ರಸ್ತೆ ಅಪಘಾತ ಗಂಭೀರ ಗಾಯ,,,

Mallikarjun
1 Min Read
ಜಾಹೀರಾತು

Road accident serious injury

ಜಾಹೀರಾತು

ಕೊಪ್ಪಳ : ಯಲಬುರ್ಗಾ ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಮಾಲಕರಾದ ಭೀಮಣ್ಣ ಕುರಿ ಶಿಕ್ಷಕರಿಗೆ ಕುಷ್ಟಗಿಯ ಸಾರ್ವಜನಿಕ ಆಸ್ಪತ್ರೆಯ ಅಂಬುಲೆನ್ಸ್, ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿದೆ.

ಘಟನೆಯು ಬೇವೂರ ಗ್ರಾಮದ ಕೊಪ್ಪಳ ರಸ್ತೆಯಲ್ಲಿರುವ ಸ್ವಾಮಿ ವಿವೇಕಾನಂದ ಶಾಲೆಯ ಮುಂದೆ ನಡೆದಿದ್ದು, ಅಂಬುಲೆನ್ಸ್ ವಾಹನವು ಕುಷ್ಟಗಿಯಿಂದ ಕೊಪ್ಪಳಕ್ಕೆ ಹೋಗುವಾಗ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಬೈಕಿನಲ್ಲಿ ಶಿಕ್ಷಕ ಭೀಮಣ್ಣ ಅವರು ಸೇರಿದಂತೆ ಅವರ ಪುತ್ರಿಯು ಸಹ ಇದ್ದು, ಮಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಡಿಕ್ಕಿಯ ರಭಸಕ್ಕೆ ಶಿಕ್ಷಕ ಭೀಮ್ಮಣ್ಣ ಇವರು
ಗಂಭೀರವಾಗಿ ಗಾಯಗೊಂಡಿದ್ದು. ಕೂಡಲೇ ಇವರನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

ಈ ಪ್ರಕರಣ ಕುರಿತು ಸ್ಥಳಕ್ಕೆ ಬೇವೂರ ಠಾಣೆ ಪಿಎಸ್ ಐ ಭೇಟಿ ನೀಡಿದ್ದು, ತನಿಖೆ ಕೈಕೊಂಡಿದ್ದು ಪ್ರಕರಣ ದಾಖಲಾಗಿಲ್ಲಾ ಎಂದು ತಿಳಿದು ಬಂದಿದೆ.

Total Views: 0
Share This Article