Breaking News

ಗ್ರಾಮೀಣ ಜನರಿಗೆ ಉಚಿತ ಅರೋಗ್ಯ ಶಿಬಿರ,,,

Free health camp for rural people

ಜಾಹೀರಾತು

ಕೊಪ್ಪಳ ( ಕುಕನೂರು) : ಗ್ರಾಮೀಣ ಪ್ರದೇಶದ ಜನರಿಗೆ ಅರೋಗ್ಯ ಶಿಬಿರ ಉಪಯುಕ್ತವಾಗಿದ್ದು ಇದರ ಸದುಪಯೋಗ ಪಡಿಸಿ ಕೊಳ್ಳಿ ಎಂದು ಸೌಭಾಗ್ಯ ಲಕ್ಸ್ಮಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಕೇಂದ್ರ ಸಮಿತಿ ಅಧ್ಯಕ್ಷ ಬೊಮ್ಮಣ್ಣ ಅಕ್ಕಸಾಲಿ ಅವರು ಹೇಳಿದರು.

ಕುಕನೂರು ವಿದ್ಯಾನಂದ ಗುರುಕುಲು ಕಾಲೇಜು ಆವರಣದಲ್ಲಿ ಸಪ್ತಗಿರಿ ಆಸ್ಪತ್ರೆ ಬೆಂಗಳುರು, ರೋಟರಿ ಕ್ಲಬ್ ಕೊಪ್ಪಳ, ಸೌಭಾಗ್ಯ ಲಕ್ಷ್ಮೀ ಸಹಕಾರಿ ಸಂಘದ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಅರೋಗ್ಯ ಶಿಬಿರ ವನ್ನು ಉದ್ಘಾಟನೆ ಮಾಡಿ ಮಾತನಾಡಿದರು.

ಅರೋಗ್ಯ ತಪಾಷಣೆ, ಚಿಕಿತ್ಸಾ ಶಿಬಿರಗಳು ಬಡವರು, ಗ್ರಾಮೀಣ ಜನರಿಗೆ ಉಪಯುಕ್ತ, ಅನುಕೂಲ ಆಗಿವೆ, ರೈತರು, ಕಾರ್ಮಿಕರು, ಮಧ್ಯಮ ವರ್ಗದ ಜನಸಾಮನ್ಯರಿಗೆ ಅರೋಗ್ಯ ಶಿಬಿರಗಳನ್ನು ನಡೆಸಿ ಸೇವೆಯ ನೀಡುವ ಮೂಲಕ ಬೆಂಗಳೂರನ ಸಪ್ತಗಿರಿ ಆಸ್ಪತ್ರೆ ಮಾದರಿಯ ಮತ್ತು ಮೆಚ್ಚುವಂತಹದ್ದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಗುರುಕುಲ ಸಂಸ್ಥೆಯ ಕಾರ್ಯದರ್ಶಿ ಜಿ ವಿ ಜಾಗೀರ್ ದಾರ್, ಬ್ಯಾಂಕಿನ ಕಾರ್ಯದರ್ಶಿ ಚಂದ್ರಶೇಖರ ಸೊಪ್ಪಿಮಠ, ಸಪ್ತಗಿರಿ ಆಸ್ಪತ್ರೆಯ ಡಾ ಧನಂಜಯ, ಡಾ ಪರಮೇಶ್, ವೈ ಕೆ ಮೇಟಿ, ರಮೇಶ್ ಕೋಳೂರ್, ಈಶ್ವರ್, ಆನ್ ಆರ್ ಕುಕನೂರು ಮೊದಲಾದವರು ಉಪಸ್ಥಿತರಿದ್ದರು.

About Mallikarjun

Check Also

ಕಮಲ್ ಹಾಸನ್ ಕ್ಷಮೆ ಕೇಳುವವರೆಗೂಅವರ ಚಿತ್ರಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು: ಬಳ್ಳಾರಿ ರಾಮಣ್ಣ ನಾಯಕ

Kamal Haasan’s films should be banned in the state until he apologizes: Ballari Ramanna Nayak …

Leave a Reply

Your email address will not be published. Required fields are marked *