oplus_0
ಪಂಚನದಿ ಸಚಿವಾಲಯ ಮಾಡಿ ಹೆಚ್.ಆರ್.ಶ್ರೀನಾಥ್ ಆಗ್ರಹ
Election schedule announced for formation of Koppal District Planning Committee


ಗಂಗಾವತಿ: ಕಲುಷಿತ ನದಿಗಳು ಸ್ವಚ್ಛತೆಗಾಗಿ ಪ್ರತ್ಯೇಕ ಸಚಿವಾಲಯಗಳನ್ನು ಮಾಡುವ ಮೂಲಕ ನದಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕೆಂದು ವಿಧಾನಪರಿಷತ್ ಮಾಜಿ ಸದಸ್ಯ ಹೆಚ್.ಆರ್.ಶ್ರೀನಾಥ್ ಹೇಳಿದರು.
ಅವರು ತಮ್ಮ ನಿವಾಸದಲ್ಲಿ ನಿರ್ಮಲ ತುಂಗಭದ್ರ ಅಭಿಯಾನಕ್ಕೆ ಬೆಂಬಲ ನೀಡಿ ಮಾತನಾಡಿದರು. ನದಿಗಳ ಸ್ವಚ್ಛತೆ ಕುರಿತು ಜನಜಾಗೃತಿ ಅಗತ್ಯವಿದ್ದು, ಕಲಷಿತ ನೀರು ನದಿಪಾತ್ರ ಸೇರದಂತೆ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ. ತ್ಯಾಜ್ಯಗಳು ನದಿ ಸೇರದಂತೆ ಎಚ್ಚರಿಕೆ ವಹಿಸಬೇಕಿದೆ, ನೀರು ನಮ್ಮ ಜೀವನಕ್ಕೆ ಅತ್ಯಮುಲ್ಯ, ಆರೋಗ್ಯಯುತ ಜೀವನ ಸವೆಸಬೇಕಾದರೆ ದೊಡ್ಡಪ್ರಮಾಣದ ಬದಲಾವಣೆ ಆಗಬೇಕಿದೆ. ಸಚಿವಾಲಯವಾದರೆ ಮಲಿನತೆ ನಿವಾರಣೆಯಾಗಲಿದೆ. ಗಂಗಾವತಿಯಿAದ ಪಾದಯಾತ್ರೆ ಹೊರಡುವ ಪಾದಯಾತ್ರೆಗೆ ಸಂಪೂರ್ಣ ಬೆಂಬಲ ನೀಡಬೇಕಿದೆ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಹನುಮಂತಪ್ಪ ನಾಯಕ, ಸುರೇಶ್ ಗೌರಪ್ಪ ಇತರರಿದ್ದರು.


