Breaking News

ತಿಪಟೂರುನಗರಸಭೆಯಲ್ಲಿ ನಕಲಿ ಖಾತೆ ಸೃಷ್ಟಿಸಿ, ಖಾತೆ ಬದಲಾವಣೆ ಮಾಡಿ ನಗರಸಭೆಗೆ ಮತ್ತು ಸರ್ಕಾರಕ್ಕೆ ವಂಚನೆ ಆರೋಪ.

He created a fake account in Tipatur Municipal Council, changed the account and accused the Municipal Council and the government of fraud.

ಜಾಹೀರಾತು

ತಿಪಟೂರು ನಗರಸಭಾ ಉಪಾಧ್ಯಕ್ಷೆ ಮೇಘಶ್ರೀ ಕೆ.ಎಸ್.ಭೂಷಣ್ ಸೇರಿದಂತೆ ನಗರಸಭೆ ಅಧಿಕಾರಿಗಳು ಶಾಮೀಲಾಗಿ,ಕೋಟ್ಯಾಂತರ ಆಸ್ತಿ ಗುಳುಂ:ಲೋಕಾಯುಕ್ತಕ್ಕೆ ದೂರು.

ನಗರಸಭೆ ಉಪಾಧ್ಯಕ್ಷೆ ಮೇಘಶ್ರೀ ಪತಿ ಸುಜಿತ್ ಭೂಷಣ್ ಅಧಿಕಾರದಲ್ಲಿ ಹಸ್ತಕ್ಷೇಪ.ನಗರಸಭಾ ಉಪಾಧ್ಯಕ್ಷ ಮತ್ತು ಸದಸ್ಯತ್ವದಿಂದ ವಜಾ ಮತ್ತು ರದ್ದು ಮಾಡುವಂತೆ ಹಾಗೂ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತಕ್ಕೆ ಮೊರೆ.

ತಿಪಟೂರಿನ ವಾರ್ಡ್ ನಂಬರ್ 17ರಲ್ಲಿ, 17/12 ಪಿ 51 ರಲ್ಲಿ ಸುಮಾರು ಏಳರಿಂದ ಎಂಟು ನಿವೇಶನಗಳಲ್ಲಿ ನಕಲಿ ಖಾತೆ ಸೃಷ್ಟಿಸಿ,ಬದಲಾವಣೆ ಮಾಡಿರುವ ಶಂಕೆ.

ಈ ನಿವೇಶನಗಳ ಪುಸ್ತಕ ನಗರಸಭೆ ಕಚೇರಿಯಿಂದ ರಾತ್ರೋರಾತ್ರಿ ಮಾಯ ತನಿಖೆಗೆ ಲೋಕಾಯುಕ್ತರಗೆ ದೂರು.

ತಿಪಟೂರು: ನಗರಸಭೆ ಉಪಾಧ್ಯಕ್ಷೆ ಮೇಘಶ್ರೀ ಕೆ.ಎಸ್.ಭೂಷಣ್ ಸೇರಿದಂತೆ ನಗರಸಭೆ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡು ನಕಲಿ ಖಾತೆ ಸೃಷ್ಟಿಸಿ,ಖಾತೆ ಬದಲಾವಣೆ ಮಾಡಿಕೊಂಡು ಸರ್ಕಾರಕ್ಕೆ ಮತ್ತು ನಗರಸಭೆಗೆ ಕೋಟ್ಯಂತರ ರೂಗಳನ್ನು ವಂಚಿಸಿದ್ದು, ಕೂಡಲೇ ತಾವುಗಳು ಉಪಾಧ್ಯಕ್ಷೇ ಮತ್ತು ಸದಸ್ಯತ್ವದಿಂದ ಅನರ್ಹಗೊಳಿಸಿ,ವಜಾ ಮಾಡುವಂತೆ ಹಾಗೂ ಈ ನಕಲಿ ಖಾತೆಗೆ ಸಹಕರಿಸಿದ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಿ ಕಾನೂನುಕ್ರಮ ಜರುಗಿಸುವಂತೆ ಒತ್ತಾಯಿಸಿ ಮಾರನಗೆರೆ ನಿವಾಸಿ ಕೆ.ಯು. ಶಿವಲಿಂಗಮೂರ್ತಿ ಲೋಕಾಯುಕ್ತ ರವರಿಗೆ ದೂರು ಸಲ್ಲಿಸಿದರು.

ನಗರದ ವಾರ್ಡ್ ನಂಬರ್ 17ರ ಶಾರದನಗರದಲ್ಲಿರುವ 17 / 12 ಪಿ. 51 ಖಾತೆಯ ನಿವೇಶನವು ಮೂಲ ಎಂ.ಎಸ್. ಉಮಾ ಎಂಬುವರಿಗೆ ಸೇರಿದ್ದು,ಈ ಖಾತೆಯನ್ನು ನಗರಸಭೆ ಉಪಾಧ್ಯಕ್ಷೆ ಮೇಘಶ್ರೀ, ತನ್ನ ಗಂಡ ಸುಜಿತ್ ಭೂಷಣ್ ಅಧಿಕಾರ ದುರುಪಯೋಗಪಡಿಸಿಕೊಂಡು, ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿ, ನಗರಸಭೆ ಅಧಿಕಾರಿಗಳೊಂದಿಗೆ ಶಾಮೀಲಾಗಿ ನಕಲಿ ಈ ಖಾತೆಯನ್ನು ಸೃಷ್ಟಿಸಿ,ನಕಲಿ ದಾಖಲೆಗಳೊಂದಿಗೆ, ಪೌರಾಯುಕ್ತರ ಸಹಿಯನ್ನು ನಕಲುಗೊಳಿಸಿ, ಖಾತೆ ಬದಲಾವಣೆ ಮಾಡಿ, ಮೇಘಶ್ರೀ ಕೆ.ಎಸ್. ಭೂಷಣ್ ರವರಿಗೆ ಬದಲಾಯಿಸಿದ್ದಾರೆ. ಇದೇ ರೀತಿ ಈ ನಿವೇಶನಗಳಲ್ಲಿ ಸುಮಾರು ಏಳರಿಂದ ಎಂಟು ನಿವೇಶಗಳನ್ನು ಇದೇ ರೀತಿ ಬದಲಾಯಿಸಿಕೊಂಡು, ನಗರಸಭೆಯಲ್ಲಿ ಇದ್ದ ಈ ನಿವೇಶನದ ಪುಸ್ತಕವನ್ನು ರಾತ್ರೋ ರಾತ್ರಿ ಮಾಯವಾಗಿದ್ದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಆದ್ದರಿಂದ ತಾವುಗಳು ಕೂಡಲೇ ಈ ನಕಲಿ ಖಾತೆ ಸೃಷ್ಟಿಸಿದವರು ಮತ್ತು ನಗರಸಭೆ ಉಪಾಧ್ಯಕ್ಷರ ಮೇಲೆ ಕಾನೂನು ಕ್ರಮ ಜರುಗಿಸಿ, ಸದಸ್ಯತ್ವವನ್ನು ರದ್ದುಗೊಳಿಸಿ, ತನಿಖೆ ಆದೇಶ ಮಾಡುವಂತೆ ಸಾರ್ವಜನಿಕರ ಒತ್ತಾಯವಾಗಿದ್ದು, ಲೋಕಾಯುಕ್ತರ ಕುಂದು ಕೊರತೆ ಮತ್ತು ಸಮಸ್ಯೆಗಳ ಆಹವಾಲು ಸಭೆಯಲ್ಲಿ ಒತ್ತಾಯಿಸಿ,ದೂರು ಸಲ್ಲಿಸಿದ್ದಾರೆ.

About Mallikarjun

Check Also

ಕಮಲ್ ಹಾಸನ್ ಕ್ಷಮೆ ಕೇಳುವವರೆಗೂಅವರ ಚಿತ್ರಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು: ಬಳ್ಳಾರಿ ರಾಮಣ್ಣ ನಾಯಕ

Kamal Haasan’s films should be banned in the state until he apologizes: Ballari Ramanna Nayak …

Leave a Reply

Your email address will not be published. Required fields are marked *