Breaking News
ದಲಿತ ಎಂಬ ಪದ ಜಾತಿ ಸೂಚಕವಲ್ಲ ಅದು ಶೋಷಿತ ವರ್ಗದ ಪ್ರತೀಕ.. ಡಾಕ್ಟರ್ ಅರ್ಜುನ್ ಗೋ ಸಂಗಿ…
The word Dalit is not a caste symbol, it is a symbol of the exploited class.. Dr. Arjun Go Sangi…

ದಲಿತ ಎಂಬ ಪದ ಜಾತಿ ಸೂಚಕವಲ್ಲ ಅದು ಶೋಷಿತ ವರ್ಗದ ಪ್ರತೀಕ.. ಡಾಕ್ಟರ್ ಅರ್ಜುನ್ ಗೋ ಸಂಗಿ

ಜಾಹೀರಾತು
https://youtu.be/54mDmaz0YxQ?si=IlxLl6zRdn1CsS_E
ಜಾಹೀರಾತು


ಗಂಗಾವತಿ… ಶತಶತಮಾನಗಳಿಂದ ಶೋಷಣೆಗೆ ಒಳಗಾದ ಜನಾಂಗದವರ ಪ್ರತಿಕವೇ ದಲಿತ ಎಂದು ಕರೆಯಲಾಗುತ್ತಿದ್ದು ಇದು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ ಎಂದು ದಲಿತ ಸಾಹಿತ್ಯ ಪರಿಷತ್ ರಾಜ್ಯ ಘಟಕದ ರಾಜ್ಯಾಧ್ಯಕ್ಷ ಡಾಕ್ಟರ್ ಅರ್ಜುನ್ ಗೋಸಂಗಿ ಹೇಳಿದರು.
ಅವರು ರವಿವಾರದಂದು ದಲಿತ ಸಾಹಿತ್ಯ ಪರಿಷತ್ ರಾಜ್ಯ ಘಟಕ ಗದಗ್ ಹಾಗೂ ತಾಲೂಕಾ ಘಟಕ ಗಂಗಾವತಿ ಸಂಯುಕ್ತ ಆಶಯದಲ್ಲಿ ಭಾರತೀಯ ವೈದ್ಯಕೀಯ ಭವನದಲ್ಲಿ ಆಯೋಜಿಸಿದ ಅಕ್ಷರದ ಅವ್ವ ಸಾವಿತ್ರಿ ಬಾಪುಲೆ ಪ್ರಶಸ್ತಿ ಪ್ರಧಾನ ಸಮಾರಂಭದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಸಾವಿತ್ರಿ ಬಾಪುಲೆ ಅವರ ಭಾವಚಿತ್ರಕ್ಕೆ ನೆರವೇರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕಳೆದ 17 ವರ್ಷಗಳಿಂದ ಗದಗ್ ನಗರದಲ್ಲಿ ದಲಿತ ಸಾಹಿತ್ಯ ಘಟಕವನ್ನು ಸ್ಥಾಪಿಸುವುದರ ಮೂಲಕ ದಲಿತ ಸಾಹಿತ್ಯ ಚಳುವಳಿಯನ್ನು ನಡೆಸುತ್ತಾ ಬದಲಾಗಿದೆ. ತೋಂಟದಾರ್ಯ ಶ್ರೀಗಳ ದಿವ್ಯ ಸಾನಿಧ್ಯ ಮೂಲಕ ಆರಂಭಗೊಂಡ ರಾಜ್ಯ ಘಟಕವು ಶೋಷಣೆಗೆ ಒಳಗಾದ ಸಮುದಾಯದ ಅಭಿವೃದ್ಧಿಗೆ ಹತ್ತು ಹಲವಾರು ಸಮಾಜಮುಖಿ ಕಾರ್ಯಗಳನ್ನು ಸಮ್ಮೇಳನಗಳನ್ನು ನಡೆಸುತ್ತಾ ಬರಲಾಗಿದ್ದು ಪ್ರಸ್ತುತ ಘಟಕವು ಸಮಾನ ಮಸ್ಕರೊಂದಿಗೆ ರಾಜ್ಯದ್ಯಂತ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ ಎಂದು ತಿಳಿಸಿದರು. ಇದಕ್ಕೂ ಪೂರ್ವದಲ್ಲಿ ಸಂವಿಧಾನ ಪೀಠಿಕೆಯ ಪ್ರಮಾಣ ವಚನವನ್ನು ಬೋಧಿಸಲಾಯಿತು. ಈ ಸಂದರ್ಭದಲ್ಲಿ ವಿಶೇಷ ಉಪನ್ಯಾಸವನ್ನು ಹೆಚ್ ಎಂ ಶೈಲಜಾ ಸಾವಿತ್ರಿಬಾಯಿಪುಲೆ ಸೇರಿದಂತೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ವಿಷಯಗಳ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸೋಮಶೇಖರ್ ಗೌಡ ಪಾಟೀಲ್. ಘಟಕದ ಜಿಲ್ಲಾಧ್ಯಕ್ಷ ಡಾ. ನಿಂಗಣ್ಣ ಜಂಗಮದಲ್ಲಿ. ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ.ನಟೇಶ್. ಡಾಕ್ಟರ್ ಶರಣಬಸಪ್ಪ ಕೋಲ್ಕಾರ್. ಅಜ್ಮೀರ. ನಂದಾ ಪುರ ಶಿವಕುಮಾರ್ ಮಾಲಿ ಪಾಟೀಲ್ ಕೆ ನಿಂಗಜ್ಜ ಸೇರಿದಂತೆ ಇತರರು ಇಪ್ಪತ್ತಕ್ಕೂ ಅಧಿಕ ಸಾಧಕರನ್ನು ಸಾವಿತ್ರಿ ಬಾಪುಲೆ ಪ್ರಶಸ್ತಿ ನೀಡಿ ಗೌರವಿಸಿದರು

Leave a Reply

Your email address will not be published. Required fields are marked *