Breaking News

ಅಲೆಮಾರಿ ಬುಡಕಟ್ಟು ಮಹಾಸಭಾ ಸಂಘದ ವತಿಯಿಂದಅಕ್ಷರದವ್ವ ಸಾವಿತ್ರಿಬಾಯಿ ಪುಲೆ ರವರ ೧೯೩ನೇ ಜನ್ಮದಿನ ಆಚರಣೆ.

193rd Birthday Celebration of Aksharadava Savitribai Pule on behalf of Nomadic Tribes Mahasabha Sangh.

ಜಾಹೀರಾತು
Screenshot 2024 01 04 18 16 34 22 E307a3f9df9f380ebaf106e1dc980bb6 300x218

ಗಂಗಾವತಿ: ನಗರದ ೩೧ನೇ ವಾರ್ಡ್ನಲ್ಲಿ ಬುಧವಾರ ಅಲೆಮಾರಿ ಸಮುದಾಯಗಳಿಂದ ನಮ್ಮ ಭಾರತ ದೇಶದ ಮೊದಲ ಶಿಕ್ಷಕಿ ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ರವರ ೧೯೩ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಗಂಗಾವತಿ ತಾಲೂಕು ಅಲೆಮಾರಿ ಸಮುದಾಯದ ಅಧ್ಯಕ್ಷರಾದ ಆರ್. ಕೃಷ್ಣ ರವರು ಈ ಕಾರ್ಯಕ್ರಮವನ್ನು ನೆರವೇರಿಸಿದ್ದರು.
ಮುಖ್ಯ ಅತಿಥಿಯಾಗಿ ಉಪನ್ಯಾಸಕರು ಹಾಗೂ ಚಿಂತಕರಾದ ಡಾ. ಸೋಮಕ್ಕ ಎಂ. ಮಾತನಾಡಿ ಅಲೆಮಾರಿ ಮಕ್ಕಳಿಗೆ ಸಾವಿತ್ರಿ ಬಾಪುಲೆಯವರ ಜೀವನದ ಕುರಿತು ವಿವರಿಸಿ, ಸಾವಿತ್ರಿಬಾಯಿ ಫುಲೆ ಭಾರತದಲ್ಲಿ ಮಹಿಳಾ ಶಿಕ್ಷಣದ ಜ್ಯೋತಿಯನ್ನು ಹೊತ್ತ ದಾರ್ಶನಿಕರಾಗಿದ್ದರು ಮತ್ತು ಅಂದಿನ ಕಾಲಘಟ್ಟದಲ್ಲಿ ಮಹಿಳೆಯರು ತಮ್ಮ ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿದ್ದ ಕಾಲದಲ್ಲಿ ಸಾವಿತ್ರಿಬಾಯಿ ಫುಲೆ ಅವರು ಕನಸು ಕಾಣುವ ಧೈರ್ಯ ಮತ್ತು ಬದಲಾವಣೆಗೆ ಶ್ರಮಿಸಿದರು. ೧೮೪೮ ರಲ್ಲಿ ಸಾವಿತ್ರಿಬಾಯಿ ಮತ್ತು ಜ್ಯೋತಿರಾವ್ ಅವರು ಪುಣೆಯಲ್ಲಿ ಮೊದಲ ಬಾಲಕಿಯರ ಶಾಲೆಯನ್ನು ಸ್ಥಾಪಿಸಿದರು ಮತ್ತು ಸಾವಿತ್ರಿಬಾಯಿ ಭಾರತದ ಮೊದಲ ಮಹಿಳಾ ಶಿಕ್ಷಕರಾದರು. ಅದು ಅವರ ದಿಟ್ಟ ಹೆಜ್ಜೆಯಾಗಿತ್ತು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕ್ರಾಂತಿಕಾರಿ ಗಾಯಕಿಯಾದ ಕುಮಾರಿ ಚೈತ್ರಾ ಗಬ್ಬೂರು ಸಾವಿತ್ರಿ ಬಾಫುಲೆಯ ಬಗ್ಗೆ ಹಾಡನ್ನು ಹಾಡಿದರು.
ಈ ಸಂದರ್ಭದಲ್ಲಿ ಬಿ.ಎಸ್.ಪಿ ಮುಖಂಡ ಹುಲಿಗೇಶ್ ದೇವರಮನಿ, ಆರ್. ಚೆನ್ನಬಸವ, ಸಣ್ಣ ಹುಸೇನಪ್ಪ ಹಂಚಿನಾಳ, ಅಲೆಮಾರಿ ಸಮುದಾಯದ ಕುಲ ಪಂಚಾಯತಿ ನ್ಯಾಯಾಧೀಶರು ಅಶ್ವ ರಾಮಣ್ಣ, ಅಲೆಮಾರಿ ಸಮುದಾಯದ ಮುಖಂಡರು ನಾಗಪ್ಪ, ಕೋಟ ಯಲ್ಲಪ್ಪ, ಮಂಜುನಾಥ ಚನ್ನದಾಸರ್ ಇನ್ನು ಮುಂತಾದವರು ಹಾಜರಿದ್ದರು.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.