Breaking News

ಊಟದ ಜೋಳ ಮತ್ತು ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಆಗ್ರಹ

Demand for a purchasing center for table corn and maize

Screenshot 2025 09 17 21 50 47 41 6012fa4d4ddec268fc5c7112cbb265e77458387767785448124

ಕೊಟ್ಟೂರು ಸ 16: ಕೊಟ್ಟೂರು ತಾಲೂಕು ಕಾರ್ಯಾಲಯದ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷರಾದ ಎನ್ ಭರಮಣ್ಣನವರು ಊಟದ ಜೋಳ ಮೆಕ್ಕೆಜೋಳ ಖರೀದಿ ಕೇಂದ್ರ ಶೀಘ್ರದಲ್ಲಿ ತೆರೆಯಬೇಕು. ಕೊಟ್ಟೂರು ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪ್ರಸಕ್ತ 2025-26ನೇ ಸಾಲಿನಲ್ಲಿ ಕೊಟ್ಟೂರು ತಾಲೂಕಿನ ರೈತರು ಊಟದ ಜೋಳ, ಮೆಕ್ಕೆಜೋಳ ಬೆಳೆದಿದ್ದು ಇಂದಿನ ವರ್ಷ ಸರ್ಕಾರದಿಂದ ರೂ 3370 ಬೆಂಬಲ ಬೆಲೆ ಖರೀದಿಸಿದ್ದು, ಆದರೆ ಈ ವರ್ಷ ಇನ್ನೂ ಖರೀದಿ ಕೇಂದ್ರ ತೆರೆದಿರುವುದಿಲ್ಲ. ಎಪಿಎಂಸಿ ಮಾರುಕಟ್ಟೆಯ ಖರೀದಿದಾರರು ಕ್ವಿಂಟಲ್ಲಿಗೆ 1500 ರಿಂದ 2000 ರೂ. ಬರೆಯುತ್ತಿರುವುದರಿಂದ ರೈತರು ತುಂಬಾ ನಷ್ಟ ಅನುಭವಿಸುತ್ತಿದ್ದಾರೆ ಕಾರಣ ಕೂಡಲೇ ಖರೀದಿ ಕೇಂದ್ರ ತೆರೆದು ರೈತರು ಬೆಳೆದ ಊಟದ ಜೋಳ, ಮೆಕ್ಕೆಜೋಳ ಖರೀದಿಸಿ ಮತ್ತು ಕೊಟ್ಟೂರ ತಾಲೂಕಿನ ಈರುಳ್ಳಿ ಬೆಳೆಗಾರರಿಗೆ ಅನ್ಯಾಯವಾಗಿರುವುದನ್ನು ಗಮನಿಸಿ ಈರುಳ್ಳಿ ಬೆಳೆದ ರೈತರ ಹೊಲಕ್ಕೆ ಗ್ರಾಮ ಲೆಕ್ಕಾಧಿಕಾರಿಗಳ ಕಳುಹಿಸಿ ಸರ್ಕಾರಕ್ಕೆ ವರದಿ ಒಪ್ಪಿಸಿ ಒಂದು ಎಕ್ಕರಿಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವುದರ ಮೂಲಕ ರೈತರಿಗೆ ನ್ಯಾಯ ಒದಗಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಎನ್ ಭರಮಣ್ಣ ಹಾಗೂ ಶ್ರೀಧರ ಎಸ್ ಒಡೆಯರ್ ತಾಲೂಕು ಅಧ್ಯಕ್ಷರು ಹಾಗೂ ಸಂಘದ ಸದಸ್ಯರುಗಳು ಹಾಗೂ ರೈತ ಮುಖಂಡರು ಗ್ರೇಡ್ 2 ತಹಸಿಲ್ದಾರರ ಮೂಲಕ ಮಾನ್ಯ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಕೊಲ್ಲೂರಪ್ಪ ಕಂದಗಲ್ಲು ಚೆನ್ನಪ್ಪ ಹನುಮನಹಳ್ಳಿ ಎಸ್ ಶರಣಯ್ಯ ಮಂಜಪ್ಪ ಚೌಡಪ್ಪ ಜಿ ನಾಗರಾಜ್ ಮತ್ತಿತರ ಉಪಸ್ಥಿತರಿದ್ದರು.

ಜಾಹೀರಾತು

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.