Breaking News

ದೇವದಾಸಿ ಮಹಿಳಾ ಕುಟುಂಬದ ಗಣತಿ ಸಾಲದ ಸಬ್ಸಿಡಿ ಹೆಚ್ಚಳಕ್ಕೆ ಅನುದಾನವಿಲ್ಲದ ಬಜೆಟ್-ವಿಮೋಚನಾ ಸಂಘದ ಟೀಕೆ.

The budget-free liberation association criticized the increase in the subsidy for the census loan for Devadasi women’s families.

ಜಾಹೀರಾತು
Screenshot 2025 03 10 16 38 19 33 E307a3f9df9f380ebaf106e1dc980bb6

ಗಂಗಾವತಿ: ಮುಖ್ಯಮಂತ್ರಿ ಸಿದ್ಧರಾಮಯ್ಯರವರು ಮೊನ್ನೆ ವಿಧಾನಸಭೆಯಲ್ಲಿ ಮಂಡಿಸಿದ ೪.೦೯ ಲಕ್ಷ ಕೋಟಿ ರೂ. ಗಳ ಬಜೆಟ್ ಸಮಾಜದ ಅತ್ಯಂತ ಕಟ್ಟಕಡೆಯ ಮಹಿಳೆಯರಾದ ತೀವ್ರತರದ ಸಾಮಾಜಿಕ ದಬ್ಬಾಳಿಕೆಗೊಳಗಾದ, ದೌರ್ಜನ್ಯದ ದೇವದಾಸಿ ಪದ್ಧತಿಯಿಂದ ನಲುಗಿದ ಈ ಮಹಿಳೆಯರ ಕುಟುಂಬಗಳನ್ನು ನಿರ್ಲಕ್ಷಿಸಿದ್ದು, ಇದೊಂದು ನಿರಾಶದಾಯಕ ಬಜೆಟ್ ಆಗಿದೆ ಎಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯ ಅಧ್ಯಕ್ಷರಾದ ಜಿ. ಹುಲಿಗೆಮ್ಮ ಅವರು ಪ್ರಕಟಣೆಯಲ್ಲಿ ಆಕ್ರೊಶ ವ್ಯಕ್ತಪಡಿಸಿದರು.
ದೇವದಾಸಿ ಮಹಿಳೆಯರ ಕುಟುಂಬದ ಸದಸ್ಯರ ಗಣತಿಗೆ ಮತ್ತು ಆರ್ಥಿಕ ಸಬಲೀಕರಣಕ್ಕೆ ೫ ಲಕ್ಷ ರೂ.ಗಳ ಸಹಾಯಧನ ಹಾಗೂ ಐದು ಎಕರೆ ಭೂಮಿ ನೀಡಿಕೆ ವಿಚಾರ ಈಗಲೂ ಆದ್ಯತೆಯಾಗದಿರುವುದು ವಿಷಾದಕರವಾಗಿದೆ. ಬೆಲೆ ಏರಿಕೆಯ ಜೊತೆ ೧.೧೬ ಲಕ್ಷ ಕೋಟಿ ರೂಪಾಯಿ ಸಾಲದ ಬರೆಯನ್ನು ರಾಜ್ಯದ ಜನತೆಯ ಜೊತೆನಾವುಅನುಭವಿಸಬೇಕಾಗಿದೆಯೆಂದು ಬೇಸರ ವ್ಯಕ್ತಪಡಿಸಿದರು. ಕೂಡಲೆ ಸರ್ಕಾರ ದೇವದಾಸಿಯರ ಸಬಲೀಕರಣಕ್ಕಾಗಿ ಅನುದಾನವನ್ನು ಇದೇ ಬಜೆಟ್‌ನಲ್ಲಿ ಪ್ರಕಟಿಸಬೇಕೆಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು.

About Mallikarjun

Check Also

screenshot 2025 10 15 21 38 17 03 6012fa4d4ddec268fc5c7112cbb265e7.jpg

ಸಂಘಟಕಿ ಜ್ಯೋತಿ ಗೊಂಡಬಾಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ

Organizer Jyoti Gondbal is the District Women's Congress President. ಕೊಪ್ಪಳ: ಜಿಲ್ಲೆಯ ಆಡಳಿತರೂಢ ಕಾಂಗ್ರೆಸ್ ಪಕ್ಷದ ಮಹಿಳಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.