಾತು
ಜಾಹೀರಾತು

ಗಂಗಾವತಿ: ನಗರದ ಹೊರವಲಯದ ಸೂರ್ಯನಾಯಕನತಾಂಡದಲ್ಲಿ ಇದೇ ಪ್ರಥಮ ಬಾರಿಗೆ ಬಂಜಾರ ಸಮಾಜದಿಂದ ಸಂತ ಸೇವಾಲಾಲ್ ರವರ ೨೮೬ನೇ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಜಯಂತಿಯ ನಿಮಿತ್ಯ ಸಂತ ಸೇವಾಲಾಲ್ ಭಾವಚಿತ್ರದೊಂದಿಗೆ ತಾಂಡಾದಲ್ಲಿ ಕುಂಭ ಹೊತ್ತ ಮಹಿಳೆಯರೊಂದಿಗೆ ವಾದ್ಯಮೇಳದೊಂದಿಗೆ ಮೆರವಣಿಗೆ ನಡೆಸಿ ಸಂತ ಸೇವಾಲಾಲ್ ಮತ್ತು ಮರಿಯಮ್ಮ ದೇವಸ್ಥಾನದ ಹತ್ತಿರದಲ್ಲಿರುವ ಬಂಜಾರ ಸಮುದಾಯ ಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ನಿವೃತ್ತ ಶಿಕ್ಷಕರಾದ ರಾಜಶೇಖರ ಅವರಿಗೆ ಹಾಗೂ ಸ.ಕಿ.ಪ್ರಾ ಶಾಲೆಯ ಮುಖ್ಯಗುರುಗಳಾದ ಮಲ್ಲಿಕಾರ್ಜುನರವರಿಗೆ ಹಾಗೂ ಹಿರಿಯ ಶಿಕ್ಷಕರಾದ ಪ್ರಭಯ್ಯ ಹಿರೇಮಠರವರಿಗೆ ಬಂಜಾರ ಸಮಾಜದಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಜಯಂತಿ ಪಾಲ್ಗೊಂಡ ಎಲ್ಲರಿಗೂ ಅನ್ನಸಂತರ್ಪಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷ ಬಾಲಾಜಿ ಚವ್ಹಾಣ್, ಎಸ್.ಡಿ.ಎಂ.ಸಿ ಅಧ್ಯಕ್ಷ ಅಮರೇಶ ರಾಠೋಡ್, ಎಸ್.ಡಿ.ಎಂ.ಸಿ ಸದಸ್ಯ ಶಿವಪ್ಪ, ಬಸಾಪಟ್ಟಣ ಗ್ರಾ.ಪಂ ಸದಸ್ಯೆ ಗೌರಮ್ಮ ಶಂಕರ ನಾಯಕ, ಮಾಜಿ ಗ್ರಾ.ಪಂ ಸದಸ್ಯ ಶಂಕರ ನಾಯಕ, ತಾಂಡಾದ ಹಿರಿಯರಾದ ಕಟ್ಟಿಮನಿ ಹನುಮಂತಪ್ಪ ನಾಯಕ, ಸಕ್ರಪ್ಪ ಕಾರಭಾರಿ, ಶಂಕ್ರಪ್ಪ ಡಾವು, ಹನುಮಂತಪ್ಪ ಪೂಜಾರಿ, ನಿವೃತ್ತ ಕಂದಾಯ ಅಧಿಕಾರಿ ಎಸ್.ವಿ ಗೋಪಾಲಕೃಷ್ಣ ಸೇರಿದಂತೆ ತಾಂಡಾದ ಹಿರಿಯ ಮುಖಂಡರು, ಶಿಕ್ಷಕರು ಮತ್ತು ನಿವೃತ್ತ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

About Mallikarjun

Check Also

ಬಾಗಲಕೋಟೆ ವಿವಿ ಮುಚ್ಚಿದರೆ 45 ಸಾವಿರ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಕೊಡಲಿ ಪೆಟ್ಟು..?

If Bagalkote University is closed, the dream of higher education of 45 thousand students will …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.