Breaking News

ನವದೆಹಲಿಗಣರಾಜ್ಯೋತ್ಸವ ಪೆರೇಡ್ ವೀಕ್ಷಿಸಲು ವಿಶೇಷ ಅತಿಥಿಯಾಗಿ ಪಶು ಸಖಿ : ತಾ.ಪಂ. ಇಓ.

Pashu Sakhi as special guest to watch New Delhi Republic Day Parade : Tel. EO.

ಜಾಹೀರಾತು

ಗಂಗಾವತಿ: ಸಂಜೀವಿನಿ -ಕೆ.ಎಸ್.ಆರ್.ಎಲ್.ಪಿ.ಎಸ್ ನ ಡೇ ಎನ್. ಆರ್. ಎಲ್. ಎಮ್ ಅಭಿಯಾನದಡಿ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಪಶು ಸಖಿ ಶ್ರೀಮತಿ ಸುಶೀಲಾ ಗಂ. ಮಲ್ಲಿಕಾರ್ಜುನ, ನಿಸರ್ಗ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದಡಿಯಲ್ಲಿ ಪಶು ಇಲಾಖೆಯ ಉತ್ತಮ ಪ್ಯಾರಾ ಪಶು ವಿಸ್ತರಣಾ ಕಾರ್ಯಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದು. ಇವರು ಉತ್ತಮ ಸ್ವ ಸಹಾಯ ಸಂಘ, ಸಂಘದ ಸದಸ್ಯರು ಉತ್ತಮ ಮೂರಕ್ಕಿಂತ ಹೆಚ್ಚು ಬ್ಯಾಂಕ್ ಸೌಲಭ್ಯ ಪಡೆದಿದ್ದು, ಪಶು ಸಖಿ ಸದಸ್ಯರು 1 ಲಕ್ಷ ರೂಪಾಯಿ ಸಾಲವನ್ನು ಸ್ವಸಹಾಯ ಸಂಘದಿಂದ ತೆಗೆದುಕೊಂಡಿದ್ದಾರೆ. ಪಶು ಇಲಾಖೆಯ ಕಾಲು ಬಾಯಿ ಬ್ಯಾನಿ ರೋಗ, ಚರ್ಮ ಗಂಟು ರೋಗ, 4 ರಿಂದ 8 ತಿಂಗಳ ಕರುಗಳಿಗೆ ಕಂದು ರೋಗದ ಮುಂಜಾಗ್ರತಾ ಕ್ರಮವಾಗಿ ಲಸಿಕೆ ಹಾಕಿಸುವುದರಲ್ಲಿ ಹಾಗೂ ಜಾನುವಾರು ಗಣತಿ ಅಭಿಯಾನದಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ರೈತರಿಗೆ ಪಶು ಇಲಾಖೆಯ ಯೋಜನೆಗಳ ಮಾಹಿತಿಯನ್ನು ತಲುಪಿಸುವಲ್ಲಿ ಯಶಸ್ವಿಯಾದ ಶ್ರೀ ರಾಮನಗರ ಪಂಚಾಯಿತಿಯ ಪಶು ಸಖಿ ಮತ್ತು ಅವರ ಪತಿಯನ್ನು ದೆಹಲಿಯ ಗಣರಾಜ್ಯೋತ್ಸವ ಪೆರೇಡ್ ವೀಕ್ಷಿಸಲು ವಿಶೇಷ ಅತಿಥಿಯಾಗಿ ಭಾಗವಹಿಸಲು ಕೊಪ್ಪಳ ಜಿಲ್ಲಾ ಪಂಚಾಯತ್, ಸಂಜೀವಿ ಜಿಲ್ಲಾ ಅಭಿಯಾನ ನಿರ್ವಹಣಾ ಘಟಕದಿಂದ ಆಯ್ಕೆಯಾಗಿದ್ದಾರೆ. ಗಣರಾಜ್ಯೋತ್ಸವ ಪೆರೇಡ್ ವೀಕ್ಷಿಸಲು ವಿಶೇಷ ಅತಿಥಿಯಾಗಿ ಆಯ್ಕೆಯಾದ ಇವರಿಗೆ ಶ್ರೀ ಪ್ರಕಾಶ್ ವಿ. ಮಾನ್ಯ ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತ್ ಕೊಪ್ಪಳ ಮತ್ತು ಶ್ರಿಮತಿ ಲಕ್ಷ್ಮಿ ದೇವಿ , ಕಾರ್ಯನಿರ್ವಾಹಕ ಅಧಿಕಾರಿಗಳು, ಗಂಗಾವತಿ ಇವರು ಮಾತನಾಡಿ ದೆಹಲಿ ಗಣರಾಜ್ಯೋತ್ಸವ ಪೆರೇಡ್ ವೀಕ್ಷಿಸಲು ಒಳ್ಳೆಯ ಅವಕಾಶ, ಸುರಕ್ಷಿತ ಪ್ರಯಾಣಕ್ಕೆ ಶುಭ ಹಾರೈಸಿದರು. ಇದೇ ಜನವರಿ 26 ರಂದು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ರಾಜ್ಯೋತ್ಸವ ಪೆರೆಡ್ ವೀಕ್ಷಿಸಲು ಕರ್ನಾಟಕ ರಾಜ್ಯದಿಂದ 08 ಜನ ಕೃಷಿ-ಪಶು ಸಖಿಯರನ್ನು ಹಾಗೂ 4 ಜನ ಸ್ವ-ಸಹಾಯ ಸಂಘದ ಸದಸ್ಯರು ಆಯ್ಕೆಯಾಗಿದ್ದಾರೆ. ಬೆಂಗಳೂರಿನಿಂದ ದೆಹಲಿಗೆ, ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣಿಸುವ ವಿಮಾನದ ವ್ಯವಸ್ಥೆ ಹಾಗೂ ದೆಹಲಿಯಲ್ಲಿ ಊಟ, ವಸತಿ, ಪ್ರಯಾಣದ ವೆಚ್ಚವನ್ನು ಸಂಸ್ಥೆಯಿಂದ ಭರಿಸಲಾಗುತ್ತದೆ.

About Mallikarjun

Check Also

ಕಮಲ್ ಹಾಸನ್ ಕ್ಷಮೆ ಕೇಳುವವರೆಗೂಅವರ ಚಿತ್ರಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು: ಬಳ್ಳಾರಿ ರಾಮಣ್ಣ ನಾಯಕ

Kamal Haasan’s films should be banned in the state until he apologizes: Ballari Ramanna Nayak …

Leave a Reply

Your email address will not be published. Required fields are marked *