
ಮಾದಪ್ಪನ ಸನ್ನಿದಿಯಲ್ಲಿ ಪ್ರಚಾರ ಸಮಿತಿಯ ಸಭೆ ಉದ್ಘಾಟನೆ : ಎಸ್ ನಾರಾಯಣ್ .

Inauguration of the campaign committee meeting in the presence of Madappa: S Narayan.
ವರದಿ:ಬಂಗಾರಪ್ಪ .ಸಿ
ಹನೂರು : ಶ್ರೀ ಮಲೆ ಮಾದೇಶ್ವರ ಬೆಟ್ಟದ ಸಾಲೂರು ಸಮುದಾಯ ಭವನದಲ್ಲಿ ಚಾಮರಾಜನಗರ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಪ್ರಚಾರ ಸಮಿತಿಯ ಸಭೆಯನ್ನು ಕರ್ನಾಟಕ ಪದೇಶ ಪ್ರಚಾರ ಸಮಿತಿಯ ಮುಖ್ಯ ಸಂಯೋಜಕರಾದಡಾಕ್ಟರ್ ಎಸ್ . ನಾರಾಯಣ ರವರು ಉದ್ಘಾಟಿಸಿದರು .
ನಂತರ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷಕ್ಕೆ ಎಲ್ಲಾರು ಪಕ್ಷ ನಿಷ್ಠೆಯಿಂದ ಆತ್ಮ ತೃಪ್ತಿಯಿಂದ ಕೆಲಸ ಮಾಡಬೇಕು ಪಕ್ಷ ವಿರೋಧಿ ಕೆಲಸಗಳನ್ನು ಮಾಡಬಾರದು ಮತ್ತು ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಚಾರ ಸಮಿತಿಯ ಎಲ್ಲಾ ಪಧಾದಿಕಾರಿಗಳು ಒಗ್ಗಟ್ಟಿನಲ್ಲಿ ಕೆಲಸ ಮಾಡಬೇಕು ಜೊತೆಗೆ ಚಾಮರಾಜನಗರ ಜಿಲ್ಲೆಯು ಕರ್ನಾಟಕದ ಮೂಲೆಮೂಲೆಗಳಲ್ಲಿ ಇನ್ನಿತರ ಜಿಲ್ಲೆಗಳಿಗೆ ಮಾದರಿಯಾಗಬೇಕು ಜನರ ಕಷ್ಟ ಸುಖಗಳಿಗೆ ಭಾಗಿಯಾಗಬೇಕು ಪಕ್ಷದ ಸಂಘಟನೆಯ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನು ವಿವರವಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರಚಾರ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ಹೊಸಹಳ್ಳಿ ಮಧುಸೂದನ್ ಹನೂರು ಬ್ಲಾಕ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿ. ಪ್ರಸಾದ್ ರಾಮಪುರ ಬ್ಲಾಕ್ ಅಧ್ಯಕ್ಷರಾದ ಬಾಲು . ಜಿಲ್ಲಾ ಸಾಯೋಜಕರಾದ ಶಿವಕುಮಾರ್ .ತಾಲ್ಲೂಕು ಉಪಾಧ್ಯಕ್ಷರಾದ ಪೆದ್ದನಪಾಳ್ಯ ಸಿದ್ದರಾಜು , ಪ್ರವೀಣ, ಲೋಕೇಶ, ಮಹಾದೇವಸ್ವಾಮಿ, ಹಾಗೂ ಪ್ರಚಾರ ಸಮಿತಿಯ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.




