Breaking News

ಬಿಜೆಪಿಯ ಅಧಿಕಾರದ ಲಾಲಸೆಗೆಈದುರ್ವತನೆಗಳೇ ಸಾಕ್ಷಿ : ಜ್ಯೋತಿ

These incidents are proof of BJP’s lust for power: Jyoti

ಜಾಹೀರಾತು
Screenshot 2024 12 20 19 15 11 29 E307a3f9df9f380ebaf106e1dc980bb6

ಕೊಪ್ಪಳ: ಕೇಂದ್ರದ ಗೃಹ ಮಂತ್ರಿಗಳು ತಾವು ಎಂತಹ ಅಪರಾಧದ ಹಿನ್ನೆಲೆಯಿಂದ ಬಂದಿದ್ದಾರೆ ಎಂಬುದು ಜಗತ್ತಿಗೆ ಗೊತ್ತಿದೆ, ಇನ್ನು ರಾಜ್ಯದ ಸಿಟಿ ರವಿಯ ವರ್ತನೆಯೂ ಜಗತ್ತಿಗೆ ಗೊತ್ತಿರುವ ವಿಷಯ ಇವರ ಅಧಿಕಾರದ ಲಾಲಸೆಗೆ ಈ ರೀತಿಯ ಮಾತುಗಳು ಬರುತ್ತಿವೆ ಎಂದು ಕಾಂಗ್ರೆಸ್ ಮುಖಂಡರು, ಗ್ಯಾರಂಟಿ ಸಮಿತಿ ಸದಸ್ಯರಾದ ಜ್ಯೋತಿ ಎಂ. ಗೊಂಡಬಾಳ ಹೇಳಿಕೆ ನೀಡಿದ್ದಾರೆ.
ದೇಶದ ಸಂವಿಧಾನವನ್ನು ರಚಿಸಿ ಸರ್ವರಿಗೂ ಬದುಕುವ ಹಕ್ಕು ಕೊಟ್ಟ ಧೀಮಂತ ನಾಯಕ ಬಾಬಾಸಾಹೇಬರ ಹೆಸರನ್ನು ಹೇಳಿದರೆ ಗೃಹ ಮಂತ್ರಿ ಎನಿಸಿಕೊಂಡ ಪುಣ್ಯಾತ್ಮನಿಗೆ ಶೋಕಿ ಅನಿಸುತ್ತಿದೆ, ತಾವು ಶೋಕಿಗಾಗಿ ಶ್ರೀರಾಮನ ಹೆಸರನ್ನು, ಪರಮ ಭಕ್ತ ಹನುಮನ ಹೆಸರನ್ನು ಹೇಳಿಕೊಂಡು ತಿರುಗಿದಂತೆ ಭಾವಿಸಿರುವ ಅಮಿತ್ ಶಾ ಅವರನ್ನು ಕೂಡಲೇ ಸರಕಾರ ವಜಾಗೊಳಿಸಬೇಕು ಇಲ್ಲವಾದರೆ ಅವರ ಹೇಳಿಕೆಯನ್ನು ಕೇಂದ್ರ ಸರಕಾರದ ಬಿಜೆಪಿಯ ಹೇಳಿಕೆ ಎಂದೇ ಪರಿಭಾವಿಸಬೇಕಾಗುತ್ತದೆ ಎಂದು ಕಿಡಿಕಾರಿದ್ದಾರೆ.
ಇನ್ನು ರಾಜ್ಯದ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಎಂಬಾತ ಹಗಲಲ್ಲೂ ನಶೆಯಲ್ಲಿ ಇದ್ದ ರೀತಿಯಾಗಿ ಮಾತನಾಡಿ, ಹೆಣ್ಣುಮಗಳ ಬಗ್ಗೆ ಅತ್ಯಂತ ವಿಷಾಧಕರ ಮಾತನ್ನು ಆಡಿದ್ದು ಅಲ್ಲದೇ ಬಿಜೆಪಿ ಮುಖಂಡರು ಸಿಟಿ ರವಿ ಪರವಾಗಿ ಬೀದಿಗಳಿದು ಪ್ರತಿಭಟನೆ ಮಾಡುತ್ತಾರೆ ಅಂದರೆ ಅವರಿಗೆ ಸಂವಿಧಾನದ ಬಗ್ಗೆ, ಹೆಣ್ಣುಮಕ್ಕಳ ಬಗ್ಗೆ ಮತ್ತು ಶೋಷಿತರ ಪರವಾಗಿ ಇರುವ ಸರಕಾರಗಳ ಬಗ್ಗೆ ಇರುವ ಅಸಹನೀಯದ ಭಾಗವಾಗಿ ಈ ರೀತಿಯ ಹೇಳಿಕೆಗಳು ಮತ್ತು ಮಾತುಗಳು ಬರುತ್ತವೆ ಎಂದು ಜ್ಯೋತಿ ಎಂ. ಗೊಂಡಬಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.