ಗಂಗಾವತಿ:ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಶೌಚಾಲಯಗಳದುರಸ್ತಿಗೆಕ್ರಮಕೈಗೊಳ್ಳಲಾಗುವುದೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳುತಿಳಿಸಿದ್ದಾರೆ

Gangavati: Officials of the National Highway Authority have said that action will be taken to repair the toilets on the National Highway

ಗಂಗಾವತಿ:ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಶೌಚಾಲಯಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಗಂಗಾವತಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬೂದಗುಂಪಾ ಕ್ರಾಸ್ ನಿಂದ ಕೊಪ್ಪಳ ಮತ್ತು ಹೊಸಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಟೋಲ್ ಪ್ಲಾಜಾಗಳ ಹತ್ತಿರ ಇರುವ ಶೌಚಾಲಯಗಳ ದುರಸ್ತಿಗೆ ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಮತ್ತು ರಾಜ್ಯ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಒಕ್ಕೂಟದ ನಿರ್ದೇಶಕ ಅಶೋಕಸ್ವಾಮಿ ಹೇರೂರ,ರಾಷ್ಟ್ರೀಯ ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಮತ್ತು ಪ್ರಾಧಿಕಾರದ ಹೊಸಪೇಟೆ ಕಚೇರಿಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಅಶೋಕಸ್ವಾಮಿ ಹೇರೂರ ಅವರಿಗೆ ಪತ್ರ ಬರೆದಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರೊಜೆಕ್ಟ್ ಡೈರೆಕ್ಟರ್ ಕಚೇರಿಯ ಅಧಿಕಾರಿಗಳು ಕೂಡಲೇ ದುರಸ್ತಿಗೆ ಕ್ರಮ ಕೈಗೊಳ್ಳುವುದಾಗಿ ಉತ್ತರಿಸಿದ್ದಾರೆ.

ವಣಗೇರಿ,ಶಹಪೂರ ಮತ್ತು ಹಿಟ್ನಾಳ ಟೋಲ್ ಪ್ಲಾಜಾಗಳ ಹತ್ತಿರ ಇರುವ ಶೌಚಾಲಯಗಳ ದುರಸ್ತಿಯ ಕೆಲಸ ಆರಂಭಿಸಲು ಸೂಚಿಸಲಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ನೇಮ್ ಬೋರ್ಡ್ ಮತ್ತು ಮಾಹಿತಿ ಫ಼ಲಕಗಳು ಮುರಿದು ಹೋದ ಬಗ್ಗೆಯೂ ಹೇರೂರ ಅವರು ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದರು.ಈ ಹಿನ್ನೆಲೆಯಲ್ಲಿ ನೇಮ್ ಬೋರ್ಡ್ ದುರಸ್ತಿಗೊಳಿಸಲಾಗಿದ್ದು, ಮಾಹಿತಿ ಫ಼ಲಕಗಳನ್ನು ಸರಿಪಡಿಸಿರುವುದಿಲ್ಲ.ಈ ಬಗ್ಗೆ ಸಂಭಂದಿಸಿದವರಿಗೆ ಪುನಃ ದೂರು ಸಲ್ಲಿಸಿರುವುದಾಗಿ ಹೇರೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕೃಷ್ಣ ಲಮಾಣಿ ನಿಧನ

Krishna Lamani passed away



ಗಂಗಾವತಿ:ನಗರದ ಅಂಜನಾದ್ರಿ ರಕ್ಬ್ಲತ ಭಂಡಾರದ ಮಾಲೀಕರಾದ ಕೃಷ್ಣ ಲಮಾಣಿ(೫೧)ಇವರು ಅನಾರೋಗ್ಯದಿಂದ ಗಂಗಾವತಿ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿ ಒರ್ವ ಪುತ್ರ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಸ್ವಗ್ರಾಮ ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕು ದೇವರಹಳ್ಳಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಸಂತಾಪ;ಕೃಷ್ಣ ಲಮಾಣಿ ನಿಧನಕ್ಕೆ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಗಂಗಾವತಿ ಗೆಳೆಯರ ಬಳಗ ಹಾಗೂ ಟೀಚರ್ಸ್ ಕಾಲೋನಿ ಬಂಧುಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಎಂಹೆಚ್.ಪಿ.ಎಸ್. ಶಾಲೆಯ ಗುರುವಂದನಾ ಕಾರ್ಯಕ್ರಮ

M.H.P.S. Guru Vandan program of the school


ವಿದ್ಯಾರ್ಥಿಗಳ ಹಳೆಯ ದಿನಗಳನ್ನು ನೆನೆದು ಭಾವುಕ : ಶಾಲೆ ಕಟ್ಟಡ ಉಳಿಸಲು ಪಣ

ಕೊಪ್ಪಳ: ನಗರದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ (ಎಂ.ಹೆಚ್.ಪಿ.ಎಸ್.) ಶಾಲೆಯ ೧೯೯೨-೯೩ನೇ ಸಾಲಿನ ಹಳೆಯ ವಿದ್ಯಾರ್ಥಿ ಬಳಗದಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಈಚೆಗೆ ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು.
೧೯೯೨-೯೩ನೇ ಸಾಲಿನಲ್ಲಿ ೭ನೇ ತರಗತಿ ತೇರ್ಗಡೆ ಹೊಂದಿದ ಸುಮಾರು ೮೦ ವಿದ್ಯಾರ್ಥಿಗಳು ೩೦ ವರ್ಷಗಳ ನಂತರ ಪರಸ್ಪರ ಭೇಟಿಯಾಗಿ ಭಾವುಕರಾದ ಕ್ಷಣಗಳು ಅಲ್ಲಿದ್ದವರ ಕಣ್ಣು ತೇವಗೊಳಿಸಿದವು. ಎಂ.ಹೆಚ್.ಪಿ.ಎಸ್. ಶಾಲೆ ಕ್ರೀಡೆ ವಿಶೇಷವಾಗಿ ಲೇಜಿಮ್ ಕಲಿಕೆಯಲ್ಲಿ ಹೆಸರಾಗಿತ್ತು, ಆ ನೆನಪನ್ನು ಮತ್ತೆ ಹಸಿರಾಗಿಸಲು ಎಲ್ಲಾ ಹಳೆಯ ವಿದ್ಯಾರ್ಥಿನಿಯರು ಲೇಜಿಮ್ ಮಾಡಿ ಪುಷ್ಪವೃಷ್ಟಿ ಮಾಡುವ ಮೂಲಕ ಶಿಕ್ಷಕರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಆಗಮಿಸಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಶುಭಕೋರಿದರು, ಇಂತಹ ಕಾರ್ಯಗಳು ನಮ್ಮ ಮನಸ್ಸುಗಳನ್ನು ಬೆಸೆಯುತ್ತವೆ ಹಾಗೂ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸುತ್ತವೆ, ನಮ್ಮ ಬೆಳವಣಿಗೆಗೆ ಕಾರಣರಾದವರ ನೆನೆಯುವುದು ಶ್ರೇಷ್ಟವಾದ ಕಾರ್ಯ ಎಂದರು.
ಶಿಕ್ಷಕ ಪ್ರಾಣೇಶ ಅವರು ಮಾತನಾಡಿ, ತಮ್ಮ ನಿವೃತ್ತಿ ಜೀವನ ಸುಖಮಯವಾಗಿರಲು ಕಾರಣವೇ ತಮ್ಮ ವೃತ್ತಿ ಜೀವನದಲ್ಲಿ ಮಾಡಿದ ಉತ್ತಮ ಕೆಲಸ, ಮಕ್ಕಳಿಗೆ ಪರಿಪೂರ್ಣವಾಗಿ ಸೇವೆ ಮಾಡಿದ ತೃಪ್ತಿ ಇದೆ ಎಂದರು. ಎಲ್ಲರೂ ತಮ್ಮ ಪಾಲಿಗೆ ಬಂದ ಸೇವೆಯನ್ನು ಚನ್ನಾಗಿ ಮಾಡಬೇಕು ತಮ್ಮ ಶಿಷ್ಯರು ದೊಡ್ಡ ದೊಡ್ಡ ಸ್ಥಾನದಲ್ಲಿ ಇದ್ದರೂ ಂದು ತೋರಿಸಿದ ಪ್ರೀತಿ ಅವಿಸ್ಮರಣೀಯ ಎಂದರು.
ಶಾಲೆಯ ಶಿಕ್ಷಕರಾದ ಪ್ರಾಣೇಶ್ ಹೆಚ್. ಅಜ್ಜಪ್ಪ ಏಳುಬಾವಿ, ವಿರುಪಾಕ್ಷಪ್ಪ ಮೇಟಿ. ಲಕ್ಷಿö್ಮÃಬಾಯಿ ಯಾಳಗಿ, ಅಕ್ಕಮಹಾದೇವಿ ಕಲಹಾಳ, ಉಷಾ ಯಾದಗೀರಕರ್, ನಾಗಮ್ಮ ಯಲಬುರ್ಗಾ, ಗುಂಡಮ್ಮ ಪಾಟೀಲ್, ಪರಿಮಳ ಕುಲಕರ್ಣಿ, ಅಸ್ಮತ್‌ಬೇಗಂ ಹಾಗೂ ಮರಣ ಹೊಂದಿದ ಕೆಲವು ಶಿಕ್ಷಕರ ಪರವಾಗಿ ಅವರ ಕುಟುಂಬದವರನ್ನು ಕರೆಸಿ ಸನ್ಮಾನಿಸಿ ಅವರ ಗುಣಗಾನ ಮಾಡಿದರು. ವಿದ್ಯಾರ್ಥಿಗಳು ತಮ್ಮ ಪರಿಚಯ ಅನುಭವ ನೆನಪುಗಳನ್ನು ಹಂಚಿಕೊAಡರು.
ಮAಜುಳಾ ಡಿ. ಪ್ರರ್ಥಿಸಿದರು, ಸಜ್ಜಾದ ಹುಸೇನ್ ಸ್ವಾಗತಿಸಿದರು, ಜಗದೀಶ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು, ಮಂಜುಳಾ ಪಾಟೀಲ್ ನಿರೂಪಿಸಿದರು, ಸಿದ್ದು ಬುಳ್ಳಾ ವಂದಿಸಿದರು. ರೋಹಿಣಿ, ಗಿರೀಶ್ ಬಡಿಗೇರ್, ಮಂಜುನಾಥ ಕೆ., ವಂದನಾ ಪದಕಿ, ರೇಣುಕರಾಜ್ ತಮ್ಮ ನೆನಪುಗಳನ್ನು ಹಂಚಿಕೊAಡರು. ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ (ಎಂ.ಹೆಚ್.ಪಿ.ಎಸ್.) ಶಾಲೆಯ ಹಳೆಯ ಕಟ್ಟಡವನ್ನು ಕೆಡವಿ ಗುರುಭವನ ಕಟ್ಟುವ ಪ್ರಯತ್ನ ನಡೆದಿದ್ದು, ಅದೊಂದು ಐತಿಹಾಸಿಕ ಸ್ಮಾರಕವಾಗಿದ್ದು ಹಾಗೆಯೇ ಉಳಿಸಿ ಜೀರ್ಣೋದ್ಧಾರ ಮಾಡುವ ನಿರ್ಧಾರ ಮಾಡಿದ್ದು ಅವಶ್ಯ ಬಿದ್ದರೆ ಅದಕ್ಕೆ ಆರ್ಥಿಕ ನೆರವು ಕೊಡುವ ವಿಷಯಕ್ಕೆ ಹಳೆಯ ವಿದ್ಯಾರ್ಥಿಗಳು ಸಮ್ಮತಿ ಸೂಚಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದಿಂದಹನೂರು ತಾಲ್ಲೂಕಿನಲ್ಲಿ ರಸ್ತೆ ತಡೆ ಚಳುವಳಿ


ವರದಿ :ಬಂಗಾರಪ್ಪ ಸಿ ಹನೂರು.
ಹನೂರು :ಕ್ಷೇತ್ರದಲ್ಲಿ ರೈತರಿಗೆ ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಬಗೆಹರಿಸದಿರುವುದು ಬೆಸರದ ಸಂಗಾತಿ ಹಾಗೂ ರಾಮಾಪುರ ಹೋಬಳಿಯ ನಾಲ್ ರೋಡಿನಿಂದ ಮಾರ್ಟಳ್ಳಿ-ಜಲ್ಲಿಪಾಳ್ಯಂ ವರೆಗಿನ ಕಾಡಂಚಿನ ಗ್ರಾಮಗಳ ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಜನವರಿ 3ನೆ ತಾರೀಖಿನಂದು ನಾಲ್‌ ರೋಡ್‌ ನಲ್ಲಿ ರಸ್ತೆ ತಡೆ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ರೈತ ಸಂಘದ ಉಪಾಧ್ಯಕ್ಷರಾದ ಗೌಡೆಗೌಡ ತಿಳಿಸಿದರು.

ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿಗೃಹದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹನೂರು ತಾಲ್ಲೂಕು ಘಟಕದ ಅಧ್ಯಕ್ಷ ರಾದ ಅಮ್ಜಾದ್ ಖಾನ್
ಚಾಮರಾಜನಗರ ಜಿಲ್ಲೆಯಲ್ಲಿ ಅತ್ಯಂತ ದೊಡ್ಡ ತಾಲ್ಲೂಕಾದ ಹನೂರಿನಲ್ಲಿ ರುವ ಕಾಡಂಚಿನ ಗ್ರಾಮಗಳ ರೈತರ ಸಮಸ್ಯೆಗಳು ಬಹಳಷ್ಟಿದ್ದು, ಅಭಿವೃದ್ಧಿ ಕಡೆಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನವೇ ಕೊಡದ ಕಾರಣ ಸಮಸ್ಯೆಗಳನ್ನು ಬಗೆಹರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ರಾಮಾಪುರ ಹೋಬಳಿ ನಾಲ್‌ ರೋಡಿನಲ್ಲಿ ಮೇಲ್ಕಂಡ ಸಂಘಟನೆಯು ರಸ್ತೆ ತಡೆ ಚಳುವಳಿಯನ್ನು ಹಮ್ಮಿಕೊಂಡಿರುತ್ತದೆ. ಆದ್ದರಿಂದ ಮಾರ್ಟಳ್ಳಿ, ವೆಟ್ಟುಕಾಡು, ಬಿದರಹಳ್ಳಿ, ಸಂದನಪಾಳ್ಯ, ಪೆದ್ದನಪಾಳ್ಯ, ಕೂಡೂರು, ಹೂಗ್ಯಂ, ಜಲ್ಲಿಪಾಳ್ಯ ಮುಂತಾದ ಗ್ರಾಮಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದೆವಿ ಎಂದರು.
ಇದೇ ಸಮಯದಲ್ಲಿ ಮಂಡಿಸಿದ
-ಹಕ್ಕೋತ್ತಾಯಗಳು :-

  1. ಹದಗೆಟ್ಟಿರುವ ರಸ್ತೆ : ರಾಮಾಪುರದಿಂದ ನಾಲ್‌ ರೋಡ್ ಮೂಲಕವಾಗಿ ಜಲ್ಲಿಪಾಳ್ಯವರೆಗಿನ ರಸ್ತೆಯು ತೀರಾ ಹದಗೆಟ್ಟಿದ್ದು 40 ಟನ್ ಭಾರ ಹೊರುವ ವಾಹನಗಳು ಈ ಭಾಗದಲ್ಲಿ ಓಡಾಡುತ್ತಿದ್ದು ಗುಣಮಟ್ಟದ ಡಾಂಬರು ರಸ್ತೆ ನಿರ್ಮಾಣ ಮಾಡಬೇಕು.
  2. ಜಮೀನುಗಳಿಗೆ ಪೋಡು ಸಮಸ್ಯೆ : ಮಾರ್ಟಳ್ಳಿ ಗ್ರಾಮ ಹಾಗೂ ಹೂಗ್ಯಂ ಗ್ರಾಮಗಳ ಜಮೀನುಗಳ ಪೋಡಿನ ಸಮಸ್ಯೆ ಬಗೆಹರಿಸಬೇಕು.
  3. ಮಾರ್ಟಳ್ಳಿಯಿಂದ ಜಲ್ಲಿಪಾಳ್ಯದವರೆಗಿನ ಕಾಡಂಚಿನ ಪ್ರದೇಶಗಳ ಜಮೀನುಗಳಿಗೆ ಆನೆಗಳು ಸೇರಿದಂತೆ ಕಾಡುಪ್ರಾಣಿಗಳ

ಹಾವಳಿ ಹೆಚ್ಚಾಗಿದ್ದು ರೈಲ್ವೆ ಕಂಬಿಗಳ ಬ್ಯಾರಿಕೇಡ್ ಬೇಲಿ ನಿರ್ಮಾಣ ಮಾಡಬೇಕು.

  1. ನಾಲ್‌ರೋಡಿನಿಂದ ಜಲ್ಲಿಪಾಳ್ಯದವರೆಗೆ ನಿರಂತರ ಜ್ಯೋತಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದ್ದು ತಕ್ಷಣ ಆರಂಭಿಸಬೇಕು ಹಾಗೂ ಪಂಪ್‌ಸೆಟ್ಟುಗಳಿಗೆ 7 ತಾಸು ಹಗಲು ವೇಳೆಯಲ್ಲಿಯೇ 3 ಫೇಸು ಗುಣಮಟ್ಟದ ವಿದ್ಯುತ್ ನೀಡಬೇಕು.

5) ಕೂಡಲೂರು ಹಾಗೂ ಸುಳ್ಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರವು ಸರ್ಮಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಆದ್ದರಿಂದ ಆರೋಗ್ಯ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುವಂತೆ ಕ್ರಮವಹಿಸಬೇಕು.

6) ಸ್ಥಳೀಯವಾಗಿ ಲಭ್ಯವಿರುವ ಕೊಟ್ಟಿಗೆ ಗೊಬ್ಬರವು ಹೊರ ರಾಜ್ಯಕ್ಕೆ ಸಾಗಾಣಿಕೆಯಾಗುತ್ತಿದ್ದು ಸ್ಥಳೀಯ ರೈತರಿಗೆ ಗೊಬ್ಬರ ದೊರಕುತ್ತಿಲ್ಲ ಆದ್ದರಿಂದ ಕೊಟ್ಟಿಗೆ ಗೊಬ್ಬರವು ಹೊರರಾಜ್ಯಕ್ಕೆ ಹೋಗದಂತೆ ನಿರ್ಬಂದ ವಿಧಿಸಬೇಕು.

ಈ ಮೇಲ್ಕಂಡ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸುವ ರಸ್ತೆ ತಡೆ ಚಳುವಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಗ್ರಾಮಸ್ಥರು ಭಾಗವಹಿಸುವಂತೆ ಮೇಲ್ಕಂಡ ಸಂಘಟನೆ ಮನವಿ ಮಾಡಿದೆ , ದರಣಿಯ ಸಮಯದಲ್ಲಿ
ಸುವ್ಯವಸ್ಥೆ ಕಾಪಾಡಬೇಕು. ಹಾಗೂ ಅನಿದಿಷ್ಟ ರಸ್ತೆ ತಡೆ ಚಳುವಳಿಯ ಸ್ಥಳಕ್ಕೆ ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಜಿಲ್ಲಾಧಿಕಾರಿಗಳು, ಉಪವಿಭಾಗಅಧಿಕಾರಿಗಳು, ಹಾಗೂ ಹಾಗೂ ಇನ್ನಿತರೆ ಅಧಿಕಾರಿಗಳು ರಸ್ತೆ ತಡೆ ಚಳುವಳಿ ಸ್ಥಳಕ್ಕೆ ಬರಬೇಕೆಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಕ್ತಿವೇಲು, ಗೌರವಾಧ್ಯಕ್ಷ ರಾಜೇಂದ್ರ, ಯುವ ಘಟಕ ಅಧ್ಯಕ್ಷ ಸೂರ್ಯ, ಜಿಲ್ಲಾ ಉಪಾಧ್ಯಕ್ಷರಾದ ಲೋಕೇಶ್ ಗೌಡ, ಕಾಶಿ ಗೌಡ, ಅರ್ಪದ್ ರಾಜ್, ಪಳನಿ ಶೆಟ್ಟಿ, ಹುಚ್ಚಯ್ಯ, ರಾಜಮಣಿ, ಪೂಂಗುಡಿ, ಸೇರಿದಂತೆ ಇನ್ನಿತರರು ಹಾಜರಿದ್ದರು.