Breaking News

೧೮೮೬ ರಲ್ಲಿ ವಿಶ್ವಕಾರ್ಮಿಕರು ಒಂದಾಗಿ ಪಡೆದ ೮ ತಾಸುಗಳ ಕೆಲಸದ ಮಿತಿಯನ್ನುಮೋದಿ ಸರ್ಕಾರ ಗಾಳಿಗೆ ತೂರಿರುವುದು ಖಂಡನೀಯ: ಭಾರಧ್ವಾಜ್

Modi government's flouting of 8-hour workday, which was unanimously agreed upon by workers worldwide in 1886, is condemnable: Bhardwaj
Screenshot 2025 07 08 13 51 20 90 E307a3f9df9f380ebaf106e1dc980bb67272014208009964563 712x1024

ಗಂಗಾವತಿ: ಭಾರತದಲ್ಲಿ ಕಾರ್ಮಿಕರನ್ನು ಸಮಯದ ಮಿತಿ ಇಲ್ಲದೇ ದುಡಿಸಿಕೊಳ್ಳಲು ಪ್ರಯತ್ನ ಮಾಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಧೋರಣೆಯನ್ನು ಧಿಕ್ಕರಿಸಿ ಜುಲೈ-೯ರಂದು ನಡೆಯುವ ರಾಷ್ಟçವ್ಯಾಪಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದಲ್ಲಿ ಕಾರ್ಮಿಕರೆಲ್ಲರೂ ಪಾಲ್ಗೊಂಡು ಪ್ರತಿಭಟಿಸಬೇಕೆಂದು ಕ್ರಾಂತಿಚಕ್ರ ಬಳಗದ ರಾಜ್ಯಾಧ್ಯಕ್ಷರಾದ ಭಾರಧ್ವಾಜ್ ಪ್ರಕಟಣೆಯಲ್ಲಿ ಕರೆ ನೀಡಿದ್ದಾರೆ.
೧೮೮೬ ರಲ್ಲಿ ವಿಶ್ವದ ಕಾರ್ಮಿಕರೆಲ್ಲ ಒಂದಾಗಿ ಅನೇಕ ತ್ಯಾಗ, ಬಲಿದಾನಗಳಿಗೆ ಒಳಪಟ್ಟು ಕಾರ್ಮಿಕರ ಕೆಲಸದ ಅವಧಿಯನ್ನು ೮ ತಾಸುಗಳಿಗೆ ಮಿತಿಗೊಳಪಡಿಸಲು ಹೋರಾಟ ಮಾಡಿ ಯಶಸ್ವಿಯಾಗಿದ್ದಾರೆ. ಆದರೆ ಆ ನೀತಿ ಕೆಲವು ಕಾರ್ಖಾನೆಗಳಿಗೆ ನಡೆಯುವುದಿಲ್ಲ. ಉದಾಹರಣೆಗೆ ಅಕ್ಕಿಗಿರಣಿಯಲ್ಲಿ ಕಾರ್ಮಿಕರನ್ನು ೧೨ ತಾಸುಗಳ ಕಾಲ ದುಡಿಸಿಕೊಳ್ಳಲಾಗುತ್ತಿದೆ. ಈಗ ಸರ್ಕಾರಗಳು ಕಾರ್ಮಿಕರಿಗೆ ೧೨ ತಾಸುಗಳ ಕೆಲಸದ ಮಿತಿಯನ್ನು ಜಾರಿಗೆ ತಂದರೆ ಮಾಲಿಕರು ಕಾರ್ಮಿಕರನ್ನು ೨೦ ತಾಸುಗಳವರೆಗೆ ದುಡಿಸಿಕೊಳ್ಳುವ ಸಂಭವವಿದೆ. ಇದರಿಂದಾಗಿ ಕಾರ್ಮಿಕರ ಹೆಂಡತಿ, ಮಕ್ಕಳಿಗೆ ತೊಂದರೆಯುAಟಾಗಲಿದೆ. ಕಾರ್ಮಿಕರು ನಡೆಸುತ್ತಿರುವ ಈ ಹೋರಾಟ ನ್ಯಾಯಯುತ ಹೊರಾಟವಾಗಿದ್ದು, ದೇಶಕ್ಕಾಗಿ ದುಡಿಯುವ ಕಾರ್ಮಿಕರು ಒಗ್ಗಟ್ಟಾಗಿ ದೇಶ ಕಟ್ಟುತ್ತಾರೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾಗಳು ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಬೇಕೆಂದು ಭಾರಧ್ವಾಜ್ ಆಗ್ರಹಿಸಿದ್ದಾರೆ.

ಜಾಹೀರಾತು

About Mallikarjun

Check Also

screenshot 2025 10 15 21 38 17 03 6012fa4d4ddec268fc5c7112cbb265e7.jpg

ಸಂಘಟಕಿ ಜ್ಯೋತಿ ಗೊಂಡಬಾಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ

Organizer Jyoti Gondbal is the District Women's Congress President. ಕೊಪ್ಪಳ: ಜಿಲ್ಲೆಯ ಆಡಳಿತರೂಢ ಕಾಂಗ್ರೆಸ್ ಪಕ್ಷದ ಮಹಿಳಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.