Breaking News

ಚಾಲಕರಿಗೆಸರಕಾರದಿಂದ ಸೌಲಭ್ಯ ಒದಗಿಸಲು ಶ್ರಮಿಸುವೆ:ಜಿ.ನಾರಾಯಣಸ್ವಾಮಿ

Government will work hard to provide facilities to drivers: G Narayanaswamy

ಜಾಹೀರಾತು
Screenshot 2024 03 15 19 51 57 98 E307a3f9df9f380ebaf106e1dc980bb6 285x300

ಗಂಗಾವತಿ: ಪ್ರತಿಯೊಬ್ಬ ಚಾಲಕರು ವಾಹನ ಚಲಾಯಿಸುವಾಗ ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು ಹಾಗೂ ಕಡ್ಡಾಯವಾಗಿ ಇನ್ಸೂರೆನ್ಸ್, ದಾಖಲಾತಿ ಹೊಂದಿರಬೇಕು ಎಂದು ಕರ್ನಾಟಕ ಚಾಲಕರ ಒಕ್ಕೂಟದ ರಾಜ್ಯಾಧ್ಯಕ್ಷ ಜಿ.ನಾರಾಯಣಸ್ವಾಮಿ ಹೇಳಿದರು.

ತಾಲೂಕಿನ ಬಸಾಪಟ್ಟಣ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಚಾಲಕರ ಒಕ್ಕೂಟದ ತಾಲೂಕಾ ಘಟಕ ಉದ್ಘಾಟನೆ ಹಾಗೂ ಚಾಲಕರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಚಾಲಕರಿಗೆ ಅವರದ್ದೇ ಆದ ಜವಾಬ್ದಾರಿ ಇರುತ್ತೆ. ಅದನ್ನು ಅರಿತು ಮುಂಜಾಗೃತ ಕ್ರಮಗಳನ್ನು ಅನುಸರಿಸಿ ವಾಹನ ಚಲಾಯಿಸಬೇಕು. ಚಾಲಕರು ಜೀವನ ಬಹಳ ಶೋಚನಿಯ ಸ್ಥೀತಿಯಲ್ಲಿದೆ. ಮುಂದಿನ ದಿನಗಳಲ್ಲಿ ಸರಕಾರದಿಂದ ಚಾಲಕರ ಕುಟುಂಬಕ್ಕೆ ನಿವೇಶನ ನೀಡಲು ಒತ್ತಾಯಿಸಲಾಗುವುದು. ಚಾಲಕರ ಭದ್ರತೆಗೆ ಒತ್ತು ನೀಡಲಾಗುವುದು. ಚಾಲಕರ ಕುಂದು ಕೊರತೆಗಳ ಬಗ್ಗೆ ಸಮಲೋಚನೆ ಮಾಡಿ ಪರಿಹರಿಸಲಾಗುವುದು. ಪ್ರತಿಯೊಬ್ಬರು ವಾಹನದಲ್ಲಿ ಇನ್ಸೂರೆನ್ಸ್, ಲೈಸೆನ್ಸ್, ವಾಹನದ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದರು.

ಈ ವೇಳೆ ಸಿದ್ದರಾಮಯ್ಯ ತಾತ ಗುರುವಿನ, ಗ್ರಾಮಪಂಚಾಯತಿ ಅಧ್ಯಕ್ಷ ಆಂಜನೇಯ ನಾಯಕ, ಉಪಾಧ್ಯಕ್ಷೆ ರತ್ನಮ್ಮ ಹುಲ್ಲಪ್ಪ, ಮಾಜಿ ತಾ.ಪಂ ಅಧ್ಯಕ್ಷ ಶರಣೇಗೌಡ ಮಾಲೀಪಾಟೀಲ್, ಕೆ.ಆರ್.ಪಿ.ಪಿ ಮುಖಂಡರಾದ ಡಿ.ಕೆ ಆಗೋಲಿ, ಚಿಲಕುರಿ ಪ್ರಸಾದ, ವಿರುಪಣ್ಣ ಡಂಬರ, ರಾಘವೇಂದ್ರ ಕಂಬಳಿ, ಚಾಲಕರ ಒಕ್ಕೂಟದ ಜಿಲ್ಲಾಧ್ಯಕ್ಷ ಈರಣ್ಣ ಕೊಮಲಪುರ, ತಾಲೂಕಾಧ್ಯಕ್ಷ ಮಂಜುನಾಥ ಕಂಬಳಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಉಮಾದೇವಿ, ಬಸಾಪಟ್ಟಣ ಗ್ರಾಮ ಘಟಕ ಅಧ್ಯಕ್ಷ ತಿರುಪತಿ ಕಂಬಳಿ, ಘಟಕ ಉಪಾಧ್ಯಕ್ಷ ಕುಮಾರ ಕುರಿ, ತಾ.ಉಪಾಧ್ಯಕ್ಷ ಕನಕಪ್ಪ ಕೆಂಗಾರಿ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು, ಚಾಲಕರು ಪಾಲ್ಗೊಂಡಿದ್ದರು.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.