Breaking News

ಇಂದಿನಿಂದ ವಾರ್ತಾ ಇಲಾಖೆಯ ಜನಜಾಗೃತಿ ಕಾರ್ಯಕ್ರಮ

Public awareness program of news department from today

ಜಾಹೀರಾತು

ಕೊಪ್ಪಳ ಅಕ್ಟೋಬರ್ 16 (ಕ.ವಾ.): ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೊಪ್ಪಳ ಇವರಿಂದ ಸರ್ಕಾರದ ವಿವಿಧ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಅಕ್ಟೋಬರ್ 17 ರಿಂದ ಅಕ್ಟೋಬರ್ 29ರವರೆಗೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ವಾರ್ತಾಧಿಕಾರಿಗಳಾದ ಗವಿಸಿದ್ದಪ್ಪ ಹೊಸಮನಿ ಅವರು ತಿಳಿಸಿದ್ದಾರೆ.
ಕೊಪ್ಪಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹತ್ತು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ. ಅಕ್ಟೋಬರ್ 17ರಂದು ಕನಕಪುರ ಮತ್ತು ಹಾಲವರ್ತಿ, ಅಕ್ಟೋಬರ್ 18ರಂದು ಲೇಬಗೇರಿ ಮತ್ತು ಕಲಕೇರಿ, ಅಕ್ಟೋಬರ್ 19ರಂದು ಗಬ್ಬೂರ ಮತ್ತು ಬೇವಿನಹಳ್ಳಿ, ಅಕ್ಟೋಬರ್ 20ರಂದು ಕಂಪಸಾಗರ ಮತ್ತು ಮುನಿರಾಬಾದ್, ಅಕ್ಟೋಬರ್ 21ರಂದು ಮಾದಿನೂರು ಮತ್ತು ಕೋಳೂರ, ಅಕ್ಟೋಬರ್ 25ರಂದು ಅಳವಂಡಿ ಮತ್ತು ಕವಲೂರ, ಅಕ್ಟೋಬರ್ 26ರಂದು ಬೂದಿಹಾಳ ಮತ್ತು ಹಲಗೇರಿ, ಅಕ್ಟೋಬರ್ 27ರಂದು ಹಟ್ಟಿ ಮತ್ತು ಬಿಸರಳ್ಳಿ, ಅಕ್ಟೋಬರ್ 28ರಂದು ಇರಕಲಗಡ ಮತ್ತು ಒನಬಳ್ಳಾರಿ ಹಾಗೂ ಅಕ್ಟೋಬರ್ 29ರಂದು ಹಾಸಗಲ್ ಮತ್ತು ಚಿಕ್ಕಬೊಮ್ಮನಾಳ ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ.
ಕುಷ್ಟಗಿ ತಾಲೂಕಿನ ಜನಜಾಗೃತಿ ಕಲಾ ರಂಘ ಸಂಸ್ಥೆಯ ನುರಿತ ಕಲಾವಿದರಿಂದ ಈ ಕಾರ್ಯಕ್ರಮ ನಡೆಯಲಿದ್ದು ಆಯಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಇನ್ನೀತರ ಅಧಿಕಾರಿಗಳು ಮತ್ತು ಆಯಾ ಗ್ರಾಮಸ್ಥರು ಕಾರ್ಯಕ್ರಮಕ್ಕೆ ಅಗತ್ಯ ಸಹಕಾರ ನೀಡಲು ಜಿಲ್ಲಾ ವಾರ್ತಾಧಿಕಾರಿಗಳು ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.

About Mallikarjun

Check Also

ಕಮಲ್ ಹಾಸನ್ ಕ್ಷಮೆ ಕೇಳುವವರೆಗೂಅವರ ಚಿತ್ರಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು: ಬಳ್ಳಾರಿ ರಾಮಣ್ಣ ನಾಯಕ

Kamal Haasan’s films should be banned in the state until he apologizes: Ballari Ramanna Nayak …

Leave a Reply

Your email address will not be published. Required fields are marked *