
ಯಶಸ್ವಿನಿ ತರಬೇತಿ ಕಾರ್ಯಕ್ರಮ.
Yashaswini Training Program.

ಕೊಪ್ಪಳ: ಸಹಕಾರ ಇಲಾಖೆಯಿಂದ ಜಿಲ್ಲಾ ಆಡಳಿತ ಭವನ ಆಡಿಟೋರಿಯoಹಾಲ್ ಕೊಪ್ಪಳ ಇದರಲ್ಲಿ ಯಶಸ್ವಿನಿ ಯೋಜನೆಯ ಕುರಿತು ಒಂದು ದಿನ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದ್ದು, ಕೊಪ್ಪಳ ಸಹಕಾರಿ ವಿನಿಯನ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸಹಕಾರ ಇಲಾಖೆಯ ಮುಖ್ಯ ಅಧಿಕಾರಿಗಳು, ನೇತೃತ್ವದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಹಕಾರ ಸಂಘಗಳ ಉಪ ನಿಬಂಧಕರಾದ ರಮೇಶ್ ಮಾತನಾಡಿ, ಸಹಕಾರ ಇಲಾಖೆಯಿಂದ, ರೈತರು ಮತ್ತು ಸಾರ್ವಜನಿಕರು ಹತ್ತಿರದಿಂದ ಸಹಕಾರ ಸಂಘದಲ್ಲಿ ವ್ಯವಹಾರಗಳನ್ನು ಮಾಡುತ್ತಾರೆ, ಅದರಿಂದ ನೇರವಾಗಿ ಸೌಲಭ್ಯವನ್ನು ಕಲ್ಪಿಸಬಹುದು, ಇದೇ ವರ್ಷ ಸಂಘದ ಕೋಡ್ ಮೂಲಕ ಆನ್ಲೈನ್ ಮೂಲಕ ಯಶಸ್ವಿನಿ ದಾಖಲಾತಿಗಳೊಂದಿಗೆ ಅರ್ಜಿಯನ್ನು ನೇರವಾಗಿ ಸಂಘದಲ್ಲಿ ಮುಖ್ಯ ಕಾರ್ಯನಿರ್ವಕರು ನಿಮ್ಮ ಗಣಕಯಂತ್ರದ ಮೂಲಕ ಅರ್ಜಿಯನ್ನು ಸಲ್ಲಿಸಬಹುದು, ಈ ಒಂದು ತರಬೇತಿಯಿಂದ ಸದುಪಯೋಗವನ್ನು ಪಡೆದುಕೊಂಡು, ರೈತರಿಗೆ ಮತ್ತು ಸಾರ್ವಜನಿಕರಿಗೆ ಸಂಘದಿಂದ ಸೌಲಭ್ಯವನ್ನು ಕೊಟ್ಟಂತೆ ಆಗುತ್ತದೆ ಎಂದರು. ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘಗಳು, ಪ್ರಾಥಮಿಕ ಸಹಕಾರ ಸಂಘಗಳು, ಸೌಹಾರ್ದ ಸರಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕರು, ಎಂ ಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಕೊಪ್ಪಳ, ಸರಕಾರ ಇಲಾಖೆ ಮುಖ್ಯಅಧಿಕಾರಿಗಳು, ಸಹಾಯಕರು ಭಾಗಿಯಾಗಿದ್ದರು.




