
ಭೀಮ್ ಸೇನ ಸಮಿತಿ(ರಿ) ಕೊಪ್ಪಳ ಜಿಲ್ಲಾ ಘಟಕ ಹಾಗೂ ವಿವಿಧ ತಾಲೂಕ ಪದಾಧಿಕಾರಿಗಳು ನೇಮಕ
Bhim Sen Samiti (R) Koppal District Unit and various Taluk office bearers appointed

ಕೊಪ್ಪಳ,ಇಲ್ಲಿನ ಪ್ರವಾಸ ಮಂದಿರದಲ್ಲಿ ಭೀಮಸೇನ ಸಮಿತಿ ಬೆಂಗಳೂರು ರಾಜ್ಯಧ್ಯಾಕ್ಷರಾದ ಎಂ.ಡಿ. ಬೋಜರಾಜ ಬೆಂಗಳೂರು ಮತ್ತು ತಿಮ್ಮಣ್ಣ, ಸವಿತಾ ಮೇಡಂ ಇವರ ಸಮ್ಮುಖದಲ್ಲಿ ಕೊಪ್ಪಳ ಜಿಲ್ಲೆಯ ಮತ್ತು ತಾಲೂಕು ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಎಂಡಿ ಭೋಜರಾಜ ಅವರು ಸಂಘದ ತತ್ವ ಸಿದ್ಧಾಂತಗಳನ್ನು ಪದಾಧಿಕಾರಿಗಳು ಅಳವಡಿಸಿಕೊಳ್ಳುವುದರ ಮೂಲಕ ಸಂಘಟನೆಯ ಬಲವರ್ಧನಿಗೆ ಮುಂದಾಗಬೇಕು. ವಿಶೇಷವಾಗಿ ಸರ್ಕಾರದಿಂದ ದೊರೆಯಬಹುದಾದ ಸೌಲಭ್ಯಗಳನ್ನು ಸಮಾಜ ಬಾಂಧವರಿಗೆ ತಲ್ಪಿಸುವಲ್ಲಿ ಪ್ರಾಮಾಣಿಕ ಸೇವೆಯ ಬದ್ಧರಾಗಬೇಕು. ಶಿಕ್ಷಣ ಉದ್ಯೋಗ ಹಾಗೂ ದಲಿತರ ಮೇಲೆ ನಡೆಯುವ ದೌರ್ಜನ್ಯಗಳಿಗೆ ಧ್ವನಿ ಎತ್ತಬೇಕು ಎಂದು ತಿಳಿಸಿ ಜಿಲ್ಲೆ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳ ನೇಮಕಾತಿ ಆದೇಶ ಪತ್ರವನ್ನು ನೀಡಿದರು.




