Breaking News

ನಗರಸಭೆಯಲ್ಲಿ ಸ್ವಾತಂತ್ರ್ಯಕ್ಕಾಗಿಹೋರಾಡಿದ ಯೋಧರಿಗೆ ಸನ್ಮಾನ

For Independence in Municipal Council Tribute to the warriors who fought

ಜಾಹೀರಾತು

ಗಂಗಾವತಿ: ಸ್ವಾತಂತ್ರ್ಯೋ ತ್ಸವ ನಿಮಿತ್ತ ಸ್ವಾತಂತ್ರ್ಯಕ್ಕಾಗಿ
ಹೋರಾಡಿದ ಯೋಧರಿಗೆ ಇಂದು ಶನಿವಾರ ನಗರಸಭೆಯಲ್ಲಿ
ಸನ್ಮಾನ ಸಮಾರಂಭ ಜರುಗಿತು.
ಈ ವೇಳೆ ನಗರಸಭೆ ಪೌರಾಯುಕ್ತರಾದ ಆರ್.
ವಿರುಪಾಕ್ಷಮೂರ್ತಿಯವರು ಮಾತನಾಡಿ, ಈ ವೀರಯೋಧರ
ಹೋರಾಟ ಅವಿಸ್ಮರಣೀಯ ಎಂದರು. ಇದೇ ಸಂದರ್ಭದಲ್ಲಿ ಗೌಳಿ
ರಮೇಶ ಮಾತನಾಡಿ, ನಗರಸಭೆಯು, ಸ್ವಾತಂತ್ರö್ಯ
ಯೋಧರ ಮತ್ತು ಅವರ ಕುಟುಂಬದವರನ್ನು ಸನ್ಮಾನಿಸಿದ್ದು
ಶ್ಲಾಘನೀಯ. ಇದೇ ರೀತಿ ಮುಂದಿನ ದಿನಮಾನಗಳಲ್ಲಿ
ಯೋಧರನ್ನು ಗುರುತಿಸಿ ಸನ್ಮಾನಿಸುವುದು ಅಗತ್ಯತೆ ಇದೆ.
ಇದರಿಂದ ಯುವಕರಿಗೆ ದೇಶ ಪ್ರೇಮದ ಜಾಗೃತಿ ಮೂಡಿಸಲು
ಸಹಕಾರಿ ಎಂದು ಹೇಳಿದರು.
ಸನ್ಮಾನಿತರು : ಶ್ರೀ ಗೌಳಿ ಮಹಾದೇವಪ್ಪನವರ ಸುಪುತ್ರರಾದ
ಗೌಳಿ ರಮೇಶ, ಅರಳಿ ರಾಚಪ್ಪನವರ ಸುಪುತ್ರ ಅರಳಿ
ಶೇಖರಪ್ಪ, ಶ್ರೀ ಭಾವಿಕಟ್ಟಿ ಜಗದೀಶಪ್ಪ ಕುಟುಂಬಸ್ಥರಾದ
ಭಾವಿಕಟ್ಟಿ ಬಸವರಾಜ, ಶ್ರೀ ವೆಂಕೋಬಾಚಾರ್ ಬೇವಿನಾಳ್ ಇವರ
ಕುಟುಂಬಸ್ಥರಾದ ನರಸಿಂಗರಾವ್ ಕುಲಕರ್ಣಿ, ಶ್ರೀ ರಾಮಾಚಾರ್
ಸುಪುತ್ರ ಅನಿಲ್ ಅಯೋಧ್ಯಾ, ಶ್ರೀ ರಾಂಭಟ್ಟ ಜೋಷಿ ಸುಪುತ್ರ
ವಿವೇಕಾನಂದ ಜೋಷಿ, ಶ್ರೀ ರಾಯಚೂರು ಶಿವಯ್ಯ ಶ್ರೇಷ್ಠಿ
ಇವರ ಸುಪುತ್ರ ಲಕ್ಷö್ಮಣ ದಂಪತಿಗಳಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ನಗರಸಭೆ ಸಿಬ್ಬಂದಿ ಮತ್ತು ಅಧಿಕಾರ
ವರ್ಗದವರು ಉಪಸ್ಥಿತರಿದ್ದರು.

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.