![](https://kalyanasiri.in/wp-content/uploads/2024/05/IMG-20240530-WA0291-300x225.jpg)
ಬೆಂಗಳೂರು: ಮೇ,30: ಇಂದಿನ ದಿನಮಾನದಲ್ಲಿ ಸರ್ಕಾರಿ, ಅರೇ ಸರ್ಕಾರಿ, ಖಾಸಗಿ ನೌಕರರು ಹಾಗೂ ಸಿಬ್ಬಂದಿಗಳು ತಮ್ಮ ಮಗ ಅಥವಾ ಮಗಳ ಮದುವೆಗೆ ಹದಿನೈದು ದಿನಗಳಿಂದ ಒಂದು ತಿಂಗಳಿನವರೆಗೆ ಕಛೇರಿಗಳಲ್ಲಿ ರಜೆಯನ್ನು ತೆಗೆದುಕೊಳ್ಳುತ್ತಾರೆ. ಇಷ್ಟೊಂದು ದಿನ ರಜೆ ತೆಗೆದುಕೊಳ್ಳುವುದು ಮಾಮೂಲಾಗಿಬಿಟ್ಟಿದೆ.
ಆದರೆ ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯ ಕರ್ನಾಟಕ ರಾಜ್ಯ ಕಾರ್ಮಿಕ ಅಧ್ಯಯನ ಸಂಸ್ಥೆಯ ಭದ್ರತಾ ಸಿಬ್ಬಂದಿ ಗೋವಿಂದರಾಜು ತಮ್ಮ ಮಗಳ ಮದುವೆಯು ದಿನಾಂಕ: 29.05.2024 ಮತ್ತು 30.05.2024 ರ ಬುಧವಾರ ಹಾಗೂ ಗುರುವಾರ ನೆರವೇರಿತು. ಆದರೆ ಗೋವಿಂದರಾಜು ಮಾತ್ರ ಸಂಸ್ಥೆಯ ಭದ್ರತಾ ಸೇವೆಗೆ ರಜೆಯನ್ನು ಪಡೆಯದೇ ಸೇವೆ ಸಲ್ಲಿಸಿರುತ್ತಾರೆ. ಕರ್ತವ್ಯವನ್ನು ಮುಗಿಸಿಕೊಂಡು ಅದರ ಜೊತೆಗೆ ಮಗಳ ಮದುವೆಯನ್ನು ಕೂಡ ಯಶಸ್ವಿಯಾಗಿ ನೆರವೇರಿಸಿರುತ್ತಾರೆ. ಇದು ಗೋವಿಂದರಾಜು ಅವರ ಕರ್ತವ್ಯ ನಿಷ್ಠೆಯನ್ನು ತೋರಿಸುತ್ತದೆ.
![](https://kalyanasiri.in/wp-content/uploads/2024/05/IMG-20240530-WA0292-768x1024.jpg)
ಕರ್ತವ್ಯ ಮಾಡಿ, ಮಗಳ ಮದುವೆ ಮಾಡಿರುವ ಗೋವಿಂದರಾಜು ಅವರಿಗೆ ಸಂಸ್ಥೆಯ ನಿರ್ದೇಶಕರು, ರಿಜಿಸ್ಟ್ರಾರ್, ಮತ್ತು ಸಿಬ್ಬಂದಿ ವರ್ಗದವರು ಶುಭ ಹಾರೈಸಿರುತ್ತಾರೆ. ಹಾಗೂ ಇಂದಿನ ನೌಕರರಿಗೆ ಗೋವಿಂದರಾಜು ಮಾದರಿಯಾಗಿರುತ್ತಾರೆ.