Breaking News

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷರಾಗಿ: ಶರಣಬಸಪ್ಪ ದಾನಕೈ ಆಯ್ಕೆ

Karnataka State Farmers Association and Green Sena President: Sharanbasappa Danakai elected

ಜಾಹೀರಾತು

ಯಲಬುರ್ಗಾ : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷರಾಗಿ ಶರಣಬಸಪ್ಪ ಕೆ ದಾನಕೈ ಅವರನ್ನು ,ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಬಣದ , ಜಿಲ್ಲಾ ಅಧ್ಯಕ್ಷರಾದ ಮುದಿಯಪ್ಪ ನಾಯಕ ಅವರು ಕುಕನೂರ ಪ್ರವಾಸಿ ಮಂದಿರದಲ್ಲಿ ಆಯ್ಕೆ ಮಾಡಿ ಜವಾಬ್ದಾರಿಯನ್ನು ವಹಿಸಿ ಹಸಿರು ಶಾಲು ಹಾಕಿ , ಸನ್ಮಾನಿಸಿ ಆದೇಶ ಪ್ರತಿಯನ್ನು ನೀಡಿದರು.ಸಂಘ ಅಭಿವೃದ್ಧಿಗಾಗಿ ಹಾಗು ರೈತರ ಪರವಾಗಿ ಸಂಘಟನೆ ಬಲಿಷ್ಟಗೊಳಿಸುವಲ್ಲಿ ಸದಾ ಶ್ರಮವಹಿಸುವದಾಗಿ ಯಲಬುರ್ಗಾ ತಾಲೂಕು ಅದ್ಯಕ್ಷ ಶರಣಬಸಪ್ಪ ದಾನಕೈ ಅವರು ಹೇಳಿದರು. ಈ ವೇಳೆ ರಾಜ್ಯ ಸಮಿತಿಯ ಸದಸ್ಯ ಶರಣಪ್ಪ ಸೊಮಸಾಗರ, ಜಿಲ್ಲಾ ಮಹಿಳೆ ಅಧ್ಯಕ್ಷೆ ಹುಲಿಗೇಮ್ಮ ನಾಯಕ, ಹಾಗೂ ಸಂಘಟನೆಯ ಮುಖಂಡರಾದ ಸುಭಾಷ್ ನವಲಗುಂದ, ಪರಸುರಾಮ ಪೂಜಾರ, ರೇಣುಕಾ ಮೇಟಿ, ನೀಲಮ್ಮ ನಿಂಗಾಪೂರ, ಶಾರದಾ ಕೊಣ್ಣೂರ್ ಮಲ್ಲಿಕಾರ್ಜುನಯ್ಯ ಕೊಡಗಾನೂರ,ಜುಬೇದಾ ನವಲಗುಂದ ಸೇರಿದಂತೆ ಯಲಬುರ್ಗಾ ಹಾಗು ಕುಕನೂರ ತಾಲೂಕ ಸಮಿತಿಯವರು ಭಾಗವಹಿಸಿದ್ದರು.

About Mallikarjun

Check Also

ಕಮಲ್ ಹಾಸನ್ ಕ್ಷಮೆ ಕೇಳುವವರೆಗೂಅವರ ಚಿತ್ರಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು: ಬಳ್ಳಾರಿ ರಾಮಣ್ಣ ನಾಯಕ

Kamal Haasan’s films should be banned in the state until he apologizes: Ballari Ramanna Nayak …

Leave a Reply

Your email address will not be published. Required fields are marked *