Breaking News

ಶ್ರೀ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ, ರೆಡ್ಡಿ ಸಮಾಜಕ್ಕೆ ತನ್ನದೇ ಆದ ಕೊಡುಗೆ ಇದೆ : ಶಾಸಕ ಕೆ.ನೇಮಿರಾಜ ನಾಯ್ಕ ,

Sri Mahasadhvi Hemareddy Mallamma has her own contribution to the Reddy society: MLA K. Nemiraja Nayak,

ಜಾಹೀರಾತು
Screenshot 2025 05 14 19 55 02 64 6012fa4d4ddec268fc5c7112cbb265e7 936x1024

ಕೊಟ್ಟೂರು : ಮಹಾಸಾದ್ವಿ ಹೇಮರೆಡ್ಡಿಮಲ್ಲಮ್ಮರ ೫೯೮ನೇ ಜಯಂತಿಯ ಅಂಗವಾಗಿ ಪಟ್ಟಣದ ಮರಿ ಕೊಟ್ಟೂರೆಶ್ವರ ದೇವಸ್ಥಾನದಿಂದ ಮೆರವಣಿಗೆ ಹೊರಟು ಎಪಿಎಂಸಿ ರಸ್ತೆಯ ಮೂಲಕ ಬಸ್‌ನಿಲ್ದಾಣ ಮುಂಬಾಗ, ತೇರು ಬೀದಿ, ರೇಣುಕ ರಸ್ತೆ, ಉಜ್ಜಿನಿ ಸರ್ಕಲ್ ಮೂಲಕ ಗಚ್ಚಿನ ಮಠ ತಲುಪಿತು, ಮೆರವಣಗೆಯಲ್ಲಿ ನಂದಿಕೋಲು, ಸಮಾಳ, ವಾದ್ಯಗಳ ನೀನಾದದೊಂದಿಗೆ ಬೆರಗು ಮೂಡಿತು.

Screenshot 2025 05 14 19 55 14 13 6012fa4d4ddec268fc5c7112cbb265e7


ಗಚ್ಚಿನಮಠದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಹಾಸಾಧ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮರ ೫೯೮ನೇ ಜಯಂತಿ ಅಂಗವಾಗಿ ಹಗರಿಬೊಮ್ಮನಹಳ್ಳಿ ಶಾಸಕ ಕೆ.ನೇಮಿರಾಜ ನಾಯ್ಕ , ಪರಮಪೂಜ್ಯರಾದ ಶ್ರೀ ವೇಮನಾನಂದ, ಹಾಗೂ ಯೋಗಿರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ, ಬುಧವಾರ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿದರು.
ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀಯುತ ಕೆ.ನೇಮಿರಾಜ ನಾಯ್ಕ್ ಇವರು ಮಾತನಾಡಿ ರೆಡ್ಡಿ ಸಮಾಜ ತನ್ನದೇ ಆದಂತ ಸಮಾಜ ಸೇವೆ ಹಾಗೂ ಒಳ್ಳೆಯ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದೆ ಮುಂದಿನ ದಿನಗಳಲ್ಲಿ ಈ ಸಮಾಜದ ಅಭಿವೃದ್ಧಿಗೋಸ್ಕರ ನಾನು ಸಹ ತಮ್ಮಲ್ಲಿ ಒಬ್ಬರಾಗಿ ಅಭಿವೃದ್ಧಿಗೆ ಕೈಜೋಡಿಸುವುದಾಗಿ ಭರವಸೆ ನೀಡಿದರು.
ಶ್ರೀ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮರ ೫೯೮ನೇ ಜಯಂತಿಯ ಅಂಗವಾಗಿ ಅತ್ಯಂತ ವಿಜೃಂಭಣೆಯಿAದ ಆಚರಿಸಲಾಯಿತು ಮತ್ತು ರೆಡ್ಡಿ ಸಮಾಜಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದ್ದಾರೆ ಎಂದು ಗೂಳಿ ಮಲ್ಲಿಕಾರ್ಜುನ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಂ ಎಂ ಜೆ ಹರ್ಷವರ್ಧನ್, ಕೊಟ್ಟೂರು ತಾಲೂಕು ರೆಡ್ಡಿ ಸಮಾಜದ ಅಧ್ಯಕ್ಷರಾದ ಭರಮರೆಡ್ಡಿ ಅಂಬಳಿ, ಹಾಗು ಮುಖಂಡರುಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.