ಶ್ರೀ ಅಖಂಡೇಶ್ವರ ದೇವಸ್ಥಾನದ 18ನೇ ವಾರ್ಷಿಕೋತ್ಸವ,

Mallikarjun
1 Min Read

18th Anniversary of Sri Akhandeshwar Temple,

ಗಂಗಾವತಿ, 3 : ನಗರಸಭೆ ವ್ಯಾಪ್ತಿಯ 27 ನೆಯ ವಾರ್ಡ್, ಹರಿಜನ ವಾಡ ವಿರುಪಾಪುರ, ದಲ್ಲಿರುವ ಶ್ರೀ ಅಖಂಡೇಶ್ವರ ದೇವಸ್ಥಾನದ 18ನೆಯ ವಾರ್ಷಿಕೋತ್ಸವ ಹಾಗೂ ಉಚಿತ ಸಾಮೂಹಿಕ ವಿವಾಹ ಹಾಗೂ ಸಂಜೆ ರಥೋತ್ಸವ ಕಾರ್ಯಕ್ರಮ ಜರುಗಲಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ದೇವಪ್ಪ ದೇವರಮನಿ ತಿಳಿಸಿದರು, ಅವರು ರವಿವಾರದಂದು ಮಾಧ್ಯಮದೊಂದಿಗೆ ಮಾತನಾಡಿ, ಶ್ರೀ ಅಕಂಡೇಶ್ವರ ದೇವಸ್ಥಾನ ಸ್ಥಾಪನೆಗೊಂಡು 18ನೇ ವರ್ಷಕ್ಕೆ ಪಾದಾರ್ಪಣೆ ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ ಅಖಂಡೇಶ್ವರನಿಗೆ ಪಂಚಾಮೃತ ಅಭಿಷೇಕ ರುದ್ರಾಭಿಷೇಕ ಸೇರಿದಂತೆ, 9 ಜೋಡಿಗಳ ಸಾಮೂಹಿಕ ವಿವಾಹವನ್ನು ನಡೆಸಲಾಗುತ್ತಿದ್ದು ಸಂಜೆ ಐದು ಗಂಟೆಗೆ ಸರ್ವಲಾಂಕೃತ ರಥೋತ್ಸವ ಜ ರುಗಲಿದೆ , ಧಾರ್ಮಿಕ ಸಮಾರಂಭದ ಧರ್ಮ ಸಭೆಯನ್ನು ಕೊಪ್ಪಳ ಗವಿಸಿದ್ದೇಶ್ವರ ಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳು, ಶ್ರೀ, ಬಸವ ಮೂರ್ತಿ ಮಾದರ ಚೆನ್ನಯ್ಯ ಸ್ವಾಮಿಗಳು, ಹೆಬ್ಬಾಳ ಮಠದ, ನಾಗಭೂಷಣ ಶಿವಾಚಾರ್ಯರು ಸೊಳ್ಳೆ ಕಲ್ ರಾಜರಾಜೇಶ್ವರಿ ಮಠದ, ಶ್ರೀ ಭುವನೇಶ್ವರ ತಾತನವರು ಹಾಗೂ ಅರಳಿ ಹಳ್ಳಿಮಠದ ಶ್ರೀ ಗವಿಸಿದ್ದೇಶ್ವರ ಪೂಜ್ಯರು, ಸೇರಿದಂತೆ ಕಲ್ಮಠದ ಕೊಟ್ಟೂರು ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು, ಗಣ್ಯರು ಚುನಾಯಿತ ಪ್ರತಿನಿಧಿಗಳು ಮಾಜಿ ಶಾಸಕರುಗಳು, ಭಾಗವಹಿಸಲಿದ್ದಾರೆ ಎಂದು ತಿಳಿಸಿದರು, ಹಂಪೆವೋಲ್ಗಪ್ಪ ಕಂಟೆಪ್ಪ ಹನ್ವಾಳ್ ಹುಲಿಗೇಶ ದೇವರಮನೆ ದೇವಪ್ಪ ಅಯೋಧ್ಯ ಶ್ರೀ ಅಖಂಡೇಶ್ವರ ದೇವಸ್ಥಾನ, ಜೀರ್ಣೋದ್ಧಾರ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು

Total Views: 0
Share This Article