ಆರೋಗ್ಯ–ಪರಿಸರ ಕಾಳಜಿಯೊಂದಿಗೆ ‘ಸಂಭ್ರಮ ಶನಿವಾರ’ ಆಚರಣೆ

H.Mallikarjun
H.Mallikarjun - Kalyanasiri
1 Min Read

Celebrating 'Sambhram Shanivar' with health and environmental concerns




ಆರೋಗ್ಯ–ಪರಿಸರ ಕಾಳಜಿಯೊಂದಿಗೆ ‘ಸಂಭ್ರಮ ಶನಿವಾರ’ ಆಚರಣೆ

ಜಾಹೀರಾತು

ಇಂಧರಗಿ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯ, ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಅರಿವು


ಗಂಗಾವತಿ, ಆ.23: ಸಮೀಪದ ಇಂಧರಗಿ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ‘ಸಂಭ್ರಮ ಶನಿವಾರ’ ಕಾರ್ಯಕ್ರಮವನ್ನು ಆರೋಗ್ಯ ಹಾಗೂ ಪರಿಸರ ಕಾಳಜಿಯೊಂದಿಗೆ ವಿಶೇಷವಾಗಿ ಆಚರಿಸಲಾಯಿತು.
ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಜೀವನಶೈಲಿ, ವೈಯಕ್ತಿಕ ಹಾಗೂ ಸಾರ್ವಜನಿಕ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ವಿವಿಧ ಸೃಜನಾತ್ಮಕ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು.
ಶಾಲೆಯ ಹಿರಿಯ ಮುಖ್ಯಗುರುಗಳು ಹಾಗೂ ಶಿಕ್ಷಕ–ಶಿಕ್ಷಕಿಯರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಆರೋಗ್ಯ, ಸ್ವಚ್ಛತೆ, ಪರಿಸರ ಸಂರಕ್ಷಣೆ ಸೇರಿದಂತೆ ಸಮಾಜಮುಖಿ ವಿಷಯಗಳ ಕುರಿತು ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಡಿಎಂಸಿ ಅಧ್ಯಕ್ಷ ಡಾ. ಅಮರೇಶ ಕುಂಬಾರ, ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಆರೋಗ್ಯ, ಸ್ವಚ್ಛತೆ, ಪರಿಸರ ಸಂರಕ್ಷಣೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಅರಿವು ಮತ್ತು ಜವಾಬ್ದಾರಿಯ ಮನೋಭಾವ ಬೆಳೆಸುವುದು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.
ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಸಾಮಾಜಿಕ ಕಾಳಜಿ ಹಾಗೂ ಪರಿಸರದ ಬಗ್ಗೆ ಹೊಣೆಗಾರಿಕೆ ಮೂಡಿಸುವ ಇಂತಹ ಸೃಜನಾತ್ಮಕ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷೆ ಶಿಲ್ಪಾ ಇಂದ್ರೇಶ್ ಕೇರಹಳ್ಳಿ, ಸದಸ್ಯರಾದ ರಾಮಣ್ಣ ಹಿರೇಕುರಬರ, ಹನುಮೇಶ ಮಡಿವಾಳರ, ಇಂದ್ರಪ್ಪ ಪೂಜಾರ, ಸುಜಾತಾ ಗವಿಸಿದ್ದಪ್ಪ ಹಲಿಗೇರಿ, ರೇಣುಕಾ ಮಂಜುನಾಥ ಹೂಗಾರ, ಯಂಕಮ್ಮ ಮಾರುತಿ ಹಡಪದ, ಅನ್ನಪೂರ್ಣಮ್ಮ ಹನುಮೇಶ್ ಕೀಡಾದಳ, ಪವಿತ್ರ ದುರ್ಗಪ್ಪ ಹರಿಜನ, ಸಿದ್ದಲಿಂಗಮ್ಮ ಎಮ್ಮಿ, ಮಂಜುಳಾ ಶಿರೂರ, ಶರಣಮ್ಮ ಅಡ್ಡಿ, ನಾಗಪ್ಪ ಭೋವಿ, ಹನುಮಪ್ಪ ಗುತ್ತೂರು, ಹುಸೇನ್ ಬಾಷಾ ಬೊಮ್ಮನಾಳ, ಪರಶುರಾಮ್ ಡೊಂಕ್ರು ಹಾಗೂ ಮಲ್ಲಪ್ಪ ಬೇಟಗೇರಿ ಸೇರಿದಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Total Views: 0
ಜಾಹೀರಾತು
Share This Article