ಜಾಹೀರಾತು

Daily newspaper editor Mahadevayya passes away
ಜಾಹೀರಾತು


ಮಳವಳ್ಳಿ: ಸಮೀಪದ ಶಿರಮಹಳ್ಳಿ ಗ್ರಾಮದನಿವಾಸಿ ಹಾಗೂ ಆಕ್ರಂದನ ದಿನಪತ್ರಿಕೆಯ ಸಂಪಾದಕ ಮಹದೇವಯ್ಯ(59) ಅನಾರೋಗ್ಯದ ಹಿನ್ನೆಲೆಯಲ್ಲಿ ಶನಿವಾರ ಮುಂಜಾನೆ ನಿಧನರಾಗಿದ್ದಾರೆ.
ಮೃತರಿಗೆ ಪತ್ನಿ ಹಾಗೂ ಓರ್ವಪುತ್ರ, ಸಹೋದರಿಯರು ಇದ್ದಾರೆ. ಶನಿವಾರ ಮಧ್ಯಾಹ್ನ ಮೃತರ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಅಂತಿಮದರ್ಶನ: ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಸಿ.ಸಿದ್ದರಾಜು, ಪ್ರಧಾನ ಕಾರ್ಯದರ್ಶಿ ಎ.ಬಿ.ಚೇತನ್ ಕುಮಾರ್,ಜಿಲ್ಲಾ ನಿರ್ದೇಶಕ ಎಚ್.ಉಮೇಶ್ ಮಾಳಿಗೆ, ಹಿರಿಯಪತ್ರಕರ್ತರಾದ ಎ.ಎನ್.ಪ್ರಭಾಕರ್, ಎಂ.ಮಲ್ಲಿಕಾರ್ಜುನಸ್ವಾಮಿ, ಎಂ.ನಾಗೇಶ್,ಜಯರಾಜು, ಶಿವಕುಮಾರ್, ಸಿದ್ದಾರ್ಥ,ಲಿಂಗರಾಜು, ಶಿವಸ್ವಾಮಿ, ರಾಮಕೃಷ್ಣ, ವೇಣುಗೋಪಾಲ್, ಸೇರಿದಂತೆ ಹಲವು ಪತ್ರಕರ್ತರು ಹಾಗೂ ಮುಖಂಡರುಗಳು ಅಂತಿಮ ದರ್ಶನ ಪಡೆದರು.
Total Views:
0
