Breaking News

ಕರ್ನಾಟಕ ಸ್ಟೇಟ್ ಕ್ರಿಕಿಟ್ಅಸೊಸಿಯೇಷನ್ ಅವರಿಂದ ಇದೇ ಜೂನ್-೨೮ ಮತ್ತು ೨೯ ರಂದು ರಾಯಚೂರು ವಲಯದಲ್ಲಿ ಜಿಲ್ಲಾ ಮಟ್ಟಕ್ಕೆ ಕ್ರೀಡಾಟುಗಳ ಆಯ್ಕೆ.

The Karnataka State Cricket Association will select players for the district level in the Raichur region on June 28th and 29th

ಜಾಹೀರಾತು
WhatsApp Image 2025 06 23 At 13.32.10 Dc3857de

ಗಂಗಾವತಿ: ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೊಸಿಯೇಷನ್‌ವತಿಯಿಂದ ಇದೇ ಜೂನ್-೨೮ ಮತ್ತು ೨೯ ರಂದು ೧೬ ವರ್ಷದೊಳಗಿನ ಮತ್ತು ೧೯ ವರ್ಷದೊಳಗಿನ ಉತ್ತಮ ಆಟಗಾರರನ್ನು ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಿಕೊಳ್ಳಲಿದ್ದಾರೆ. ಆಸಕ್ತ ಉತ್ತಮ ಆಟಗಾರರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಗ್ರಾಮೀಣ ಭಾರತಿ ೯೦.೪ ಎಫ್.ಎಂ ರೇಡಿಯೋ ಕೇಂದ್ರದ ನಿಲಯ ನಿರ್ದೇಶಕರಾದ ರಾಘವೇಂದ್ರ ತೂನ ಪ್ರಕಟಣೆಯಲ್ಲಿ ತಿಳಿಸಿದರು.
ಜೂನ್-೨೮ ಶನಿವಾರ ೧೬ ವರ್ಷದೊಳಗಿನ ಮತ್ತು ಜೂನ್-೨೯ ಭಾನುವಾರ ೧೯ ವರ್ಷದೊಳಗಿನ ಉತ್ತಮ ಆಟಗಾರರ ಆಯ್ಕೆ ನಡೆಯಲಿದೆ. ಆಯ್ಕೆಯು ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ಆಸಕ್ತರು ರಾಯಚೂರಿನ ಮಂತ್ರಾಲಯ ರಸ್ತೆಯಲ್ಲಿರುವ ಕೆ.ಎಸ್.ಸಿ.ಎ ಕ್ರೀಡಾಂಗಣದಲ್ಲಿ ಭಾಗವಹಿಸಬಹುದಾಗಿದೆ. ಅದೇರೀತಿ ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಯವರು ಕಲಬುರ್ಗಿಯ ಎನ್.ವಿ ಮೈದಾನ, ಬೀದರ ಜಿಲ್ಲೆಯವರು ಬೀದರ್ ನೆಹರು ಸ್ಟೇಡಿಯಂ ಮೈದಾನ, ವಿಜಯಪುರ ಜಿಲ್ಲೆಯವರು ವಿಜಯಪುರದ ಬಿ.ಎಲ್.ಡಿ.ಎ ಮೈದಾನ, ಬಾಗಲಕೋಟೆ ಜಿಲ್ಲೆಯವರು ಬಾಗಲಕೋಟೆಯ ಬಿ.ವಿ.ವಿ.ಎಸ್ ಇಂಜಿನೀಯರಿAಗ್ ಕಾಲೇಜ್ ಕ್ಯಾಂಪಸ್‌ನಲ್ಲಿ ಭಾಗವಹಿಸಬಹುದಾಗಿದೆ.
ಆಸಕ್ತರು ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೊಸಿಯೇಷನ್ ಜಿಲ್ಲಾ ಶರಣ ರೆಡ್ಡಿ ಮೊ: ೭೮೯೨೦೬೩೪೭೦ (ರಾಯಚೂರು), ಚಂದ್ರಶೇಖರ ಎಂ. ಮೊ: ೯೪೪೮೬೩೩೭೪೮ (ಕೊಪ್ಪಳ), ಎನ್.ಎಂ. ಹುತಗಿ ಮೊ: ೯೪೪೮೬೭೮೨೮೦ (ವಿಜಯಪುರ), ಕೆ. ವಿಶ್ವನಾಥ ಮೊ: ೯೮೮೦೨೧೨೭೬೯ (ಕಲಬುರ್ಗಿ), ಕುಶಾಲ್ ಪಾಟೀಲ್ ಮೊ: ೯೪೪೮೪೭೬೮೮೯ (ಬೀದರ್) ಮತ್ತು ರವಿ ಮಾಗ್ದಮ್ ಮೊ: ೯೮೪೫೩೩೨೮೬೮ (ಬಾಗಲಕೋಟೆ) ಇವರುಗಳನ್ನು ಸಂಪರ್ಕಿಸಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ತಿಳಿಸಿದರು

About Mallikarjun

Check Also

screenshot 2025 10 09 18 37 46 40 e307a3f9df9f380ebaf106e1dc980bb6.jpg

ಕರ್ನಾಟಕ ಇತಿಹಾಸ ಅಕಾಡೆಮಿ ಪ್ರಶಸ್ತಿಗಳು ಪ್ರಕಟ, ಡಾ. ಶರಣಬಸಪ್ಪ ಕೋಲ್ಕಾರ ಸಂಶೋಧನಾ ಶ್ರೀ ಪ್ರಶಸ್ತಿ ಗೆ ಭಾಜನ  

Karnataka Itihasa Academy Awards announced, Dr. Sharanabasappa Kolkara Research Award conferred ಬೆಂಗಳೂರು:  ಕರ್ನಾಟಕ ಇತಿಹಾಸ ಅಕಾಡೆಮಿ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.