ಕೇಂದ್ರ ಸರ್ಕಾರದ ಜಿರಾಮ್ ಜಿ ಅಳಿಸಿ ಮಹಾತ್ಮ ಗಾಂಧಿಜೀಯವರ ಹೆಸರಿನ ನರೇಗ ಉಳಿಸಿ :ಮಾಜಿ ಶಾಸಕರಾದ ಆರ್ ನರೇಂದ್ರ

Mallikarjun
3 Min Read

ಕೇಂದ್ರ ಸರ್ಕಾರದ ಜಿರಾಮ್ ಜಿ ಅಳಿಸಿ ಮಹಾತ್ಮ ಗಾಂಧಿಜೀಯವರ ಹೆಸರಿನ ನರೇಗ ಉಳಿಸಿ :ಮಾಜಿ ಶಾಸಕರಾದ ಆರ್ ನರೇಂದ್ರ

Delete Jiram Ji from the central government and save Narega, named after Mahatma Gandhi: Former MLA R Narendra

ವರದಿ: ಬಂಗಾರಪ್ಪ .ಸಿ.‌

ಹನೂರು :ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯದ ಹೋರಾಟದ ಭಾಗವಾಗಿ ಹುಟ್ಟುಕೊಂಡ ಚಳುವಳಿಯಾಗಿದ್ದ ಸಂಘಟನೆ ಇಂದು ದೇಶವನ್ನಾಳುವ ರಾಜಕೀಯ ಪಕ್ಷವಾಗಿದೆ , ನಮ್ಮ ರಾಜ್ಯದ ಮುಖ್ಯಮಂತ್ರಿಗಳಾಗಿ ಆಳ್ವಿಕೆ ನಡೆಸಿದ ದೇವರಾಜು ಅರಸುರವರ ಕಾಲಘಟ್ಟದಲ್ಲಿ ಉಳುವವನೆ ಭೂಮಿಯ ಒಡೆಯ ಎಂದು ಜಾರಿಗೆ ತಂದು ಬಡವರ ಉದ್ದಾರಕ್ಕಾಗಿ ಶ್ರಮಿಸಿದ ಪಕ್ಷ ನಮ್ಮದು ಎಂದು ಮಾಜಿ ಶಾಸಕರಾದ ಆರ್ ನರೇಂದ್ರ ತಿಳಿಸಿದರು.

ವಿಧಾನ ಸಭಾ ಕ್ಷೇತ್ರದ ಕೌದಳ್ಳಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿನ ಶಾಧಿಮಹಲ್ ನಲ್ಲಿ ಮಾತನಾಡಿದ ಅವರು
ಅನ್ನಭಾಗ್ಯ ಯೋಜನೆ ,ಸಾಮಾಜಿಕ ಭದ್ರತಾ ಯೋಜನೆ, ಸೇರಿದಂತೆ ಅನೇಕ ರೀತಿಯ ಯೋಜನೆಯನ್ನು ನಮ್ಮ ಸರ್ಕಾರ ಜಾರಿಗೆ ತಂದಿರುವುದು . ನಮ್ಮ ಭಾಗದಲ್ಲಿ ಹೆಚ್ಚು ಜನ ಉದ್ಯೋಗ ಖಾತ್ರಿ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ,
ನಮ್ಮ ಸರ್ಕಾರದ ಹಲವು ಯೋಜನೆಯನ್ನು ಜಾರಿಗೆ ತಂದಿದ್ದರೆ ಬಿಜೆಪಿಯವರು ಹಲವಾರು ಯೋಜನೆಯನ್ನು ನಿರ್ಬಂಧಿಸುತ್ತಿದ್ದಾರೆ, ನಮ್ಮ ಪಂಚ ಗ್ಯಾರಂಟಿಗಳನ್ನು ಅವರು ಕಾಪಿ ಮಾಡುವಂತ ಕೆಲಸ ಮಾಡುತ್ತಿದ್ದಾರೆ ,ಇಂತಹ ಕಾರ್ಯಕ್ರಮ ವಿರೋಧಿಗಳಾದ ನಿಮಗೆ ನಮ್ಮ ಯೋಜನೆಯ ಅನುಕೂಲ ಪಡೆದುಕೊಳ್ಳುವುದನ್ನು ನಿಲ್ಲಿಸಲಾಗುತ್ತದೆಯೆ . ನಮ್ಮ ಸ್ತ್ರೀ ಶಕ್ತಿ ಗಳ ಯೋಜನೆಯಿಂದ ನಾಡಿನ ಪ್ರಸಿದ್ದ ವ್ಯಕ್ತಿಗಳಾದವಿರೇಂದ್ರ ಹೆಗ್ಗಡೆಯವರು ಇದೊಂದು ಉತ್ತಮ ಯೋಜನೆ ಎಂದು ಬಣ್ಣಿಸಿ ಸರ್ಕಾರಕ್ಕೆ ಕಾಗದ ಬರೆದಿದ್ದಾರೆ . ನಮ್ಮ ಸರ್ಕಾರದ ಎಲ್ಲಾ ಕಾರ್ಯಕ್ರಮಗಳು ನಡೆಯಬೇಕಾದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಬೇಕುಬ.
ಕೇಂದ್ರ ಸರ್ಕಾರವು ಗಾಳಿ ಹಾಗೂ ಬಿಸಿಲು ಗಳೆರಡಕ್ಕೂ ತೆರಿಗೆ ವಿಧಿಸುವ ಕಾರ್ಯಮಾಡಿದ್ದಾರೆ ಎಂದರು.

ನಂತರ ಮಾತನಾಡಿದ ರಾಜ್ಯ ಪ್ರಚಾರ ಸಮಿತಿಯ ರಾಜ್ಯ ಸಂಚಾಲಕರು ಹಾಗೂ ಚಾಮರಾಜನಗರ ಜಿಲ್ಲೆಯ ಉಸ್ತುವಾರಿಗಳಾದ ಎಸ್ ನಾರಯಣ್ ರವರು ಸ್ಥಳಿಯ ಜನರ ನಾಡಿ ಮಿಡಿತಕ್ಕೆ ಮಾಜಿ ಶಾಸಕರಾದ ಆರ್ ನರೇಂದ್ರ ರವರು ನಮ್ಮಕಾರ್ಯಕ್ರಮಕ್ಕೆ ಸಹ ಬೆನ್ನುಲುಬಾಗಿದ್ದಾರೆ .
ಹನೂರು ಕ್ಷೇತ್ರದಲ್ಲಿ ಪ್ರತಿ ಊರು ಕೇರಿಗಳಲ್ಲಿ ನರೇಂದ್ರ ರವರ ಹೆಸರೆಳುತ್ತಿದೆ .
ಮನೇರಗಾವು ಕೇಂದ್ರ ಸರ್ಕಾರವು ಸಾಯುವಂತೆ ಮಾಡಲಾಗುತ್ತದೆ , ನಮ್ಮ ಸರ್ಕಾರಸ ಮುಖ್ಯಮಂತ್ರಿಗಳಾಗಿದ್ದ ಎಸ್ ಎಮ್ ಕೆ ರವರ ಕಾಲಘಟ್ಟದಲ್ಲಿ ಬೆಂಗಳೂರಿಗೆ ಅತ್ಯಂತ ಹೆಚ್ಚು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಒಂದಾಗುವಂತೆ ಮಾಡಿ ನಮ್ಮದೇಶದ ಆರ್ಥಿಕತೆಗೆ ಬೆಂಗಳೂರಿನ ಕೊಡುಗೆ ಅಪಾರವಾದುದ್ದು , ವಿಕಾಶಿತ ಭಾರತಕ್ಕೆ ನಮ್ಮ ಕಾಂಗ್ರೇಸ್ ನ ಕೊಡುಗೆ ಅಪಾರವಾದುದ್ದು.ನರೇಗದಿಂದ ಹಳ್ಳಿಜನರ ಗೂಳೆ ಹೊರಡುವುದನ್ನು ತಡೆದ ಕೀರ್ತಿ ನಮ್ಮದು , ಜನರು ಕೆಲಸ ಮಾಡುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕೆಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆಸಹಕರಿಸಿ ಅಧಿಕಾರಕ್ಕೆರಲು ಕೊರಿದರು .
ನಮ್ಮ ಪ್ರಧಾನಿಗಳಾದ ಶ್ರೀ ಮನಮೋಹಕ ಸಿಂಗ್ ರವರ ಅವಧಿಯಲ್ಲಿ ನಿರುದ್ಯೋಗ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿಂದ ಕಾನೂನಿನ ಚೌಕಟ್ಟಿನ ಒಳಗೆ ಜಾರಿಗೆ ತಂದಿರುವ ಕಾನೂನು ಇದಾಗಿದೆ ,
ಇಂದಿನ ದಿನಗಳಲ್ಲಿ ನರೇಂದ್ರ ಮೋದಿಯವರ ಅಧಿಕಾರತ್ವದ ಅವಧಿಯಲ್ಲಿ ಇದರ ರಾಜಕೀಯವಾಗಿ ದುರುಪಯೋಗ ಪಡಿಸಿಕೊಳ್ಳುವ ರೀತಿಯಲ್ಲಿ ನಡೆದುಕೊಳ್ಳುತ್ತಿಧದಾರೆ ಎಂದು
ರಾಜ್ಯ ಪ್ರಚಾರ ಸಮಿತಿ ಮುಖ್ಯ ಸಂಯೋಜಕರಾದ ಕಲಾಸಾಮ್ರಾಟ್ ಎಸ್ ನಾರಾಯಣ್ ರವರು ತಿಳಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ
ಉದ್ಯಮಿ ಪೊನ್ನಾಚಿ ರಂಗಸ್ವಾಮಿಯವರು ಕಾರ್ಯಕರ್ತರು ಪಂಚಾಯಿತಿ ಮಟ್ಟದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಅವರ ಜೊತೆಯಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರ ತೆಗೆದುಕೊಂಡ ತಪ್ಪು ನಿರ್ದಾರಗಳ ಬಗ್ಗೆ ಹಾಗೂ ಪಕ್ಷದ ಹೋರಾಟದ ಬಗ್ಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಮುಂದುವರಿಯಬೇಕು ಎಂದರು.

ಇದೇ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ತಾಲ್ಲೂಕು ಅಧ್ಯಕ್ಷರಾದ ರಾಚಪ್ಪ , ಮದುವನಹಳ್ಳಿ ಶಿವಕುಮಾರ್ ,ಚಾಮುಲ್ ನಂಜುಂಡಸ್ವಾಮಿ , ಈಶ್ವರ್ , ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷರಾದ ಚಂದ್ರು ,ಚಾಮುಲ್ ನಿರ್ದೇಶಕರಾದ ತಾರೀಖ್ ಅಹ್ಮದ್ ,ಟಿ ಎ ಪಿ ಎಮ್ ಸಿ ಅಧ್ಯಕ್ಷರಾದ ಗೊವಿಂದ್ , ಮುಖಂಡರಾದ ಚಾಂದ್ ಪಾಷ , ಪುಟ್ಟಸ್ವಾಮಿ ,ಜಿಲ್ಲಾ ಪ್ರಚಾರ ಸಮಿತಿಯ ಉಪಾಧ್ಯಕ್ಷರಾದ ಸಿದ್ದರಾಜು ,ಮುತ್ತಣ್ಣ ಚೇತನ್ ದೊರೈರಾಜು , ಷಫಿಉಲ್ಲಾ , ಪ್ರವೀಣ್ ಕುಮಾರ್ ,ದಾಸಪ್ಪ ಪೊನ್ನಾಚಿ, ಗ್ರಾಮ ಪಂಚಾಯತಿ ಸದಸ್ಯರಾದ ಶಿವಕುಮಾರ್ ಗೋವಿಂದ್ , ನವೀದ್ ಅಹ್ಮದ್ ,ರವಿಕುಮಾರ್ ,ಮಂಜು ಶೆಟ್ಟಳ್ಳಿ ,ದಂಟಳ್ಳಿ ಶಿವು. ಶ್ರೀರಂಗಶೇಟ್ರು , ತಾಲ್ಲೂಕು ಪ್ರಚಾರ ಸಮಿತಿಯ ಅಧ್ಯಕ್ಷರಾದ ಪ್ರಸಾದ್ , ಜಿಲ್ಲಾ ಪ್ರಚಾರ ಸಮಿತಿಯ ಸಂಚಾಲಕರಾದ ಶಿವಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Share This Article
Leave a Comment