ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ದೇವಸ್ಥಾನಗಳಿಗೆ ವಿಶೇಷ ಅನುದಾನ

Mallikarjun
1 Min Read

Special grant to temples by Dharmasthala Village Development Scheme

“ಕಾಳಪುರ ಗ್ರಾಮದ ಈರಣ್ಣ ದೇವಸ್ಥಾನದ ಅಭಿವೃದ್ಧಿಗೆ ಪೂಜ್ಯರು ಡಾಕ್ಟರ ಡಿ ವೀರೇಂದ್ರ ಹೆಗ್ಗಡೆ ಡಿಡಿ ವಿತರಣೆ”

ಕೊಟ್ಟೂರು ತಾಲೂಕಿನ ಕಾಳಪುರ ಗ್ರಾಮದಲ್ಲಿ  ಯೋಜನಾಧಿಕಾರಿಗಳು ನವೀನ್ ಕುಮಾರ್ ಅವರ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ದೇವಸ್ಥಾನದ ಅಭಿವೃದ್ಧಿಗೆ ಪೂಜ್ಯರು ಡಾಕ್ಟರ ಡಿ ವೀರೇಂದ್ರ ಹೆಗ್ಗಡೆ ಯವರು ಕಾಳಪುರ ಗ್ರಾಮದಲ್ಲಿ ಈರಣ್ಣ ದೇವಸ್ಥಾನಕ್ಕೆ ಕಳುಹಿಸಿದ ಡಿಡಿ ವಿತರಣೆ ಮಾಡಿದರು.

ಕಳೆದ 3 ವರ್ಷ ನಲ್ಲಿ ಸುಮಾರು ತಾಲೂಕಿನಲ್ಲಿ 23 ದೇವಸ್ಥಾನ ಗಳಿಗೆ 33 ಲಕ್ಷ ಮೊತ್ತದ ಹಣ ವಿತರಣೆ ಮಾಡಿರುವುದಾಗಿ ತಿಸಿದರು .ದೇವಸ್ಥಾನಗಳ ಮಠ ಸಮುದಾಯ ಭವನ ಚರ್ಚ್ ಮಸೀದಿಗಳ ಮತ್ತು ಶಾಲೆಗಳ ದುರಸ್ತಿ ಕಾರ್ಯ ಅಭಿವೃದ್ಧಿ ಗಳಿಗೆ ಪೂಜ್ಯರು ಹಣದ ಸಹಾಯವನ್ನು ಟ್ರಸ್ಟಿ ಗಳ ಬೇಡಿಕೆ ಪರಿಶೀಲನೆ ಮಾಡಿ ಸ್ಥಳೀಯ ಯೋಜನಾ ಕಚೇರಿಗೆ ಕಳುಹಿಸು ದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕರು ಕೆ ಎಂ ಗೀತಾ ಸೇವ ಪ್ರತಿನಿಧಿ ರಾಧಾ ಗ್ರಾಹಕ ಸೇವಾದಾರರೂ ಶಿಲ್ಪ ದೇವಸ್ಥಾನ ಕಮಿಟಿ ಅಧ್ಯಕ್ಷರು ಹನುಮಂತಪ್ಪ ಕಜಾನ್ಸಿ ಈರಪ್ಪ ಊರಿನ ಹಿರಿಯರು ಉಪಸ್ಥಿತರಿದ್ದರು

Total Views: 0
Share This Article