Breaking News

ಅಂಬಿಗರ ಚೌಡಯ್ಯ ನಿಷ್ಠೂರವಾದಿ ಶರಣ

Ambigar Choudaiah is a hardline surrenderer

ಜಾಹೀರಾತು
21 Gvt01


ಗಂಗಾವತಿ: ಪ್ರಾಪಂಚಿಕ ಡಂಬಾರಚಾರಗಳನ್ನು ಕಟುವಾಗಿ ಖಂಡಿಸುತ್ತಿದ್ದ ನಿಜ ಶರಣ ಅಂಬಿಗರ ಚೌಡಯ್ಯ ನಿಷ್ಠೂರವಾದಿ ಶರಣ ಎಂದು
ನಗರ ಘಟಕ ಅಧ್ಯಕ್ಷ ಹನುಮೇಶ್ ಕುರುಬರು ಹೇಳಿದರು.
ಅವರು ಶ್ರೀ ದುರ್ಗಾದೇವಿ ದೇವಸ್ಥಾನದ ಬಳಿಯ ಶ್ರೀ ಅಂಬಿಗರ ಚೌಡಯ್ಯ ವೃತ್ತದಲ್ಲಿನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದರು.
ಸಾಮಾನ್ಯ ಜನರಲ್ಲಿದ್ದ ಮೇಲು ಕೀಳು ಮುಂತಾದ ವಿಷಯಗಳನ್ನು ತಮ್ಮದೇ ಆದ ಶೈಲಿಯಲ್ಲಿ ಮುಖಕ್ಕೆ ಹೊಡೆದಂತೆ ಹೇಳುತ್ತಿದ್ದ ಶರಣ, ಜಗತ್ತಿನ ಅಂಕುಡೊAಕು ತಮ್ಮದೇ ಆದ ಕಟು ಶಬ್ದಗಳು, ಟೀಕಾ ವಚನಗಳ ಮೂಲಕ ತಿದ್ದುತ್ತಿದ್ದರು. ಬಸವಣ್ಣ ನ ಕಾಲದ ಶರಣರಲ್ಲೇ ಅತಿ ನಿಷ್ಟೂರ ಮತ್ತು ನೇರ ನೆಡೆನುಡಿಯ ಉಗ್ರ ಶರಣ ಎನ್ನಬಹುದು ಎಂದರು.
೧೨ ನೇ ಶತಮಾನದಲ್ಲಿದ್ದ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯುತ್ತಿಲ್ಲ, ಈಗಿನ ಸಮಾಜಕ್ಕೆ ದಾರಿ ತೋರಿಸಲು ಮತ್ತೆ ನಿಜ ಶರಣರಂಥ ಶರಣರ ಅಗತ್ಯವಿದೆ ಎಂದು ನುಡಿದರು. ಈ ಸಂದರ್ಭದಲ್ಲಿ ಯುವ ಘಟಕ ಅಧ್ಯಕ್ಷ ಸುನಿಲ್ ಕುಲಕರ್ಣಿ, ತಾಲೂಕು ಪ್ರಧಾನ ಕಾರ್ಯದರ್ಶಿ ಪವನ್ ಕುಮಾರ್ ಗಡ್ಡಿ, ಕುಷ್ಟಗಿ ನಗರ ಘಟಕ ಉಪಾಧ್ಯಕ್ಷ ಮುತ್ತುರಾಜ್. ಗೌರವಾಧ್ಯಕ್ಷ ಹುಲಿಯಪ್ಪ ಅರೇಗಾರ್, ಯುವ ಘಟಕ ಉಪಾಧ್ಯಕ್ಷರು ಮಾರುತಿ, ಉಪಾಧ್ಯಕ್ಷರು ಕೊಟ್ರೇಶ್ ಕುಂಬಾರ್, ಆಟೋ ಚಾಲಕರು ಅಧ್ಯಕ್ಷರು ಎಲ್ಲಪ್ಪ. ತಾಲೂಕ ಆಟೋ ಚಾಲಕರ ಉಪಾಧ್ಯಕ್ಷ ಹಾಗು ತಾಲೂಕ ಆಟೋ ಚಾಲಕರ ಕಾರ್ಯದರ್ಶಿ ಗಿಡ್ಡಪ್ಪ ಪರಸುರಾಮ್ ಇತರರಿದ್ದರು.

About Mallikarjun

Check Also

screenshot 2025 10 23 18 09 37 81 6012fa4d4ddec268fc5c7112cbb265e7.jpg

ಹನೂರು ಪಟ್ಟಣದಲ್ಲಿ ಪ್ರಚಾರದ ಪ್ಲೆಕ್ಸ್ ಗಳಿಗಿಲ್ಲ ತಡೆ ಸರ್ಕಾರದ ಅಪಾರ ಪ್ರಮಾಣದ ಹಣ ಬೊಕ್ಕಸಕ್ಕೆ ನಷ್ಟ

The lack of a ban on campaign plexes in Hanur town is a huge loss …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.