
ರಾ.ಬ.ಕೊ.ವಿ ಜಿಲ್ಲೆಗಳು ತುಂಗಭದ್ರಾ ನೀರಾವರಿಯಿಂದವಂಚಿತ: ನ್ಯಾಯವಾದಿ ಕೆ.ಕೆ.ಆರ್

RABCO districts deprived of Tungabhadra irrigation: Advocate KKR
ಕೊಪ್ಪಳ: ಬಲ್ಡೋಟ ತೊಲಗಿಸಿ, ಕೊಪ್ಪಳ ಉಳಿಸಿ,
ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಅಲ್ಟಾçಟೆಕ್ ಸಿಮೆಂಟ್,ಮುಕುಂದ ಸುಮಿ, ಎಕ್ಸಿಂಡಿಯಾ, ಭದ್ರಶ್ರೀ ಸ್ಟೀಲ್, ತನುಷ್,ವನ್ಯಾ ಮುಂತಾದ ಪರಿಸರ ಹಾನಿಕಾರಕ ಸ್ಪಾಂಜ್ ಐರನ್, ಪೆಲೆಟ್,
ರಾಸಾಯನಿಕ, ಕಲ್ಲಿದ್ದಿಲು ವಿದ್ಯುತ್, ಸುಣ್ಣ ತಯಾರಿಸುವಕಾರ್ಖಾನೆ ವಿಸ್ತರಣೆ, ಹೊಸ ಸ್ಥಾಪನೆ ವಿರೋಧಿಸಿ ಜಿಲ್ಲಾಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆಯಿಂದ ೧೦೨ನೇದಿನಗಳಿಂದ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ
ಸತ್ಯಾಗ್ರಹವನ್ನು ಬಳ್ಳಾರಿ ಹಿರಿಯ ನ್ಯಾಯವಾದಿ ಕೆ.
ಕೋಟೇಶ್ವರ ರಾವ್ ಬೆಂಬಲಿಸಿದರು. ಕೆ.ಕೆ.ಆರ್ ಮಾತನಾಡಿ ‘ ಈಕಾರ್ಖಾನೆಗಳು ಯಾವುದೇ ಕಾನೂನು ನಿಯಮಾವಳಿಪಾಲಿಸುವುದಿಲ್ಲ. ಪರಿಸರ ಮಾಲಿನ್ಯ, ಹಳ್ಳಿಯ ಕೃಷಿ ನಾಶದಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ತಮ್ಮ ಲಾಭಕ್ಕಾಗಿ
ಏನನ್ನಾದರೂ ಮಾಡಲು ಇವರು ಸಿದ್ಧ. ಸರ್ಕಾರದ
ಸಡಿಲಿಕೆಯಿಂದಲೇ ಇಷ್ಟೊಂದು ಸಂಖ್ಯೆಯಲ್ಲಿ ಮಾಲಿನ್ಯಮಾಡುವ
ಕಾರ್ಖಾನೆಗಳು
ಕೇಂದ್ರಿಕೃತವಾಗಿವೆ. ಅವರು
ಬೇಕಾದರೆ ನೀವೆ ಇಲ್ಲಿಂದ ಎದ್ದು ಹೋಗಿ ಎನ್ನುವಂತಿದೆ. ಈ
ಕಾರ್ಖಾನೆಗಳು ಲೆಕ್ಕಕ್ಕೆ ಸಿಗದಷ್ಟು ಪ್ರಮಾಣದಲ್ಲಿ
ತುಂಗಭದ್ರಾ ಮತ್ತು ಕೃಷ್ಣಾ ನದಿ ನೀರು
ಬಳಸಿಕೊಳ್ಳುತ್ತಿರುವ ಕಾರಣಕ್ಕೆ ರಾಯಚೂರು, ಬಳ್ಳಾರಿ,
ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಯ ಅಚ್ಚುಕಟ್ಟು
ಪ್ರದೇಶದ ಜನರ ಲಕ್ಷಗಟ್ಟಲೆ ಎಕರೆ ಭತ್ತದ ಬೆಳೆ
ಒಂದೆ ಬೆಳೆ ಬೆಳೆಯುವಂತಾಗಿದೆ. ಭವಿಷ್ಯದ ಕೃಷಿ
ಅಪಾಯಕ್ಕೆ ಸಿಲುಕುತ್ತದೆ. ಇಲ್ಲಿ ಬೃಹತ್ ಗಾತ್ರದ ಬಂಡವಾಳ
ಹೂಡಿ, ನಗರಕ್ಕೆ ಹೊಂದಿಕೊAಡು ಬಲ್ಡೋಟ ವಿಸ್ತರಣೆ
ಆದರೆ ನಗರದ ಜನರು ರೋಗಬಾಧೆಗೆ
ಒಳಗಾಗುತ್ತಾರೆ. ಇದರ ಮಾಲಿನ್ಯ ನಾವು ಸೇವಿಸುವ
ನೀರಿನಲ್ಲಿ, ಗಾಳಿಯಲ್ಲಿ, ಭೂಮಿಯಲ್ಲಿ, ಅಂತರ್ಜಲಕ್ಕೆ
ಸೇರಿಸುವುದರಿಂದ ಪುನಶ್ಚೇತನ ಮಾಡಲು
ಸಾಧ್ಯವಿಲ್ಲದಷ್ಟು ಹಾನಿ ಮಾಡಿವೆ. ಈ ಹೋರಾಟವನ್ನು ಬಳ್ಳಾರಿ
ಜಿಲ್ಲೆಯಿಂದಲು ಸಂಪೂರ್ಣವಾಗಿ ಬೆಂಬಲಿಸುತ್ತೇವೆ’ ಎಂದರು.
ಧರಣಿಯಲ್ಲಿ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು
ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ,
ಮಂಜುನಾಥ ಜಿ. ಗೊಂಡಬಾಳ, ಪ್ರಕಾಶಕ ಡಿ.ಎಂ.ಬಡಿಗೇರ,
ರಂಗಕರ್ಮಿ ಶರಣು ಶೆಟ್ಟರ್, ಕೃಷಿ ಬೆಳೆ ಬಾಧಿತ ಲಾಚನಕೇರಿ
ರೈತ ನಾಗರಾಜ ಕೆ, ಕ.ರಾ.ನಿ.ನೌಕರರ ಸಂಘ ಕೊಪ್ಪಳ
ಜಿಲ್ಲಾಧ್ಯಕ್ಷರಾದ ಸಿ.ವಿ.ಜಡಿಯವರ, ರಾಜಶೇಖರ ಏಳುಬಾವಿ,
ಶಂಭುಲಿAಗಪ್ಪ ಹರಗೇರಿ, ರೈತ ಯಲ್ಲಪ್ಪ ಸಿದ್ದರ್,
ಮಲ್ಲಿಕಾರ್ಜುನ ನಿಂಗೋಜಿ, ಆಪ್ ಪಕ್ಷದ ಲೋಹಿತ್ ಕುಮಾರ,
ರಾಮ್ ಶೆಟ್ಟಿ, ಎಂ.ಡಿ. ಅಮನ್ ಗಾಜಿ, ನಿವೃತ್ತ ಪ್ರಾಚಾರ್ಯರಾದ
ಎಸ್.ಬಿ.ರಾಜೂರು, ಬಿ.ಜಿ.ಕರಿಗಾರ, ಮೂಕಪ್ಪ ಮೇಸ್ತಿç ಬಸಾಪುರ,
ನಿವೃತ್ತ ಉಪನ್ಯಾಸಕ ಡಾ.ಬಸವರಾಜ ಪೂಜಾರ, ಬಸವರಾಜ
ನರೇಗಲ್, ಯಮನೂರಪ್ಪ ಹಾಲಳ್ಳಿ ಬಸಾಪುರ, ಮಾರುತಿ
ಬೊಮ್ಮನಾಳ, ಎಸ್ ಮಹಾದೇವಪ್ಪ ಮಾವಿನಮಾಡು,
ಗವಿಸಿದ್ದಪ್ಪ ಮಾ.ಪಾ, ಸದಾಶಿವ ಪಾಟೀಲ್, ಪಂಪಣ್ಣ ಚಿಂತಪಲ್ಲಿ,
ಶಿವಪ್ಪ ಜಲ್ಲಿ, ನಿವೃತ್ತ ಕಾರ್ಮಿಕ ಅಧಿಕಾರಿ ಶಾಂತಯ್ಯ ಅಂಗಡಿ,
ಗಂಗಾಧರ ಖಾನಾಪೂರ, ಬಸವರಾಜಪ್ಪ ಶೆಟ್ಟರ್, ಮಖ್ಬುಲ್
ರಾಯಚೂರು, ಶಿಕ್ಷಕ ಶಿವಪ್ಪ ನಿ., ರತ್ನಮ್ಮ ದೊಡ್ಡಮನಿ
ಪಾಲ್ಗೊಂಡಿದ್ದರು.




