Breaking News

ತಾವರಗೇರಾ ದರ್ಗಾ ದರ್ಶನ ಪಡೆದ ತಹಶೀಲ್ದಾರ್

ತಹಶೀಲ್ದಾರ್ ದರ್ಗಾ ದರ್ಶನ ತಾವರಗೇರಾ:ಪಟ್ಟಣದ ಸೈಯದ್ ಹಾಜರತ್ ದರ್ಗಾ ಉರುಸ್ ನಡೆಯುತ್ತಿರುವ ಪ್ರಯುಕ್ತ ತಹಶೀಲ್ದಾರ್ ರವಿ ಅಂಗಡಿಯವರು ದರ್ಗಾಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ಅವರು ಶನಿವಾರ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಸೈಯದ್ ಹಜರತ್ ದರ್ಗಾ ಉರುಸ್ ಗೆ ಸಿಬ್ಬಂದಿ ಜೊತೆ ಆಗಮಿಸಿ ಭೇಟಿ ನೀಡಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು ಕುಷ್ಟಗಿ ತಾಲೂಕಿನ ವ್ಯಾಪ್ತಿಗೆ ಒಳಪಡುವ ತಾವರಗೇರಾ ಪಟ್ಟಣದಲ್ಲಿ ಸಾವಿರಾರು ಭಕ್ತ ಸಮೂಹ ಹೊಂದಿರುವ ಐತಿಹಾಸಿಕ ಹಿನ್ನೆಲೆ ಹೊಂದಿರುವ ದರ್ಗಾ ಪ್ರತಿ ವರ್ಷ ಉರುಸ್ ನಡೆಯುತ್ತಿರುವ ಮಾಹಿತಿ ಇತ್ತು. ನಾನು ತಾಲೂಕ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ದರ್ಗಾಕ್ಕೆ ಭೇಟಿ ನೀಡಿ ದರ್ಶನ ಪಡೆಯಲಾಯಿತು ಎಂದರು.
ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್,ಸಿರಸ್ತೆದಾರ, ತಾವರಗೇರಾ ಕಂದಾಯ ನಿರೀಕ್ಷಕ ರು ಹಾಗೂ ಸಿಬ್ಬಂದಿ ವರ್ಗ ಇದ್ದರು.

About Mallikarjun

Check Also

ಗೊರ್ಲೆಕೊಪ್ಪಗ್ರಾಮದಲ್ಲಿ ಮದ್ಯದಂಗಡಿ ತೆರೆಯದಂತೆ:ಮಹಿಳೆಯರ ಆಗ್ರಹ

ಕೊಪ್ಪಳ : ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಗೊರ್ಲೆ ಕೊಪ್ಪ ಗ್ರಾಮದಲ್ಲಿ ಮದ್ಯದ ಅಂಗಡಿ ಪ್ರಾರಂಭಿಸಲು ಹೊರಟಿರುವ ಮದ್ಯದ ಲೈಸೆನ್ಸ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.